Andolana originals

ಕಾಡುಪ್ರಾಣಿಗಳಿಗೆ ಪ್ರತಿನಿತ್ಯ ಒಂದು ಹಸು ಬಲಿ!

ಶನಿವಾರ, ಭಾನುವಾರ, ಸೋಮವಾರವೂ ಬಲಿ; ಹುಲಿ ದಾಳಿ ಎಂದು ಬಿಸಲವಾಡಿ, ಸಾಗಡೆ ಗ್ರಾಮಗಳ ರೈತರ ಆರೋ

ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿ ಸುತ್ತಮುತ್ತ ಶನಿವಾರ, ಭಾನುವಾರ, ಸೋಮವಾರ ದಿನಕ್ಕೊಂದು ಹಸು ಅಥವಾ ಕರು ಕಾಡುಪ್ರಾಣಿಗಳ ದಾಳಿಗೆ ಬಲಿಯಾಗಿದ್ದು, ಘಟನಾ ಸ್ಥಳದಲ್ಲಿನ ಕುರುಹು ಹಾಗೂ ದನಗಾಹಿಗಳು ಹೇಳುವ ಪ್ರಕಾರ ಇದು ಹುಲಿಯೇ ನಡೆಸಿರುವ ದಾಳಿಯಾಗಿದೆ.

ಬಿಸಲವಾಡಿ ಚನ್ನಬಸಪ್ಪ ಅವರಿಗೆ ಸೇರಿದ ೨೦ ದಿನಗಳ ಕರುವನ್ನು ಸೋಮವಾರ ಬೆಳಗಿನ ಜಾವ ಕೊಟ್ಟಿಗೆಯಿಂದ ಎತ್ತಿಕೊಂಡು ಹೋಗಿದ್ದು, ಸ್ಥಳದಲ್ಲಿ ಮೂಡಿರುವ ಹೆಜ್ಜೆ ಗುರುತಿನ ಪ್ರಕಾರ ಇದು ಹುಲಿ ದಾಳಿ ಎಂದು ಗೊತ್ತಾಗಿದೆ. ಚನ್ನಬಸಪ್ಪ ಅವರ ತೋಟದ ಮನೆ ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿದ್ದು ಮನೆ ಮುಂದಿನ ಕೊಟ್ಟಿಗೆಯಲ್ಲಿ ೧೦ ರಾಸು, ದನಕರುಗಳನ್ನು ಕಟ್ಟಿದ್ದಾರೆ. ಗೇಟಿನ ಸಂದಿಯಿಂದ ಬಂದು ಕರುವನ್ನು ಎತ್ತಿಕೊಂಡು ಹೋಗಿದೆ. ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹುಡುಕಾಟ ನಡೆಸಿದರೂ ಕರುವಿನ ಕಳೇಬರದ ಸಣ್ಣ ತುಣುಕು ಕೂಡ ಪತ್ತೆಯಾಗಿಲ್ಲ.

ಇದನ್ನು ಓದಿ: ಇದ್ದೂ ಇಲ್ಲದಂತಿರುವ ಟರ್ಷಿಯರಿ ಕ್ಯಾನ್ಸರ್‌ ಕೇರ್‌ 

ಇನ್ನು ಭಾನುವಾರ, ಸಾಗಡೆ ಗ್ರಾಮದ ಊರ ಹೊರಗಿನ ಬಯಲಿನಲ್ಲಿ ಮೇಯುತ್ತಿದ್ದ ಹತ್ತಾರು ಜಾನುವಾರು, ಕುರಿ, ಮೇಕೆಗಳ ಮಧ್ಯದಲ್ಲಿಯೇ ನೋಡನೋಡುತ್ತಿದ್ದಂತೆ ಹುಲಿ ಪ್ರತ್ಯಕ್ಷವಾಗಿ ಮೇಯುತ್ತಿದ್ದ ಹಸುವನ್ನು ಕೊಂದಿದೆ. ಗ್ರಾಮದ ಹೋಟೆಲ್ ಬಸವಣ್ಣ ಅವರ ಪುತ್ರಿ ನಾಗೇಶ್ವರಿ ಅವರಿಗೆ ಸೇರಿದ ಹಸುವನ್ನು ಹುಲಿ ಹಿಡಿದು ಸನಿಹವೇಬೆಳೆದುನಿಂತಿರುವ ಗಿಡಗಂಟಿಯ ಗುತ್ತಿಯ ಒಳಗಡೆ ಎಳೆದೊಯ್ದಿದೆ.

ದನಗಾಹಿಗಳಾದ ಹೋಟೆಲ್ ಬಸವಣ್ಣ, ಸಿದ್ದನಾಯ್ಕ, ಕಾಯಕನಾಯಕ ಎಂಬವರು ಕೂಗಾಡಿ ಗದರಿಸಲಾಗಿ ಹಸುವಿನ ಕುತ್ತಿಗೆ ಹಿಡಿದಿದ್ದ ಹುಲಿ ಬಿಟ್ಟುಹೋಗಿದೆ. ಅರೆಬರೆ ಜೀವ ಇದ್ದ ಹಸು ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದೆ. ಗರ್ಭಧರಿಸಿದ್ದ ಈ ಹಸು ಸುಮಾರು ೫೦ ಸಾವಿರ ರೂ. ಬೆಲೆಬಾಳುತ್ತಿತ್ತು ಎಂದು ಹಸುವಿನ ಮಾಲೀಕ ರಾದ ನಾಗೇಶ್ವರಿ ತಿಳಿಸಿದ್ದಾರೆ.

ತಿಂಗಳ ಹಿಂದೆ ಕಲ್ಪುರ ಗ್ರಾಮದ ಸುತ್ತಮುತ್ತ ಹುಲಿ ದಾಳಿಗೆ ಹಸುಗಳು ಮೇಲಿಂದ ಮೇಲೆ ಬಲಿಯಾಗಿದ್ದವು. ಅದರ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ವಾಕ್‌ಥ್ರೋ ಬೋನು ಇರಿಸಿ ವ್ಯಾಪಕವಾಗಿ ಕೂಂಬಿಂಗ್ ನಡೆಸಿದ್ದರು. ಆದರೆ ಸೆರೆ ಸಿಗಲಿಲ್ಲ. ಹುಲಿ ಕಾಡಿನತ್ತ ವಾಪಸ್ ಹೋಗಿರಬಹುದು ಎಂದು ರೈತರು ನಿಟ್ಟುಸಿರು ಬಿಡುತ್ತಿರವುದರ ನಡುವೆಯೇ ಕಲ್ಪುರ ಗ್ರಾಮದ ಬಳಿಯಸಾಗಡೆಯಲ್ಲಿ ಕಾಣಿಸಿಕೊಂಡು ಹಸುವನ್ನು ಕೊಂದಿರುವುದು ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಮತ್ತೆ ಭಯ ಉಂಟು ಮಾಡಿದೆ. ಇದೇ ರೀತಿ ಶನಿವಾರ ಬೆಳಗಿನ ಜಾವ ಬಿಸಲವಾಡಿ ಗ್ರಾಮದ ನಂಜಪ್ಪ ಅವರಿಗೆ ಸೇರಿದ ಹಸು ಬಲಿಯಾಗಿತ್ತು. ಇದು ಹುಲಿ ದಾಳಿಯೇ ಎಂಬುದು ಅವರ ಅನುಸಿಕೆಯೂ ಆಗಿದೆ.

ಇದನ್ನು ಓದಿ: ಕೋಟೆ ಪುರಸಭೆ ಪೌರಕಾರ್ಮಿಕರು, ನೌಕರರಿಗೆ ೫ ತಿಂಗಳಿಂದ ಸಂಬಳವಿಲ್ಲ

” ಹಸು, ಕರು ಹಾಕಿ ಕೇವಲ ೨೦ ದಿನಗಳಾಗಿತ್ತು. ಆ ಕರುವನ್ನು ಹುಲಿ ಸೋಮವಾರ ಬೆಳಗಿನ ಜಾವ ಎತ್ತಿಕೊಂಡು ಹೋಯಿತು.ಕರು ಇಲ್ಲದ ಕಾರಣಕ್ಕೆ ಎರಡು ಹೊತ್ತಿನಿಂದ ೧೦ ಲೀಟರ್ (ಬೆಳಿಗ್ಗೆ, ಸಂಜೆ) ಹಾಲು ಇಲ್ಲದಂತಾಗಿದೆ. ಮೊದಲು ಕರು ಬಿಟ್ಟು ನಂತರ ಕರೆಯಬೇಕು. ಇಲ್ಲದಿದ್ದರೆ ಅದು ಹಾಲು ಕೊಡುವುದಿಲ್ಲ. ಕರು ಇಲ್ಲದ ಕಾರಣ ಹಸು ಬೆಳಿಗ್ಗೆಯಿಂದ ಚಡಪಡಿಸುತ್ತಿದೆ.”

-ಚನ್ನಬಸಪ್ಪ, ಬಿಸಲವಾಡಿ ಗ್ರಾಮ

೩೦ ಸಾವಿರ ರೂ. ಪರಿಹಾರ:  ಕಾಡುಪ್ರಾಣಿಗಳ ದಾಳಿಯಿಂದ ಅಸುನೀಗಿದ ಹಸು ಮತ್ತು ಎತ್ತುಗಳಿಗೆ ತಲಾ ೩೦ ಸಾವಿರ ರೂ. ಪರಿಹಾರ ಕೊಡಲಾಗುತ್ತಿದೆ. ಕರು ಸತ್ತಾಗ ಅದರ ವಯಸ್ಸು ಆಧರಿಸಿ ಪಶು ವೈದ್ಯರು ನೀಡುವ ವರದಿ ಅನ್ವಯ ಪರಿಹಾರ ಕೊಡಲಾಗುತ್ತದೆ. ಅನುದಾನ ಲಭ್ಯ ಇಲ್ಲದಿದ್ದಾಗ ಕೆಲವೊಮ್ಮೆ ಪರಿಹಾರ ನೀಡಿಕೆ ಸ್ವಲ್ಪ ವಿಳಂಬ ಆಗುತ್ತದೆ. ಆದರೆ, ಪರಿಹಾರ ಹಣ ನೇರವಾಗಿ ಸಂಬಂಧಿಸಿದವರ ಖಾತೆಗೆ ತಲುಪೇ ತಲುಪುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

” ಬಹುತೇಕ ರೈತರು ಒಂದೆರಡು ಹಸುಗಳನ್ನು ಮೇಯಿಸಿಕೊಂಡು ಹಾಲು ಹಾಕಿ ಜೀವನ ನಡೆಸುತ್ತಿದ್ದಾರೆ. ಅಂಥವರಿಗೆ ಸೇರಿದ ಹಸುಗಳೇ ಹುಲಿ, ಚಿರತೆ ದಾಳಿಗೆ ಬಲಿಯಾಗುತ್ತಿವೆ. ಹಸು ಜೀವ ಹೋಗಿ, ಅದರಿಂದನಷ್ಟ ಅನುಭವಿಸುವ ರೈತರ ಜೀವನವೂ ಕಷ್ಟಕರ ವಾಗುತ್ತಿದೆ. ಇದನ್ನು ಮನಗಂಡು ಆಕಳುಗಳು ಅವು ಹಿಂಡುವ ಹಾಲಿನ ಆಧಾರದ ಮೇಲೆ ಕನಿಷ್ಠ ೫೦ ಸಾವಿರ ರೂ.ನಿಂದ ೧ ಲಕ್ಷ ರೂ.ಗೂ ಮೀರಿ ಬೆಲೆ ಬಾಳುತ್ತವೆ. ಅಷ್ಟೂ ನಷ್ಟ ತುಂಬಿಕೊಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು.”

-ಪ.ಸುರೇಶ್, ಸಾಗಡೆ

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

13 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

14 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

15 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

15 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

20 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

20 hours ago