Andolana originals

ಭೋಜನ ಪ್ರಿಯರನ್ನು ಸೆಳೆವ ‘ಆಹಾ’ರ ಮೇಳ!

ಕೆ.ಎಂ.ಅನುಚೇತನ್

ಮೈಸೂರು: ಬಗೆ ಬಗೆಯ ಊಟ, ತಿಂಡಿಗಳ ಆಕರ್ಷಣೆ… ಹಸಿವನ್ನು ಇಮ್ಮಡಿಸುವ ಖಾದ್ಯಗಳ ಘಮಲು… ಸಸ್ಯಾಹಾರ, ಮಾಂಸಾಹಾರ ಸೇರಿದಂತೆ ಸ್ನ್ಯಾಕ್ಸ್, ಚಾಟ್‌ಗಳು, ಬೇಕರಿ ತಿನಿಸುಗಳ, ಭೋಜನಪ್ರಿಯರ ಬಾಯಲ್ಲಿ ನೀರೂರಿಸುವ ರಸದೌತಣ…

ಇವು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಮೊದಲ ದಿನವಾದ ಸೋಮವಾರ ಕಂಡುಬಂದ ದೃಶ್ಯಾವಳಿಗಳು. ಪ್ರತಿವರ್ಷದಂತೆ ಸಾರ್ವ ಜನಿಕರಿಗಾಗಿ ವಿಧವಿಧವಾದ ಆಹಾರವನ್ನು ಒಂದೆಡೆ ಸವಿಯಲು ಆಹಾರ ಮೇಳ ಆಯೋಜಿಸಿದ್ದು, ೧೫೮ ಆಹಾರ ಮಳಿಗೆಗಳಿವೆ. ಮೊದಲ ದಿನವೇ ಅಪಾರ ಜನಸ್ತೋಮ ಆಹಾರ ಮೇಳಕ್ಕೆ ಭೇಟಿ ನೀಡಿ, ತಿಂಡಿ, ಊಟ ಸವಿದು ಸಂಭ್ರಮಿಸಿದರು.

ಹೊರ ರಾಜ್ಯದ ಆಹಾರ: ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿ, ಮೇಲುಕೋಟೆ ಪುಳಿಯೋಗರೆ ಸೇರಿದಂತೆ ವಿವಿಧ ಬಗೆಯ ಆಹಾರಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ. ಇದರ ಜೊತೆಗೆ ಹೊರ ರಾಜ್ಯಗಳ ತಿಂಡಿ, ತಿನಿಸುಗಳು ಮೇಳದಲ್ಲಿ ಜನರನ್ನು ಆಕರ್ಷಿಸುತ್ತಿವೆ. ರಾಜಸ್ಥಾನಿ ಫುಡ್, ಮಧುರೈ ಫುಡ್, ಮಲೈ ರೋಟಿ, ಪಡ್ಡಿಂಗ್ಸ್ ನಂತಹ ಖಾದ್ಯಗಳು ಈ ಬಾರಿ ಆಹಾರ ಮೇಳದಲ್ಲಿ ಇವೆ. ಇದೇ ಮೊದಲ ಬಾರಿಗೆ ೭೦ ಮಂದಿ ಹೊಸಬರಿಗೆ ಮಳಿಗೆ ನೀಡಲಾಗಿದೆ. ಅಲ್ಲದೆ, ಲಸ್ಸಿ, ಮನೆಯಲ್ಲಿ ತಯಾರಿಸಿದ ಸಿಹಿ ಖಾದ್ಯಗಳು, ಐಸ್‌ಕ್ರೀಂ, ಡ್ರೈಫ್ರೂಟ್ಸ್, ಗೋಕಾಕ್‌ನ ಕರದಂಟು, ಬೆಳಗಾವಿ ಕುಂದಾ, ಧಾರವಾಡ ಪೇಡಾ, ಚಿಕ್ಕಮಗಳೂರಿನ ದೇಸಿ ಗಿಣ್ಣು, ಬೆಲ್ಲದ ಗಿಣ್ಣು, ದಾವಣಗೆರೆ ರೊಟ್ಟಿ, ವಿಶೇಷವಾಗಿ ಸಿರಿಧಾನ್ಯದ ಪಿಜ್ಜಾ, ಪಾಸ್ತಾ, ಮಿಲ್ಕ್ ಶೇಕ್, ಸಿಹಿ ತಿನಿಸು, ಉತ್ತರ ಕರ್ನಾಟಕ ಆಹಾರ, ಮುಳಬಾಗಿಲು ದೋಸೆ ಮುಂತಾದ ತಿಂಡಿತಿನಿಸುಗಳು ಇಲ್ಲಿ ಮೇಳೈಸಿವೆ.

ಪುಳಿಯೊಗರೆ, ಪೊಂಗಲ್ ಸವಿದ ಸಿಎಂ!:  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಸಭಾ ಕಾರ್ಯಕ್ರಮಕ್ಕೂ ಮೊದಲು ಮೇಲುಕೋಟೆ ಪುಳಿಯೋಗರೆ ಮಳಿಗೆಗೆ ಭೇಟಿ ನೀಡಿ, ಟೇಪ್ ಕತ್ತರಿಸಿ ಉದ್ಘಾಟಿಸಿದರು. ಅಲ್ಲದೆ, ಪುಳಿಯೋಗರೆ, ಮೊಸರನ್ನ ಹಾಗೂ ಖಾರ ಪೊಂಗಲ್      ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

” ಆಹಾರ ಮೇಳದಲ್ಲಿ ೧೫೦ಕ್ಕೂ ಹೆಚ್ಚಿನ ಆಹಾರ ಮಳಿಗೆಗಳಿದ್ದು, ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ವಿಧವಿಧವಾದ ಆಹಾರಗಳು ಹೆಚ್ಚು ಜನರನ್ನು ಆಕರ್ಷಿಸಲಿವೆ. ರಾಜ್ಯದಲ್ಲಿ ನಿತ್ಯ ೯೦ ಸಾವಿರ ಕೋಟಿ ರೂ.ಗಳಷ್ಟು ತಯಾರಾದ ಆಹಾರ ವ್ಯರ್ಥವಾಗುತ್ತಿದೆ. ಇದನ್ನು ನಿಯಂತ್ರಿಸಲು ಮುಂದಿನ ದಿನಗಳಲ್ಲಿ ಆಹಾರ ವ್ಯರ್ಥ ಮಾಡದಂತೆ ಕಾರ್ಯಕ್ರಮವೊಂದನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ.”

ಕೆ.ಎಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ

ಆಂದೋಲನ ಡೆಸ್ಕ್

Recent Posts

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

3 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

3 hours ago

ಓದುಗರ ಪತ್ರ | ತಂಬಾಕುಯುಕ್ತ ದಂತ ಉತ್ಪನ್ನಗಳನ್ನು ನಿಷೇಧಿಸಿ

ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…

3 hours ago

ಓದುಗರ ಪತ್ರ | ರಸ್ತೆಯಲ್ಲಿ ವಾಯುವಿಹಾರ ಅಪಾಯಕಾರಿ

ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…

3 hours ago

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ : ಉನ್ನತ ಶಿಕ್ಷಣದಲ್ಲಿ ಬದಲಾವಣೆಗೆ ಕೇಂದ್ರದ ಮುನ್ನುಡಿ

ಆಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ ಡಿಎ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ…

3 hours ago

ಬೈಕ್‌ಗೆ ಲಾರಿ ಡಿಕ್ಕಿ : ಸವಾರ ಸಾವು, ಮತ್ತೊರ್ವ ಗಂಭೀರ

ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ…

3 hours ago