ಆಂದೋಲನ 50

ನಾಲ್ಕು ಜಲಾಶಯಗಳಿದ್ದರೂ ತಾಲ್ಲೂಕಿಗೆ ತಪ್ಪಿಲ್ಲ ನೀರಿನ ಬವಣೆ

ಕಬಿನಿ, ನುಗು, ತಾರಕ ಮತ್ತು ಹೆಬ್ಬಾಳ ಸೇರಿ ನಾಲ್ಕು ಜಲಾಶಯಗಳನ್ನು ಹೊಂದಿದ ಹಿರಿಮೆ ಎಚ್.ಡಿ. ಕೋಟೆ ತಾಲೂಕಿನದು. ಆದರೆ ದೀಪದ ಬುಡ ಕತ್ತಲು ಎಂಬಂತೆ ನೆರೆ ತಾಲ್ಲೂಕು ಮತ್ತು ರಾಜ್ಯಗಳಿಗೆ ಈ ಜಲಾಶಯಗಳಿಂದ ಹೆಚ್ಚಿನ ಪ್ರಯೋಜನ ಸಿಕ್ಕಿದೆ ಹೊರತು ತಾಲ್ಲೂಕಿನ ಎಲ್ಲ ಭಾಗಕ್ಕೆ ಇನ್ನೂ ನೀರು ಪೂರೈಕೆ ಸಾಧ್ಯವಾಗಿಲ್ಲ. ಸುಡು ಬಿಸಿಲ ಬೇಗೆಯ ದಿನಗಳಲ್ಲಿ ತಾಲ್ಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಿಲ್ಲ.

ಕಬಿನಿ ರಾಜ್ಯದ ಪ್ರವಾಸೋದ್ಯಮಕ್ಕೆ ಆಸರೆಯಾಗಿರುವುದು ನಿಜ. ಆದರೆ ನೀರಾವರಿ ದೃಷ್ಟಿಯಿಂದ ತಾಲೂಕಿಗಿಂತ ಹೆಚ್ಚಾಗಿ ರಾಜ್ಯದ ಉಳಿದ ಜಿಲ್ಲೆಗಳಿಗೆ ಮತ್ತು ನೆರೆ ರಾಜ್ಯಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಈ ದೃಷ್ಟಿಯಿಂದ ತಾರಕ,ನುಗು ಮತ್ತು ಹೆಬ್ಬಾಳ ಜಲಾಶಯ ತಾಲ್ಲೂಕಿನ ರೈತರ ಜೀವನಾಡಿಗಳೆನಿಸಿವೆ. ಕಬಿನಿ ಜಲಾಶಯ ಸಾಮಾನ್ಯವಾಗಿ ಪ್ರತಿ ವರ್ಷವೂ ಭರ್ತಿಯಾಗುತ್ತದೆ. ಆದರೆ ಮಳೆ ನೀರನ್ನೇ ಆಶ್ರಯಿಸಿದ ಉಳಿದ ಮೂರು ಜಲಾಶಯಗಳು ಭರ್ತಿಯಾದ ವರ್ಷಗಳು ಕಡಿಮೆ. ತಾರಕ ಮತ್ತು ನುಗು ಜಲಾಶಯಗಳು ನಿರ್ಮಾಣವಾಗಿ ಬಹಳಷ್ಟು ವರ್ಷಗಳ ಕಾಲ ಭರ್ತಿಯೇ ಆಗಿರಲಿಲ್ಲ. ಖುಷಿಯ ವಿಚಾರವೆಂದರೆ ಕಳೆದ ನಾಲ್ಕು ವರ್ಷಗಳಿಂದ ಈ ಜಲಾಶಯಗಳು ನಿರಂತರವಾಗಿ ಭರ್ತಿಯಾಗುತ್ತಿವೆ.

ತಾರಕ ಜಲಾಶಯ

ಕೋಟೆಯಿಂದ ಐದು ಕಿ.ಮೀ. ದೂರದ ಪೆಂಜಹಳ್ಳಿ ಬಳಿ ಈ ಜಲಾಶಯ ನಿರ್ಮಾಣವಾಗಿದೆ. ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೧೯೬೮ರಲ್ಲಿ ಈ ಜಲಾಶಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ೧,೭೦೦ ಕೋಟಿ ರೂ. ವೆಚ್ಚದ ಜಲಾಶಯ ಕಾಮಗಾರಿ ೧೯೭೪ರಲ್ಲಿ ಆರಂಭಗೊಂಡು, ೧೯೮೩ರಲ್ಲಿ ಪೂರ್ಣಗೊಂಡಿತ್ತು.

ತಾರಕ ಜಲಾಶಯ ಭರ್ತಿಯಾದರೆ ತಾಲೂಕಿನ ೧೭,೪೦೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಭಾಗ್ಯ ಲಭಿಸುತ್ತದೆ. ಗರಿಷ್ಠ ೩.೯೪೭ ಟಿಎಂಸಿ (೨೪೨೫ ಅಡಿ) ಸಾಮರ್ಥ್ಯದ ಈ ಜಲಾಶಯ ೨೦೦೫ರಿಂದ ೨೦೦೮ ರವರೆಗೆ ಮೂರು ವರ್ಷ ನಿರಂತರವಾಗಿ ಭರ್ತಿಯಾಗಿತ್ತು. ಐದು ವರ್ಷಗಳ ಬಳಿಕ ೨೦೧೮-೧೯ರಲ್ಲಿ ಭರ್ತಿಯಾಗಿತ್ತು. ನಂತರ ನಿರಂತರವಾಗಿ ಭರ್ತಿಯಾಗುತ್ತಾ ಬಂದಿದೆ.

ನುಗು ಜಲಾಶಯ

ಕೋಟೆಯಿಂದ ೧೫ ಕಿ.ಮೀ. ದೂರದ ಬೀರವಾಳ ಬಳಿ ಕಟ್ಟಲಾಗಿರುವ ನುಗು ಜಲಾಶಯ ನಿರ್ಮಾಣ ಕಾರ‌್ಯ ೧೯೪೬ರಲ್ಲಿ ಆರಂಭವಾಗಿ ೧೯೫೯ರಲ್ಲಿ ಪೂರ್ಣಗೊಂಡಿತ್ತು. ಜಲಾಶಯ ೧೧೦ ಅಡಿಯಿದ್ದು, ೯೮೪ ಚದರ ಮೀ ವಿಸ್ತೀರ್ಣ ಹೊಂದಿದೆ. ಇದು ೭೩೨೯ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಉತ್ತಮ ಮಳೆಯಾಗಿ ಜಲಾಶಯ ತುಂಬಿದರೆ ೫.೪೪ ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ಜಲಾಶಯ ೨೦೦೯ ಮತ್ತು ೨೦೧೩ರಲ್ಲಿ ಭರ್ತಿಯಾಗಿತ್ತು. ೨೦೧೮ರ ನಂತರ ಪ್ರತಿವರ್ಷವೂ ಭರ್ತಿಯಾಗುತ್ತಿದೆ.

ಹೆಬ್ಬಾಳ ಜಲಾಶಯ

ಹೆಬ್ಬಾಳ, ಹೆಬ್ಬಳ್ಳ ಎಂದು ಕರೆಸಿಕೊಳ್ಳುವ ಜಲಾಶಯ ಪುಟ್ಟ ಜಲಾಶಯವಾಗಿದ್ದು, ಧಾರಾಕಾರ ಮಳೆ ಸುರಿದಾಗ ಭರ್ತಿಯಾಗಿ ನೀರು ಹೊರ ಹರಿಯುತ್ತದೆ. ಈ ವೇಳೆ ಕಂಡು ಬರುವ ದೃಶ್ಯ ರಮಣೀಯವಾಗಿದೆ.

andolana

Recent Posts

ನಾಳೆ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್‌ ಪ್ರಮಾಣ ವಚನ ಸ್ವೀಕಾರ

ಚೆನ್ನೈ : ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಿದ್ಧತೆ ಭರದಿಂದ ಸಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ನಟ…

1 hour ago

ಹನೂರು | ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್‌ : ತಪ್ಪಿದ ಭಾರಿ ಅನಾಹುತ

ಹನೂರು : ಪಟ್ಟಣದಿಂದ ಹೂಗ್ಯಂಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ರಾಮಪುರ…

1 hour ago

ನಟ ಚೇತನ್‌ ಅಹಿಂಸಾ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು: ಡಾ.ರಾಜ್‌ಕುಮಾರ್‌ ಸಮಾಧಿ ಬಗ್ಗೆ ಶುರುವಾಗಿದ್ದ ವಿವಾದ ಸಂಬಂಧ ಇದೀಗ ನಟ ಚೇತನ್‌ ಅಹಿಂಸಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇತ್ತೀಚೆಗಷ್ಟೇ…

3 hours ago

ನನ್ನ ಅಜ್ಜನ ರೀತಿ ಅಜಾತಶತ್ರು ಆಗುತ್ತೇನೆ: ನೂತನ ಶಾಸಕ ಸಮರ್ಥ್‌ ಶಾಮನೂರು

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ನೂತನ ಶಾಸಕರಾಗಿ ಆಯ್ಕೆಯಾಗಿರುವ ಸಮರ್ಥ್‌ ಶಾಮನೂರು ತಮ್ಮ ಗೆಲುವಿನ…

3 hours ago

ಉಪಚುನಾವಣೆಯಲ್ಲಿ ವಿಪಕ್ಷಗಳ ಷಡ್ಯಂತ್ರ ನಡೆಯಲಿಲ್ಲ, ನಾವೇ ಗೆದ್ದಿದ್ದೇವೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಉಪಚುನಾವಣೆಯಲ್ಲಿ ವಿಪಕ್ಷಗಳ ಷಡ್ಯಂತ್ರ ಏನೂ ನಡೆಯಲಿಲ್ಲ. ನಾನೇ ಗೆಲುವು ಸಾಧಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದ…

5 hours ago

ಖಾಲಿ ಕಾಂಪೌಂಡ್‌ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುವವರೇ ಎಚ್ಚರ ಎಚ್ಚರ.

ನಿಮ್ಮ ತಪ್ಪನ್ನು ನಿಮಗೇ ತೋರಿಸಲಿದೆ ಕನ್ನಡಿ! ಮೈಸೂರು: ಖಾಲಿ ಕಾಂಪೌಂಡ್ ಬಳಿ ಮೂತ್ರ ವಿಸರ್ಜನೆಯ ದುರ್ವಾಸನೆ ತಪ್ಪಿಸಲು ಮೈಸೂರು ಮಹಾನಗರ…

5 hours ago