ಹಾರೋಹಳ್ಳಿ ರವೀಂದ್ರ
ಸ್ವಾತಂತ್ರ್ಯಪೂರ್ವದಲ್ಲಿ ಶಿಕ್ಷಣ ಬಡವರಿಗೆ ಅದರಲ್ಲೂ ದಲಿತರಿಗೆ ಎಟುಕದ ಮಾತು. ಕೊಲ್ಲಾಪುರದ ಶಾಹು ಮಹಾರಾಜರ ನಂತರ, ದಲಿತರಿಗೆ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್.
ದಲಿತರಿಗೆ ಶಿಕ್ಷಣ ನೀಡಲೆಂದೇ ನಾಲ್ವಡಿ ಕೃಷ್ಣರಾಜ ಒಡೆಯರ್ ಮೊಟ್ಟ ಮೊದಲ ಬಾರಿಗೆ ಮಂಡ್ಯ ಜಿಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ೧೯೦೦ನೇ ಇಸವಿಯಲ್ಲಿ ಪ್ರತ್ಯೇಕ ಶಾಲೆೊಂಂದನ್ನು ತೆರೆದರು. ಆದರೆ ಅಲ್ಲಿ ಎದುರಾದ ಸಮಸ್ಯೆೆ ಬೇರೆ. ಅಂದು ಮೇಲು ಜಾತಿಯವರೇ ಶಿಕ್ಷಕರಾಗಿದ್ದರಿಂದ ಯಾವೊಬ್ಬ ಶಿಕ್ಷಕರೂ ದಲಿತರಿಗೆ ಪಾಠ ಹೇಳಿಕೊಡಲು ಮುಂದೆ ಬರಲಿಲ್ಲ.
ಆ ಸಂದರ್ಭದಲ್ಲಿ ‘ನಾನು ದಲಿತರಿಗೆ ಪಾಠ ಹೇಳಿಕೊಡುತ್ತೇನೆ’ ಎಂದು ಸ್ವ ಇಚ್ಚೆಯಿಂದ ಬಂದು ಶಿಕ್ಷಕ ವೃತ್ತಿಯನ್ನು ಒಪ್ಪಿಕೊಂಡವರು ತಲಕಾಡು ರಂಗೇಗೌಡರು. ಇವರು ೧೮೮೦ ಆಗಸ್ಟ್ ೧೫ ರಂದು ತಲಕಾಡಿನಲ್ಲಿ ಜನಿಸಿದರು. ತಂದೆ ರಂಗೇಗೌಡ, ತಾಯಿ ಲಕ್ಮಮ್ಮ. ಮೂಲತ: ಕೃಷಿಕರಾಗಿದ್ದ ಇವರ ಕುಟುಂಬದಲ್ಲಿ ಮೂರು ಜನ ಅಣ್ಣ ತಮ್ಮಂದಿರು, ಒಬ್ಬಳು ತಂಗಿ. ರಂಗೇಗೌಡರಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಇದ್ದುದ್ದರಿಂದ ಅಂದಿನ ಹಿರಿಯ ಪ್ರಾಥಮಿಕ, ತದನಂತರ ಹೈಸ್ಕೂಲ್ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದರು.
ದಲಿತರಿಗೆ ಶಿಕ್ಷಣ ದೊರಕಿಸಿಕೊಡಬೇಕೆಂಬುದೇ ತಲಕಾಡು ರಂಗೇಗೌಡರಿಗೆ ಪ್ರಮುಖ ಧ್ಯೇಯವಾಗಿತ್ತು. ಈ ಕಾರಣಕ್ಕೆ ಅಂದು ಮಹಾರಾಜರು ಮಳವಳ್ಳಿಯಲ್ಲಿ ತೆರೆದ ಶಾಲೆಗೆ ಶಿಕ್ಷಕರಾಗಿ ಬರಲು ಒಪ್ಪಿಕೊಂಡರು. ೧೩ ವರ್ಷಗಳ ಕಾಲ ಅವರ ವೃತ್ತಿ ಅಲ್ಲೆ ಮುಂದುವರೆಯಿತು. ಅಂದು ರಂಗೇಗೌಡರ ಸಾಧನೆ ಸರ್ಕಾರದವರ ಗಮನ ಸೆಳೆದುದ್ದಲ್ಲದೆ, ಸಮಾಜದ ಮೆಚ್ಚುಗೆಯನ್ನು ಗಳಿಸಿತು. ಬೇರೆ ಬೇರೆ ಪ್ರದೇಶಗಳಿಂದ ದಲಿತ ಮಕ್ಕಳು ಶಿಕ್ಷಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸಿದರು. ಆದ್ದರಿಂದ ಮಹಾರಾಜ ಸರ್ಕಾರದವರು ೧೯೧೩ ನೇ ಇಸವಿಯಲ್ಲಿ ಮೈಸೂರಿನ ನಜರ್ ಬಾದ್ ನಲ್ಲಿ ಪಂಚಮ ಬೋರ್ಡಿಂಗ್ ಹೋಮ್ ಎಂಬ ವಸತಿ ಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಗೆ ಮುಖ್ಯೋಪಾಧ್ಯಾಯರನ್ನಾಗಿ ನೇಮಿಸಲು ತಲಕಾಡು ರಂಗೇಗೌಡರನ್ನು ಬಿಟ್ಟರೆ ಪರ್ಯಾಯ ವ್ಯಕ್ತಿೆುೀಂ ಸಿಗಲಿಲ್ಲ. ಆದ್ದರಿಂದ ಮಳವಳ್ಳಿಯಿಂದ ಮೈಸೂರಿನ ಶಾಲೆಗೆ ಜವಾಬ್ದಾರಿ ವಹಿಸಿಕೊಂಡರು.
ರಂಗೇಗೌಡರು ಇಪ್ಪತ್ತೆರಡು ವರ್ಷಗಳ ಕಾಲ ದಲಿತರ ಶಿಕ್ಷಣಕ್ಕಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದರು.ದಲಿತರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಈ ಜನಾಂಗದ ವ್ಯಕ್ತಿಗಳು ಸಮಾಜದಲ್ಲಿ ತಲೆ ಎತ್ತುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ದಲಿತ ಮಕ್ಕಳು ಕಷ್ಟಕ್ಕೆ ಸಿಲುಕಿದಾಗ ವೈಯಕ್ತಿಕವಾಗಿಯೂ ಆರ್ಥಿಕ ನೆರವು ನೀಡುತ್ತಿದ್ದರು.
೧೯೦೦ರಲ್ಲಿ ಇವರು ಕೆಲಸ ಆರಂಭಿಸಿದಾಗ ಅವರಿಗೆ ತಿಂಗಳಿಗೆ ಸಿಗುತ್ತಿದ್ದ ಸಂಬಳ ಕೇವಲ ಹತ್ತು ರೂ.ಗಳು. ೧೯೩೭ರಲ್ಲಿ ನಿವೃತ್ತಿ ಸಮಯಕ್ಕೆ ಇದು ಮಾಸಿಕ ೭೫ ರೂ.ಗಳನ್ನು ತಲುಪಿತು. ಅಂದಿನ ಕಾಲದಲ್ಲಿ ಸಂಬಳ ಬಿಟ್ಟರೆ ಮತ್ಯಾವ ಭತ್ಯೆಗಳು, ಕೌಟುಂಬಿಕ ಭದ್ರತೆಗಳು ಇರಲಿಲ್ಲ. ೧೯೩೫ ರಲ್ಲಿೆುೀಂ ರಂಗೇಗೌಡರು ನಿವೃತ್ತರಾಗಬೇಕಿತ್ತು. ಆದರೆ ಸರ್ಕಾರ ಇವರ ಅಮೂಲ್ಯ ಸೇವೆಯನ್ನು ಗುರುತಿಸಿ ಎರಡು ವರ್ಷಗಳ ಕಾಲ ವಿಸ್ತರಿಸಿತು. ೧೯೩೭ ಆಗಸ್ಟ್ ೧೫ ರಂದು ತಮ್ಮ ೫೭ನೇ ವಯಸ್ಸಿನಲ್ಲಿ ಸೇವೆಯಿಂದ ನಿವೃತ್ತರಾದರು. ಅವರು ನಿವೃತ್ತರಾದ ದಿನ ಅವರ ದಲಿತ ಶಿಷ್ಯವೃಂದ ತಲಕಾಡು ರಂಗೇಗೌಡ ಅವರನ್ನು ಮೈಸೂರು ಸಂಸ್ಥಾನದ ಪ್ರಥಮ ವಿದ್ಯಾಗುರು ಎಂದು ಘೋಷಿಸಿ ಗೌರವ ಸಲ್ಲಿಸಿದರು. ೧೯೪೭ರ ಜುಲೈ ೬ ರಂದು ತಮ್ಮ ೬೭ನೇ ವಯಸ್ಸಿನಲ್ಲಿ ಅವರು ನಿಧನರಾದರು.
ಯುಜಿಡಿ ಕೇಬಲ್; ಸೆಸ್ಕ್ ನಿರ್ಲಕ್ಷ್ಯ ಮೈಸೂರಿನ ಬಹುತೇಕ ಎಲ್ಲ ಬಡಾವಣೆಗಳಲ್ಲೂ, ಚಾಮುಂಡೇಶ್ವರಿ ವಿದ್ಯುತ್ ನಿಗಮ (ಸೆಸ್ಕ್)ನಿಂದ ಅಂಡರ್ ಗ್ರೌಂಡ್ ಕೇಬಲ್…
ಮೈಸೂರಿನ ರಾಜರಾಜೇಶ್ವರಿ ನಗರದ ಬಳಿಯ ನ್ಯಾಯಾಂಗ ಬಡಾವಣೆಯಲ್ಲಿ ಐದಕ್ಕೂ ಹೆಚ್ಚು ಸರ್ಕಾರಿ ವಸತಿನಿಲಯಗಳಿದ್ದು, ಬೆಳಿಗ್ಗೆ ಹಾಗೂ ಸಂಜೆ ಸಾಕಷ್ಟು ನಗರ…
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆವರಣದಲ್ಲಿ ಪ್ಲಾಸ್ಟಿಕ್ ಬಾಟಲಿ, ಪ್ಲೇಟ್, ಚೀಲಗಳು ಹಾಗೂ ಮರದ ಎಲೆಗಳು ತುಂಬಿದ್ದು, ಅನೈರ್ಮಲ್ಯದ…
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಭರಚುಕ್ಕಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ಕೂಡಿದ್ದು, ಹ್ಯಾಂಡ್ ಪೋಸ್ಟ್ ನಿಂದ ಶಿವನಸಮುದ್ರದ…
ಚಾಮರಾಜನಗರ: ತಾಲ್ಲೂಕಿನ ಸುವರ್ಣಾವತಿ ಜಲಾಶಯದಲ್ಲಿ ಏರ್ಪಡಿಸಿರುವ ಎರಡು ದಿನಗಳ ‘ಜಿಲ್ಲಾ ಮಟ್ಟದ ಜಲ ಸಾಹಸ ಕ್ರೀಡೋತ್ಸವವನ್ನು’ ಜೆಟ್ ಸ್ಕೀ ಜಲ…
ಚೀನಿ ಸೈನಿಕರು ಫಿರಂಗಿಗಳೊಂದಿಗೆ ಮುನ್ನುಗ್ಗುತ್ತಲೇ ಇದ್ದರು... ಉದ್ವಿಗ್ನ ಸನ್ನಿವೇಶದಲ್ಲಿ ರಕ್ಷಣಾ ಸಚಿವರಿಂದ ಸಿಗದ ಸ್ಪಷ್ಟ ಸಂದೇಶ ೨ ಗಂಟೆಗಳ ಕಾಲ…