Andolana originals

ಕುಂಚದಲ್ಲಿ ಅರಳಿದ ಅಮ್ಮನ ನಿತ್ಯ ಜೀವನ!

ಸಾಲೋಮನ್

ಕಲಾವಿದೆ ಅಭಿರಾಮಿ ಚಿತ್ರಿಸಿದ ಅಮ್ಮನ ಬದುಕುಬವಣೆ ಬಹುರೂಪಿಯಲ್ಲಿ ಅನಾವರಣ

ಮೈಸೂರು: ಈ ಜೀವ ಎಂದಿಗೂ ಮರೆಯಲೇ ಬಾರದ ಒಂದು ಸಂಬಂಧ ಹಾಗೂ ನೆನಪುಗಳೆಂದರೆ ಅದು ಅಮ್ಮನು ತಾನೇ. ಅಮ್ಮ ಎದೆ ತುಂಬಾ ಆವರಿಸಿಕೊಂಡಿರುತ್ತಾಳೆ. ಕೆಲವರು ಮಾತಿನ ಮೂಲಕ, ಮತ್ತೆ ಕೆಲವರು ತಮ್ಮ ಬರವಣಿಗೆಯ ಮೂಲಕ ಅಮ್ಮನ ಬಗ್ಗೆ ಹೇಳಿಕೊಂಡಿzರೆ. ಆದರೆ, ಇಲ್ಲೊಬ್ಬರು ಚಿತ್ರ ಕಲಾವಿದೆ ಇಡೀ ಗ್ಯಾಲರಿಯ ಗೋಡೆಗಳಲ್ಲಿ ತುಂಬಾ ಅಮ್ಮನ ನಿತ್ಯದ ಬದುಕು, ಬವಣೆ ಹಾಗೂ ನಿರ್ವಹಿಸುವ ಜವಾಬ್ದಾರಿಗಳನ್ನು ಚಿತ್ರಿಸಿದ್ದಾರೆ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಕಿರುರಂಗಮಂದಿರದ ಕಲಾಗ್ಯಾಲರಿಯಲ್ಲಿ ಮೈಸೂರಿನ ಕಾವಾದಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಅಭಿರಾಮಿ ರಾಜೇಂದ್ರ ಅವರು ‘ಕ್ರಿಯೇಟರ್’ ಎಂಬ ಪರಿಕಲ್ಪನೆಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿ ಸಿದ್ದು, ಗ್ಯಾಲರಿಯ ಗೋಡೆಗಳ ಮೇಲೆ ಕುಟುಂಬದಲ್ಲಿ ಅಮ್ಮ ನಿರ್ವಹಿಸುವ ಜವಾಬ್ದಾರಿಗಳನ್ನು ನೈಜವಾಗಿ ಚಿತ್ರಿಸಿದ್ದಾರೆ.

ಮುಂಜಾನೆಯಿಂದ ರಾತ್ರಿವರೆಗೂ ಮನೆಯ ಕೆಲಸಗಳೆಲ್ಲವನ್ನೂ ಮಾಡುವ ಅಮ್ಮನ ಸುಮಾರು ೩೦ಕ್ಕೂ ಹೆಚ್ಚು ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಬೆಳಿಗ್ಗೆ ಎದ್ದು ಒಲೆ ಮುಂದೆ ನಿಲ್ಲುವ ಅಮ್ಮ, ಬಟ್ಟೆ ಒಗೆದು ಒಣಗಿಸುವುದು, ಮನೆ ಸ್ವಚ್ಛ ಮಾಡುವುದು, ನೀರು ತುಂಬುವುದು, ತೋಟಕ್ಕೆ ನೀರು ಹಾಯಿಸುವುದು, ಅಡುಗೆ ಮಾಡುವುದು ಹೀಗೆ ನಿತ್ಯವೂ ಸಾಲು ಸಾಲು ಕೆಲಸಗಳನ್ನು ಮಾಡುವ ಚಿತ್ರಗಳನ್ನು ಬಿಡಿಸಿ ಅಮ್ಮನ ಕಾಯಕಕ್ಕೆ ಜೀವ ತುಂಬಿದ್ದಾರೆ.

ಮೂಲತಃ ಕೇರಳದ ಕೊಟ್ಟಾಯಂನ ಕಲಾವಿದೆ ಅಭಿರಾಮಿ ಅವರು ರಾಜೇಂದ್ರ-ಬಿಂದು ದಂಪತಿಯ ಮುದ್ದಿನ ಮಗಳು. ಈಕೆಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವ ಹವ್ಯಾಸ. ಅಕ್ಷರಕಲಿಯುವು ದಕ್ಕಿಂತ ನೋಟ್ ಪುಸ್ತಕದಲ್ಲಿ ಚಿತ್ರ ಬಿಡಿಸಿದ್ದೇ ಹೆಚ್ಚು. ಪಿಯುಸಿ ಮುಗಿದಾಗ ಚಿತ್ರಕಲೆಯ ಮುಂದುವರಿಯಬೇಕು ಎನಿಸಿ ದಾಗ ಮೈಸೂರಿನ ಕಾವಾಗೆ ಬಂದರು. ಈ ಬಾರಿ ಬಹು ರೂಪಿಯಲ್ಲಿ ಚಿತ್ರ ಪ್ರದರ್ಶನಕ್ಕೆ ಸಿಕ್ಕ ಅವಕಾಶದಲ್ಲಿ ಕುಟುಂಬದ ನಿರ್ವಹಣೆಯಲ್ಲಿ ಅಮ್ಮನ ಜವಾಬ್ದಾರಿ, ಸಂಕಷ್ಟ, ಸಂತೋಷ, ನೋವು, ನಲಿವುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

” ಅಮ್ಮ ಮದುವೆಗೂ ಮುಂಚೆ ಅಥ್ಲ್ಲೀಟ್ ಆಗಿದ್ದರು. ನಂತರ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಮದುವೆಯಾಗಿ ಮಕ್ಕಳಾದ ಮೇಲೆ ತನ್ನೆಲ್ಲ ಕನಸುಗಳನ್ನು ಬದಿಗಿಟ್ಟು ಸಂಸಾರದ ಜವಾಬ್ದಾರಿಯನ್ನುನಿರ್ವಹಿಸಿದ್ದಾರೆ. ಮನೆಯಲ್ಲಿರುವ ಮುದ್ದಿನ ನಾಯಿ, ಬೆಕ್ಕುಗಳು ಅಮ್ಮನಿಗೆ ಸಂಗಾತಿಗಳಾಗಿವೆ. ಗಂಡ – ಮಕ್ಕಳಿಗಾಗಿ ಅಮ್ಮ ದೊಡ್ಡ ಜವಾಬ್ದಾರಿ ನಿರ್ವಹಿಸುತ್ತಾರೆ.”

ಅಭಿರಾಮಿ ರಾಜೇಂದ್ರ, ಚಿತ್ರ ಕಲಾವಿದೆ

ಆಂದೋಲನ ಡೆಸ್ಕ್

Recent Posts

ಮಲಗಿದ್ದ ವೇಳೆ ಹೃದಯಾಘಾತ: ಆರೋಗ್ಯ ಇಲಾಖೆ ನೌಕರ ಸಾವು

ಹಾಸನ: ಹೃದಯಾಘಾತದಿಂದ ಆರೋಗ್ಯ ಇಲಾಖೆ ನೌಕರ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೇವಾನಂದ್‌ ಎಂಬುವವರೇ ಮೃತಪಟ್ಟ…

2 mins ago

ಉಡುತೊರೆ ಹಳ್ಳ ಜಲಾಶಯ ಕಾಮಗಾರಿಗೆ ಸಿಎಂ ಅನುಮೋದನೆ: ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಉಡುತೊರೆ ಹಳ್ಳ ಜಲಾಶಯ ಏತ ನೀರಾವರಿ ಯೋಜನೆ ಹಾಗೂ…

27 mins ago

ಮತ್ತೆ ಇರಾನ್‌ನ ನಾಲ್ಕು ತೈಲ ಘಟಕಗಳನ್ನು ಉಡೀಸ್‌ ಮಾಡಿದ ಅಮೇರಿಕಾ

ಟೆಹರಾನ್:‌ ಇರಾನ್‌ ಮೇಲೆ ಇಸ್ರೇಲ್‌ ಹಾಗೂ ಅಮೇರಿಕಾ ದಾಳಿ ಮುಂದುವರಿಸಿದ್ದು, ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಇರಾನ್‌ನ ಬೀದಿ ಬೀದಿಗಳಲ್ಲಿ ಬೆಂಕಿ…

46 mins ago

ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ನರಹಳ್ಳಿ ಜ್ಞಾನೇಶ್‌ ನಿಧನ

ಪಾಂಡವಪುರ: ಸ್ಯಾಂಡಲ್‌ವುಡ್‌ ನಿರ್ಮಾಪಕ, ನಿರ್ದೇಶಕ, ಸಂಕಲನಕಾರ ಹಾಗೂ ಸಂಘಟಕ ನರಹಳ್ಳಿ ಜ್ಞಾನೇಶ್ (೪೮) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಯನಿಮಿತ್ತ…

1 hour ago

ಜೆಡಿಯುಗೆ ಸೇರ್ಪಡೆಯಾದ ಬಿಹಾರ ಸಿಎಂ ನಿತೀಶ್‌ ಪುತ್ರ ನಿಶಾಂತ್ ಕುಮಾರ್‌

ಪಾಟ್ನಾ: ಬಿಹಾರ ಸಿಎಂ ನಿತೀಶ್‌ ಕುಮಾರ್‌ ಪುತ್ರ ನಿಶಾಂತ್‌ ಕುಮಾರ್‌ ಅವರಿಂದು ಪಾಟ್ನಾದ ಜೆಡಿಯು ಪಕ್ಷದ ಪ್ರಧಾನ ಕಚೇರಿಯಲ್ಲಿ ಜೆಡಿಯು…

1 hour ago

ಇರಾನ್-‌ಇಸ್ರೇಲ್‌ ಸಂಘರ್ಷ: ಬೆಂಗಳೂರಿನಲ್ಲಿ ಅಡುಗೆ ಎಣ್ಣೆ ದರ ಏರಿಕೆ

ಬೆಂಗಳೂರು: ಇರಾನ್‌ ಮೇಲೆ ಇಸ್ರೇಲ್‌, ಅಮೇರಿಕಾ ದಾಳಿ ನಡೆಸುತ್ತಿರುವ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಅದರ ಬಿಸಿ ರಾಜಧಾನಿ ಬೆಂಗಳೂರಿಗೆ…

1 hour ago