Andolana originals

ರಸ್ತೆಯ ತಿರುವುಗಳಲ್ಲಿ ಗಿಡ-ಗಂಟಿಗಳ ಭರಾಟೆ!

ಭೇರ್ಯ ಮಹೇಶ್‌

ಸಾಗರಕಟ್ಟೆ-ಇಲವಾಲ ಸಂಪರ್ಕ ರಸ್ತೆ ಅವ್ಯವಸ್ಥೆಗೆ ಆಕ್ರೋಶ; ಸೋಲಾರ್ ದೀಪಗಳೂ ಕಳ್ಳರ ಪಾಲು

ಕೆ.ಆರ್.ನಗರ: ಕೆ.ಆರ್.ನಗರ- ಲಾಳಂದೇವನಹಳ್ಳಿ ಮಾರ್ಗದ ಸಾಗರಕಟ್ಟೆ- ಇಲವಾಲ ಸಂಪರ್ಕ ರಸ್ತೆ ಬಹಳಷ್ಟು ತಿರುವು ಗಳಿಂದ ಕೂಡಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದರೆ ಸಾಗರಕಟ್ಟೆ ಸೇತುವೆಯ ಸೋಲಾರ್ ವಿದ್ಯುತ್ ದೀಪಗಳು ಕಳ್ಳಕಾಕರ ಪಾಲಾಗಿದ್ದು, ೨-೩ ವರ್ಷಗಳಿಂದ ಇರುವ ದೀಪಗಳು ಕೆಟ್ಟುನಿಂತಿದ್ದು, ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಸಂಚರಿಸುವುದು ದುಸ್ತರವಾಗಿದೆ.

ಇಲವಾಲದಿಂದ ಸಾಗರಕಟ್ಟೆ ಮಾರ್ಗವಾಗಿ ಕೆ.ಆರ್.ನಗರ ಮತ್ತು ಹಾಸನ ಈ ಭಾಗಕ್ಕೆ ಸಂಪರ್ಕ ರಸ್ತೆಯನ್ನು ಹಲವು ವರ್ಷಗಳ ಹಿಂದೆ ಕೆ.ಆರ್.ಡಿ.ಸಿ.ಎಲ್.ನವರು ನಿರ್ಮಾಣ ಮಾಡಿದ್ದರು. ಆದರೆ ಸಾಗರಕಟ್ಟೆ ಸೇತುವೆಗೆ ಅಂದಾಜು ೫೦ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಸಂಬಂಧಪಟ್ಟ ಇಲಾಖೆ ಸರಿಯಾದ ನಿರ್ವಹಣೆ ಮಾಡದೇ ಕೆಟ್ಟು ನಿಂತ ಪರಿಣಾಮ ಸೋಲಾರ್ ವಿದ್ಯುತ್ ದೀಪವನ್ನು ಕಂಬದ ಸಮೇತ ಕಳ್ಳರು ಕದ್ದೊಯ್ದಿದ್ದಾರೆ.

ಸಾಗರಕಟ್ಟೆ ಸೇತುವೆ ರಸ್ತೆ ಸಂಪೂರ್ಣವಾಗಿ ಕತ್ತಲುಮಯವಾಗಿದೆ. ಇದರಿಂದಾಗಿ ವಾಹನ ಸವಾರರು ನಿತ್ಯ ರಾತ್ರಿ ವೇಳೆಯಲ್ಲಿ ಇಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಲಾಳಂದೇವನಹಳ್ಳಿಯಿಂದ ಸಾಗರಕಟ್ಟೆ ಮಾರ್ಗದವರೆಗೆ ಸಮರ್ಪಕವಾಗಿ ರಸ್ತೆ ಬದಿಯಲ್ಲಿ ಬೆಳೆದಿರುವ ಜಂಗಲ್ ತೆಗೆಯದ ಕಾರಣದಿಂದ ಒಂದಲ್ಲ ಒಂದು ಅಪಘಾತ ಸಂಭವಿ ಸುತ್ತಿದ್ದು, ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೆ.ಆರ್.ನಗರ, ಸಾಲಿಗ್ರಾಮ, ಹಾಸನದ ಕಡೆಗಳಿಂದ ಹೆಚ್ಚಾಗಿ ವಾಹನಗಳು ಸಾಗರಕಟ್ಟೆ ಸೇತುವೆಯ ಕೆ.ಆರ್.ಎಸ್. ಹಿನ್ನೀರಿನ ದೃಶ್ಯ ಕಣ್ತುಂಬಿ ಕೊಂಡು ಮೈಸೂರಿಗೆ ಪ್ರಯಾಣ ಮಾಡುತ್ತಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಕಾಡಿನ ರೀತಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ವಾಹನ ಸವಾರರಿಗೆ ತೊಂದರೆ ಯಾಗುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಇತ್ತ ಗಮನ ಹರಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

” ಇಲವಾಲದಿಂದ ಸಾಗರಕಟ್ಟೆ ಮಾರ್ಗವಾಗಿ ಕೆ.ಆರ್.ನಗರ ಮತ್ತು ಹಾಸನ ಕಡೆಗೆ ತೆರಳುವ ಸಂಪರ್ಕ ರಸ್ತೆಯನ್ನು ಮಾಜಿ ಸಚಿವರಾದ ಸಾ.ರಾ. ಮಹೇಶ್‌ರವರು ಅಭಿವೃದ್ಧಿಪಡಿಸಿದ್ದರು. ಕಳೆದ ೩ ವರ್ಷಗಳಿಂದ ಸಂಬಂಧಪಟ್ಟ ಇಲಾಖೆಯವರು ಸರಿಯಾಗಿ ನಿರ್ವಹಣೆ ಮಾಡದೆ, ಸೋಲಾರ್ ವಿದ್ಯುತ್ ದೀಪಗಳು ಕಳ್ಳರ ಪಾಲಾಗಿವೆ. ಸೋಲಾರ್ ದೀಪವನ್ನು ಮತ್ತೆ ಅಳವಡಿಸಿ ಸಾಗರಕಟ್ಟೆ ಸೇತುವೆಯ ಅಂದವನ್ನು ಹೆಚ್ಚಿಸಬೇಕು.”

-ಬಾಲಾಜಿ ಗಣೇಶ್, ಗ್ರಾ.ಪಂ. ಸದಸ್ಯ, ಲಾಳಂದೇವನಹಳ್ಳಿ

” ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದ ಮೈಸೂರಿಗೆ ಹೋಗುವ ಪ್ರವಾಸಿಗರು ಸಾಗರಕಟ್ಟೆ ಸೇತುವೆ ಹಿನ್ನೀರಿನ ದೃಶ್ಯ ವೀಕ್ಷಿಸಿ, ಸೆಲ್ಫಿ ತೆಗೆದುಕೊಂಡು ಮೈಸೂರಿಗೆ ಹೋಗು ತ್ತಾರೆ. ಸಾಗರಕಟ್ಟೆ ಸೇತುವೆ ಬಳಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಹಿನ್ನೀರಿನ ಅಂದ ಸವಿಯಲು ಸಂಬಂಧಪಟ್ಟ ಇಲಾಖೆಯವರು ಗಮನಹರಿಸಬೇಕು.”

-ಸಾತಿಗ್ರಾಮ ಶಂಕರ್, ವಾಹನ ಸವಾರರು

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

5 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

5 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

6 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

7 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

9 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

9 hours ago