Andolana originals

ಪ್ರವಾಹಕ್ಕೆ ಎದುರಾಗಿ ಈಸಬೇಕು ಹೆಣ್ಣು

ಆತ್ಮ ಸಂಗಾತಿಗಳಿಗೆ,

ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ, ಆತ್ಯಾಚಾರ ಅಂತೇನಾದರೂ ಮಾತು ತೆಗೆದರೆ ಬೋರು ಹೊಡೆಯುವ ವಿಷಯವೆನಿಸುತ್ತದೆ. ‘ಹೀಗೇಕೆ ಆಯಿತೆಂದರೆ’ ಎಂದು ಆರಂಭವಾಗುವ ಪುರುಷ ಮನಸ್ಥಿತಿಯ ಕಾರಣಗಳು ಆಕೆಯ ಚಾರಿತ್ರ್ಯ ಮತ್ತು ತೊಡುವ ಬಟ್ಟೆಯ ಸುತ್ತಲ ಪರಿಧಿ ಬಿಟ್ಟು ಆಚೆ ಸರಿಯುವುದಿಲ್ಲ.

ನಾವೀಗ ಮುಂದುವರಿದಿದ್ದೇವೆ ಎಂದು ಹೇಳುತ್ತಿರುವಾಗಲೇ ಕಳೆದ ವರ್ಷ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಯ ದಂಧೆ ಬೆಳಕಿಗೆ ಬಂದಿದ್ದು ನೆನಪಿದೆ ತಾನೇ! ಸೀತೆ, ದೌಪದಿ, ಮಾಧವಿ, ನಂಗೇಲಿಯಂತಹ ಪುರಾಣ ಕಾಲದ ಸ್ತ್ರೀ ಪಾತ್ರಗಳ ಆದಿಯಾಗಿ ಅತ್ಯಾಚಾರ, ಮಾನಭಂಗದ ಜಾಲದಲ್ಲಿ ನಲುಗಿದ ಹೆಣ್ಣುಮಕ್ಕಳಿಗೆ ಯಾವ ಭರವಸೆ ಇದೆ ಹೇಳಿ? ಆಲ್ಲೊಬ್ಬ ಹೇಳಿದ್ದ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲವೆಂದರೆ ಅದನ್ನು ಅನುಭವಿಸಿ ಎಂದು. ‘ಹೆಣ್ಣಿನ ಬಾಳು ಬಾಳೆ ಎಲೆ ಇದ್ದಂತೆ’ ಎನ್ನುವ ಪದಪುಂಜ ವನ್ನು ಪದೇ ಪದೇ ಬಳಸಿ ಸವಕಲಾಗಿಸಿದ್ದರೂ, ಕರುಣಾ ಭಾವದಲ್ಲಿ ಈ ಪ್ರತಿಮೆಯನ್ನು ನೀಡಿ, ಹೆಣ್ಣಿನ ಸ್ವಭಾವವೇ ಮೃದು ಎಂಬ ರಬ್ಬರ್ ಸ್ಟಾಂಪ್ ಒತ್ತಿಯಾಗಿದೆ. ಗಮನಿಸಿ, ಹೆಣ್ಣು ಮಗುವಿದ್ದ ಮನೆಗೆ ಆಟಿಕೆಗಳನ್ನು ಕೊಡುವಾಗ ಬಾರ್ಬಿ ಡಾಲ್, ಟೆಡ್ಡಿಬೇರ್, ಇನ್ಯಾವುದೋ ಹುಡುಗಿಯ ಬೊಂಬೆಗಳನ್ನೇ ಖರೀದಿಸುತ್ತಾರೆ. ಈ ಹುಡುಗಿ ಆದರ ತಲೆ ಬಾಚಲಿ ಹೊಳಪು ಕಂಗಳಿಂದ, ಮಂದಹಾಸ ಬೀರುತ್ತಾ ಸುಮ್ಮನೆ ನೋಡುತ್ತಿರುತ್ತದೆ. ಸಿಟ್ಟಿನಲ್ಲಿ ಕೈ ಎತ್ತಲಿ, ಆಡುವ ಭರದಲ್ಲಿ ಕಾಲು ತುಂಡು ಮಾಡಿದರೂ ಬಾರ್ಬಿ ಗೊಂಬೆ ಮಾತ್ರ ನಗುತ್ತಿರುತ್ತದೆ.

ನಿಯಮಗಳನ್ನು ಹೆಣ್ಣಿಗೆ ಹೇರುವ ಮುನ್ನ ಕೊಂಚ ಯೋಚಿಸಬೇಕಿದೆ. ಕತ್ತಲು ಕವಿಯುವ ಮುನ್ನ ಮನೆಗೆ ಸೇರಬೇಕು. ಅದೇ ಗಂಡು ನಿಯಮದ ಬೇಲಿಯಾಚೆ, ಸರ್ವ ಸ್ವತಂತ್ರನಾಗಿ ಸಂಚರಿಸುತ್ತಿರುತ್ತಾನೆ. ಡಿಗ್ರಿ ಓದಿದ ಎಷ್ಟು ಹೆಣ್ಣು ಮಕ್ಕಳು ಮಾಸ್ಟರ್ಸ್ ಓದಬೇಕೆಂದು ಮುಂದುವರಿಯುತ್ತಾರೆ? ತನಗೆ ಸಿಗಬೇಕಾದ ಎಲ್ಲ ಸ್ಟಾಲರ್‌ ಶಿಪ್‌ಗಳನ್ನು ಪಡೆದು ಓದು ಮುಗಿಸುತ್ತೇನೆಂದು ಭರವಸೆ ನೀಡಿದ್ದರೂ ಹಳ್ಳಿ ಭಾಗದ ಬಹುತೇಕರು ತಮ್ಮ ಮನೆಯ ಅನನುಕೂಲತೆಯನ್ನು ಹೇಳಿ, ಓದು ಮುಂದುವರಿಸದಂತೆ ಭಾವನಾತ್ಮಕ ತಡೆಗೋಡೆಯನ್ನು ನಿರ್ಮಾಣ ಮಾಡಿಬಿಡುತ್ತಾರೆ. ತಾನು ಸಹನಾಮಯಿ, ಕ್ಷಮಯಾಧರಿತ್ರಿಯಂತಹ ಗುಣಗಳನ್ನು ಹೊಂದಿದವಳು ಎಂಬುದನ್ನು ಬಾಯಿಪಾಠದಂತೆ ಕಲಿತ ಹೆಣ್ಣು ತನ್ನ ಓದನ್ನು ನಿರಾಕರಿಸಿ, ‘ಒಳ್ಳೆಯತನ’ದಿಂದ ಒಂದೋ ಮದುವೆಯಾಗುತ್ತಾಳೆ, ಇಲ್ಲ ಯಾವುದಾದರೂ ಅಂಗಡಿಯಲ್ಲಿ ಕೆಲಸ ಹಿಡಿಯುತ್ತಾಳೆ. ಇದು ‘ಬದಲಾಗಿದೆ’ ಎಂಬ ಬೊಬ್ಬಿಡುವ ಸಮಾಜದ ಬದಲೇ ಆಗದ ಸ್ಥಿತಿ. ‘ಹೆಣ್ಣೆಂದರೆ?’ ಎಂಬ ಪ್ರಶ್ನೆಗೆ ತಾಳ್ಮೆ, ಸೌಮ್ಯ, ನಾಚಿಕೆ ಸೇರಿದಂತೆ ಈ ರೀತಿಯ ಅನೇಕ ಗುಣಗಳ ಮೂರ್ತರೂಪ ಎಂಬ ಸಿದ್ಧ ಉತ್ತರವಿದೆ. ಅದೇ ‘ಗಂಡೆಂದರೆ?’ ಎಂಬ ಪ್ರಶ್ನೆಗೆ ಮೀಸೆ ತಿರುವುತ್ತಾ, ತೊಡೆ ತಟ್ಟುತ್ತಾ, ಗಾಂಭೀರ್ಯ, ಧೈರ್ಯ ಹೆಣ್ಣಿಗೆ ಯಾವ ಯಾವ ಗುಣಗಳನ್ನು ಪಟ್ಟಿ ಮಾಡಲಾಗಿತ್ತೋ ಅದರ ವಿರುದ್ಧ ಪದಗಳನ್ನು ಸೇರಿಸಿಬಿಡುತ್ತೇವೆ. ಅದಕ್ಕಾಗಿಯೇ ಹೆಣ್ಣು ಈ ಗುಣಭೇದಗಳನ್ನು ಮೀರಿ, ಸ್ಥಾಪಿತ ಮೌಲ್ಯಗಳನ್ನು ಧಿಕ್ಕರಿಸಿದಳೆಂದರೆ ಪುರುಷ ಸಮಾಜ ಸುಮ್ಮನಾಗುತ್ತದೆಯೇ? ಹೆಣ್ಣನ್ನು ನಗ್ನಗೊಳಿಸಿ ಹೊಡೆಯಲಾಗುತ್ತದೆ, ಊರತುಂಬ ಮೆರವಣಿಗೆ ಮಾಡಲಾಗುತ್ತದೆ, ಶೀಲತ್ವದಿಂದ ಉಚ್ಚಾಟನೆ ಮಾಡಲಾಗುತ್ತದೆ, ಗಂಡಿಗೆ ಸರಿಸಮವಾಗಿ ನಿಂತುಬಿಟ್ಟರೆ ಅತ್ಯಾಚಾರ ಎಸಗಲಾಗುತ್ತದೆ, ಅವಳೇ ಆತ್ಮಹತ್ಯೆಗೆ ಶರಣಾದಳೆಂದು ಸುದ್ದಿ ಹಬ್ಬಿಸಿ, ಸಾಯಿಸಲಾಗುತ್ತದೆ.

ಗಂಡಿಗೆ ಮನೆಗೆಲಸ ಕಲಿಸಿ, ಬೆಳೆಸುವುದರೊಂದಿಗೆ ಹೆಣ್ಣಿನ ಕುರಿತ ಆತನ ನೋಟಕ್ರಮಗಳನ್ನು ಬದಲಿಸಲು ನಿರಂತರ ಒತ್ತಾಯಿಸಲಾಗುತ್ತಿದೆ. ಬಾಯಿ ತೆರೆಯಲು ಹೆದರುತ್ತಿದ್ದವರೆಲ್ಲ, ಕೊಂಚವಾದರೂ ದನಿಗೂಡಿಸುತ್ತಿದ್ದಾರೆ. ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಲು, ಪ್ರತಿಭಟಿಸಲು ಹೆಣ್ಣು ಮುಂದಾಗುತ್ತಿದ್ದಾಳೆ. ವ್ಯವಸ್ಥೆಯ ಪ್ರವಾಹದೊಳಗೆ ಕಸಕಡ್ಡಿಗಳಾಗಿ ತೂರಿಕೊಳ್ಳಬೇಕು ಎಂದು ಜಗತ್ತು ಬೋಧಿಸಿದಷ್ಟೂ, ಹೆಣ್ಣು ಪ್ರವಾಹಕ್ಕೆ ಇದಿರಾಗಿ ಸಾಗುತ್ತೇನೆಂದು ಜೀವಂತ ಮತ್ಯವಾಗುತ್ತಿದ್ದಾಳೆ.

‘ಸ್ರಾವ ನಿಂತರೂ ಹೆಣ್ಣು ಹೆಣ್ಣೆ ನಾವೇನೋ ಹೇಗೋ ಸವೆಸುವೆವು ಕಾಲ ಆದರೆ? ಆಪ್‌ಕಾ ಕ್ಯಾ ಹೋಗಾ ಜನಾಬೇ ಅಲೀ?’

ನಿಮ್ಮ ವಿಶ್ವಾಸಿ, ಕೀರ್ತಿ ಬೈಂದೂರು

ಆಂದೋಲನ ಡೆಸ್ಕ್

Recent Posts

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

11 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

11 hours ago

ಉನ್ನಾವೊ ಪ್ರಕರಣ : ಸೆಂಗರ್‌ ಶಿಕ್ಷೆ ಅಮಾನತು ; ಸಂತ್ರಸ್ತೆ ತಾಯಿ ಹೇಳಿದಿಷ್ಟು?

ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…

11 hours ago

ಚಂದನವನದಲ್ಲಿ ಸ್ಟಾರ್‌ ವಾರ್‌ : ನಟಿ ರಕ್ಷಿತಾ ಪ್ರೇಮ್‌ ಹೇಳಿದಿಷ್ಟು?

ಬೆಂಗಳೂರು : ಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಹೇಳಿದ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…

12 hours ago

ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್

ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…

12 hours ago

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ; ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…

12 hours ago