ಭೇರ್ಯ ಮಹೇಶ್
ಸಾಗರಕಟ್ಟೆ-ಇಲವಾಲ ಸಂಪರ್ಕ ರಸ್ತೆ ಅವ್ಯವಸ್ಥೆಗೆ ಆಕ್ರೋಶ; ಸೋಲಾರ್ ದೀಪಗಳೂ ಕಳ್ಳರ ಪಾಲು
ಕೆ.ಆರ್.ನಗರ: ಕೆ.ಆರ್.ನಗರ- ಲಾಳಂದೇವನಹಳ್ಳಿ ಮಾರ್ಗದ ಸಾಗರಕಟ್ಟೆ- ಇಲವಾಲ ಸಂಪರ್ಕ ರಸ್ತೆ ಬಹಳಷ್ಟು ತಿರುವು ಗಳಿಂದ ಕೂಡಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದರೆ ಸಾಗರಕಟ್ಟೆ ಸೇತುವೆಯ ಸೋಲಾರ್ ವಿದ್ಯುತ್ ದೀಪಗಳು ಕಳ್ಳಕಾಕರ ಪಾಲಾಗಿದ್ದು, ೨-೩ ವರ್ಷಗಳಿಂದ ಇರುವ ದೀಪಗಳು ಕೆಟ್ಟುನಿಂತಿದ್ದು, ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಸಂಚರಿಸುವುದು ದುಸ್ತರವಾಗಿದೆ.
ಇಲವಾಲದಿಂದ ಸಾಗರಕಟ್ಟೆ ಮಾರ್ಗವಾಗಿ ಕೆ.ಆರ್.ನಗರ ಮತ್ತು ಹಾಸನ ಈ ಭಾಗಕ್ಕೆ ಸಂಪರ್ಕ ರಸ್ತೆಯನ್ನು ಹಲವು ವರ್ಷಗಳ ಹಿಂದೆ ಕೆ.ಆರ್.ಡಿ.ಸಿ.ಎಲ್.ನವರು ನಿರ್ಮಾಣ ಮಾಡಿದ್ದರು. ಆದರೆ ಸಾಗರಕಟ್ಟೆ ಸೇತುವೆಗೆ ಅಂದಾಜು ೫೦ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಸಂಬಂಧಪಟ್ಟ ಇಲಾಖೆ ಸರಿಯಾದ ನಿರ್ವಹಣೆ ಮಾಡದೇ ಕೆಟ್ಟು ನಿಂತ ಪರಿಣಾಮ ಸೋಲಾರ್ ವಿದ್ಯುತ್ ದೀಪವನ್ನು ಕಂಬದ ಸಮೇತ ಕಳ್ಳರು ಕದ್ದೊಯ್ದಿದ್ದಾರೆ.
ಸಾಗರಕಟ್ಟೆ ಸೇತುವೆ ರಸ್ತೆ ಸಂಪೂರ್ಣವಾಗಿ ಕತ್ತಲುಮಯವಾಗಿದೆ. ಇದರಿಂದಾಗಿ ವಾಹನ ಸವಾರರು ನಿತ್ಯ ರಾತ್ರಿ ವೇಳೆಯಲ್ಲಿ ಇಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಲಾಳಂದೇವನಹಳ್ಳಿಯಿಂದ ಸಾಗರಕಟ್ಟೆ ಮಾರ್ಗದವರೆಗೆ ಸಮರ್ಪಕವಾಗಿ ರಸ್ತೆ ಬದಿಯಲ್ಲಿ ಬೆಳೆದಿರುವ ಜಂಗಲ್ ತೆಗೆಯದ ಕಾರಣದಿಂದ ಒಂದಲ್ಲ ಒಂದು ಅಪಘಾತ ಸಂಭವಿ ಸುತ್ತಿದ್ದು, ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೆ.ಆರ್.ನಗರ, ಸಾಲಿಗ್ರಾಮ, ಹಾಸನದ ಕಡೆಗಳಿಂದ ಹೆಚ್ಚಾಗಿ ವಾಹನಗಳು ಸಾಗರಕಟ್ಟೆ ಸೇತುವೆಯ ಕೆ.ಆರ್.ಎಸ್. ಹಿನ್ನೀರಿನ ದೃಶ್ಯ ಕಣ್ತುಂಬಿ ಕೊಂಡು ಮೈಸೂರಿಗೆ ಪ್ರಯಾಣ ಮಾಡುತ್ತಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಕಾಡಿನ ರೀತಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ವಾಹನ ಸವಾರರಿಗೆ ತೊಂದರೆ ಯಾಗುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಇತ್ತ ಗಮನ ಹರಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
” ಇಲವಾಲದಿಂದ ಸಾಗರಕಟ್ಟೆ ಮಾರ್ಗವಾಗಿ ಕೆ.ಆರ್.ನಗರ ಮತ್ತು ಹಾಸನ ಕಡೆಗೆ ತೆರಳುವ ಸಂಪರ್ಕ ರಸ್ತೆಯನ್ನು ಮಾಜಿ ಸಚಿವರಾದ ಸಾ.ರಾ. ಮಹೇಶ್ರವರು ಅಭಿವೃದ್ಧಿಪಡಿಸಿದ್ದರು. ಕಳೆದ ೩ ವರ್ಷಗಳಿಂದ ಸಂಬಂಧಪಟ್ಟ ಇಲಾಖೆಯವರು ಸರಿಯಾಗಿ ನಿರ್ವಹಣೆ ಮಾಡದೆ, ಸೋಲಾರ್ ವಿದ್ಯುತ್ ದೀಪಗಳು ಕಳ್ಳರ ಪಾಲಾಗಿವೆ. ಸೋಲಾರ್ ದೀಪವನ್ನು ಮತ್ತೆ ಅಳವಡಿಸಿ ಸಾಗರಕಟ್ಟೆ ಸೇತುವೆಯ ಅಂದವನ್ನು ಹೆಚ್ಚಿಸಬೇಕು.”
-ಬಾಲಾಜಿ ಗಣೇಶ್, ಗ್ರಾ.ಪಂ. ಸದಸ್ಯ, ಲಾಳಂದೇವನಹಳ್ಳಿ
” ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದ ಮೈಸೂರಿಗೆ ಹೋಗುವ ಪ್ರವಾಸಿಗರು ಸಾಗರಕಟ್ಟೆ ಸೇತುವೆ ಹಿನ್ನೀರಿನ ದೃಶ್ಯ ವೀಕ್ಷಿಸಿ, ಸೆಲ್ಫಿ ತೆಗೆದುಕೊಂಡು ಮೈಸೂರಿಗೆ ಹೋಗು ತ್ತಾರೆ. ಸಾಗರಕಟ್ಟೆ ಸೇತುವೆ ಬಳಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಹಿನ್ನೀರಿನ ಅಂದ ಸವಿಯಲು ಸಂಬಂಧಪಟ್ಟ ಇಲಾಖೆಯವರು ಗಮನಹರಿಸಬೇಕು.”
-ಸಾತಿಗ್ರಾಮ ಶಂಕರ್, ವಾಹನ ಸವಾರರು
ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…
ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…
ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ…
ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ‘ಫಸ್ಟ್ , ಯು ಹ್ಯಾವ್ ಟು ಬಿಲೀವ್ ಇನ್ ಇಟ್, ದೆನ್…
ದಾ.ರಾ.ಮಹೇಶ್ ಹನಗೋಡು ಹೋಬಳಿ ರೈತರು ಬೆಳೆದ ಸಿಹಿಗುಂಬಳಕ್ಕೆ ದೊರೆಯದ ಮಾರುಕಟ್ಟೆ ವೀರನಹೊಸಹಳ್ಳಿ: ಜೋಳ, ಶುಂಠಿ, ಮತ್ತಿತರ ಸಾಂಪ್ರದಾಯಿಕ ಕೃಷಿ ಬಿಟ್ಟು…