Andolana originals

ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮದ ಕ್ರಿಸ್ ಮಸ್

ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ಎಲ್ಲ ಚರ್ಚ್‌ಗಳಲ್ಲೂ ಆಚರಣೆ; ಪರಸ್ಪರ ಶುಭಾಶಯ ವಿನಿಮಯ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಕ್ರೈಸ್ತರು ವಿಶೇಷ ಖಾದ್ಯ ತಯಾರಿಸಿ ಸವಿದರು. ಬಗೆ ಬಗೆಯ ಕೇಕ್‌ಗಳನ್ನು ತಯಾರಿಸಿ ಹಂಚಿದರು.

ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಸೇರಿ ದಂತೆ ನಗರದ ಎಲ್ಲ ಚರ್ಚ್‌ಗಳಲ್ಲಿ ಯೇಸುವಿನ ಸ್ಮರಣೆ ಮಾಡಲಾಯಿತು. ಮಾಗಿಯ ಚಳಿಯಲ್ಲೂ ಕ್ರೈಸ್ತರು ಮಂಗಳವಾರ ಮಧ್ಯರಾತ್ರಿ ಚರ್ಚ್‌ಗಳಿಗೆ ತೆರಳಿ ತಮ್ಮ ಆರಾಧ್ಯ ದೈವ ಯೇಸುವಿಗೆ ಪ್ರಾರ್ಥನೆ ಸಲ್ಲಿಸಿದರು.

ಬುಧವಾರ ಮಧ್ಯರಾತ್ರಿ ೧೨ ಗಂಟೆ(ಡಿ. ೨೫)ಗೆ ಕ್ರೈಸ್ತ ಸಮುದಾಯದವರೊಟ್ಟಿಗೆ ಅನ್ಯ ಧರ್ಮೀ ಯರೂ ಚರ್ಚ್‌ಗೆ ಭೇಟಿ ನೀಡಿ ಕ್ರಿಸ್‌ಮಸ್ ಆಚರ ಣೆಯಲ್ಲಿ ಭಾಗಿಯಾಗುವ ಮೂಲಕ ಸಾಮರಸ್ಯ ಮೆರೆದರು. ಹೂವು-ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಚರ್ಚ್‌ನ ಸೊಬಗನ್ನು ಕಣ್ತುಂಬಿಕೊಂಡರು. ಮಧ್ಯರಾತ್ರಿ ೧೨ ಗಂಟೆಗೆ ಶ್ವೇತ ವಸ್ತ್ರಧಾರಿ ಮೈಸೂರು ಪ್ರಾಂತ್ಯದ ಡಾ. ಬರ್ನಾರ್ಡ್ ಮೊರಾಸ್ ಅವರು ಚರ್ಚ್‌ನ ಪರಿವಾರ, ಛತ್ರಿ ಚಾಮರಗಳ ಹಿಮ್ಮೇಳ ಸಹಿತ ಮೆರವಣಿಗೆಯೊಂದಿಗೆ ಬಾಲ ಯೇಸುವಿನ ಪುಟ್ಟ ಮೂರ್ತಿಯನ್ನು ತಂದು ಗೋದಲಿಯಲ್ಲಿ ಮಲಗಿಸಿ, ನಮಿಸುತ್ತಿದ್ದಂತೆ ಕ್ರಿಸ್ ಮಸ್ ಸಂಭ್ರಮ ಇಮ್ಮಡಿಗೊಂಡಿತು. ಬಾಲ ಯೇಸುವನ್ನು ಹೊತ್ತು ತರುವ ಸಂದರ್ಭದಲ್ಲಿ ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದವರು ದೇವರ ಪಾದ ಮುಟ್ಟಿ ನಮಸ್ಕರಿಸಿದರು.

ಎಲ್ಲೆಡೆ ಅರ್ಥ ಪೂರ್ಣ ಆಚರಣೆ
ಕ್ರೈಸ್ತ ಸಮುದಾಯದವರು ಚರ್ಚ್‌ಗಳ ಜತೆಗೆ ತಮ್ಮ ಮನೆಗಳನ್ನೂ ಸಿಂಗರಿಸಿಕೊಂಡು ಯೇಸುವಿನ ಜಪ ಮಾಡಿದರು. ಶಾಂತಿ, ಪ್ರೀತಿ, ಸಹನೆ, ಕ್ಷಮೆಯನ್ನು ಸಾರಿದ ಯೇಸು, ಎಲ್ಲರ ಮನೆ-ಮನಗಳನ್ನು ಬೆಳಗಲಿ ಎಂದು ನಕ್ಷತ್ರ ಪ್ರತಿಕೃತಿಗಳನ್ನು ತಮ್ಮ ಮನೆಗಳ ಮುಂದೆ ಅಳವಡಿಸಿದ್ದರು. ಹೊಸ ಉಡುಪುಗಳನ್ನು ಧರಿಸಿ ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ವಿವಿಧೆಡೆ ಆಚರಣೆ
ನಗರದ ಬೆಂಗಳೂರು-ಮೈಸೂರು ರಸ್ತೆಯ ವೆಸ್ಲಿ ಚರ್ಚ್, ಸಂತ ಬಾರ್ಥ ಲೋಮಿಯೋ ಚರ್ಚ್, ಹಿನಕಲ್‌ನ ಇನ್‌ಫ್ಯಾಂಟ್ ಜೀಸಸ್ ಚರ್ಚ್, ಲಕ್ಷ್ಮಿಪುರಂನ ಹಾರ್ಡ್ವಿಕ್ ಚರ್ಚ್, ರಾಮಕೃಷ್ಣ ನಗರದ ಯೇಸು ಕೃಪಾ ಲಯ ಚರ್ಚ್ ಸೇರಿದಂತೆ ನಗರದ ಎಲ್ಲ ಕ್ರೈಸ್ತ ದೇವಾಲಯಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಸಡಗರ ಹೆಚ್ಚಿತ್ತು. ಎಲ್ಲ ಕ್ರೈಸ್ತ ದೇವಾಲಯಗಳಲ್ಲಿ ಯೇಸು ಸ್ಮರಣೆ ಮಾಡಲಾಯಿತು.

 

ಆಂದೋಲನ ಡೆಸ್ಕ್

Recent Posts

ಉಸಿರು ಚೆಲ್ಲಿದ ದುಬಾರೆಯ ಮಾರ್ತಾಂಡ ಆನೆ

ಕೊಡಗು: ಜಿಲ್ಲೆಯ ಕುಶಾಲನಗರದ ದುಬಾರೆ ಆನೆ ಶಿಬಿರದಲ್ಲಿ ಸ್ನಾನ ಮಾಡುವ ವೇಳೆ ಕಂಜನ್‌ ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ…

45 mins ago

ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್‌ ಬ್ರೇಕ್

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಸಾರಿಗೆ ಸಂಘಟನೆಗಳು ಮೇ.20ರಂದು ಕರೆ ನೀಡಿದ್ದ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ಅಂಕುಶ ಹಾಕಿದೆ.…

1 hour ago

ನಾಳೆ ರಾಜ್ಯಾದ್ಯಂತ ಮೆಡಿಕಲ್‌ ಶಾಪ್‌ಗಳು ಬಂದ್‌

ಬೆಂಗಳೂರು: ಆನ್‌ಲೈನ್‌ ಮೂಲಕ ಔಷಧಿಗಳ ಖರೀದಿ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ನಾಳೆ ರಾಜ್ಯದಾದ್ಯಂತ ಮೆಡಿಕಲ್‌ ಶಾಪ್‌ಗಳು ಬಂದ್‌ ಆಗಲಿವೆ. ಅಖಿಲ…

2 hours ago

ಓದುಗರ ಪತ್ರ: ನೀಟು…. ಘಾಟು !

ನೀಟು.... ಘಾಟು ! ಆಗ, ಎಷ್ಟೊಂದು ಶಿಸ್ತು, ಕ್ರಮವಾಗಿ ನಡೆಯುತ್ತಿತ್ತು? ಪರೀಕ್ಷೆ “ ನೀಟ್ “! ಈಗ, ಇದಕ್ಕೂ ಅಂಟಿಬಿಟ್ಟಿತಲ್ಲ…

3 hours ago

ಓದುಗರ ಪತ್ರ: ಸಾರಿಗೆ ನಿಗಮದ ಬಸ್‌ಗಳಲ್ಲಿ ಮೊಬೈಲ್ ಹಾವಳಿ ತಡೆಗಟ್ಟಿ

ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಮೊಬೈಲ್ ಉಪಯೋಗಿಸಬಾರದೆಂದು ನಿಯಮವನ್ನು ಜಾರಿಗೆ ತಂದು ಎರಡು ವರ್ಷಗಳೇ…

3 hours ago

ಓದುಗರ ಪತ್ರ: ಶಾಲಾ ವಾಹನ ಮಾಸಿಕ ಶುಲ್ಕ ಏರಿಕೆ ತಡೆಗೆ ಕ್ರಮ ಅಗತ್ಯ

ಡೀಸೆಲ್ ಬೆಲೆ ಏರಿಕೆ, ಬಿಡಿಭಾಗಗಳ ದುಬಾರಿ ವೆಚ್ಚ ಮತ್ತು ವಿಮೆ, ತೆರಿಗೆಗಳ ಹೆಚ್ಚಳದಿಂದಾಗಿ ಖಾಸಗಿ ಶಾಲಾ ವಾಹನಗಳ ಮಾಸಿಕ ಶುಲ್ಕವನ್ನು…

4 hours ago