ಆಂದೋಲನ 50

ನಂಜನಗೂಡಿನಲ್ಲಿ ರಾಷ್ಟ್ರಪತಿ ರಸ್ತೆ!

ನಂಜನಗೂಡಿನಲ್ಲಿ ರಾಷ್ಟ್ರಪತಿ ರಸ್ತೆಗೆ ಗಮನಾರ್ಹ ಇತಿಹಾಸ ಇ ದೆ. ೧೯೬೯ರಿಂ ದ ೧೯೭೪ರವರೆಗೆ ರಾಷ್ಟ್ರಪತಿಯಾಗಿ ದ ವಿ.ವಿ.ಗಿರಿ (ವರಹಗಿರಿ ವೆಂಕಟಗಿರಿ) ಅವರು ತಮ೩/೪ ಆಡಳಿತಾವ ಣಿಯ ಕೊನೆಯ ದಿನಗಳಲ್ಲಿ ನಂಜನಗೂಡಿಗೆ ಭೇಟಿ ನೀಡಿದರು. ಅದರ ನೆನಪಿನಾರ್ಥ ಈ ರಸ್ತೆಗೆ ರಾಷ್ಟ್ರಪತಿ ಎಂದು ಸೇರಿಸಿ ನಾಮಕರಣ ಮಾಡಲಾಗಿದೆ.

ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದಿಂದ ಅನತಿ ದೂರದಲ್ಲಿ ಅಂದರೆ ಚಾಮರಾಜನಗರ ರಸ್ತೆಯಲ್ಲಿ ಆ ಕಾಲದಲ್ಲಿ ಮಹಿಳಾ ವಿದ್ಯಾಪೀಠ ಸ್ಥಾಪನೆಯಾಗಿತ್ತು. ಅದು ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಸಹಾಯದಿಂದ ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅಲ್ಲಿಗೆ ಭೇಟಿ ನೀಡಿದ ರಾಷ್ಟ್ರಪತಿ ವಿ.ವಿ.ಗಿರಿ ಅವರು ವಾಪಸ್‌ ಕಾರಿನಲ್ಲಿ ಮಹಿಳಾ ವಿದ್ಯಾಪೀಠದಿಂದ ಗೋಳೂರು, ಹಳ್ಳದಕೇರಿ, ಶ್ರೀಕಂಠೇಶ್ವರ ದೇವಸ್ಥಾನ ಬಲಭಾಗದಿಂದ ಶ್ರೀ ರಾಘವೇಂದ್ರ ಮಠದ ಮಾರ್ಗದಲ್ಲಿ ಸಂಚರಿಸಿ, ಶ್ರೀ ಪ್ರಸನ್ನ ಚಿಂತಾಮಣಿ ಇಷ್ಟಾರ್ಥ ಸಿದ್ಧಿ ಗಣಪತಿ ದೇವಸ್ಥಾನದ ರಸ್ತೆ ಮೂಲಕ ಊಟಿ ರಸ್ತೆಗೆ ಸೇರಿಕೊಂಡು, ಬಲಭಾಗಕ್ಕೆ ತಿರುವು ತೆಗೆ ದುಕೊಂಡು ಮೈಸೂರು ಕಡೆಗೆ ತೆರಳಿದರು.

ರಾಷ್ಟ್ರಪತಿಯೊಬ್ಬರು ಬಂದು ಹೋದ ಆ ಕ್ಷಣಗಳನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ನಂಜನಗೂಡಿನಲ್ಲಿ ‘ರಾಷ್ಟ್ರಪತಿ ರಸ್ತೆ’ ಅಸ್ತಿತ್ವಕ್ಕೆ ಬಂದಿತು. ಈ ರಸ್ತೆಯಲ್ಲಿ ಈಗ ಜೆಎಸ್‌ಎಸ್‌ ಬಾಲಕಿಯರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇದೆ. ಸಾಕಷ್ಟು ಹಳೆಯದಾದ ಪಕ್ಕಾ ಮಿಡಲ್‌ ಸ್ಕೂಲ್‌ ಮೈಸೂರು- ಚಾಮರಾಜನಗರ ರೈಲು ಮಾರ್ಗದ ಗೇಟ್‌ ನಾಗಮ್ಮ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ, ಬಾಲಕಿಯರ ಸರ್ಕಾರಿ ಪ ದವಿ ಪೂರ್ವ ಕಾಲೇಜು, ಹಲವಾರು ಅತ್ಯಾಧು ನಿಕ ವಸ್ತ್ರಗಳು, ಸಿದ್ಧಉಡುಪುಗಳು, ಪಾದರಕ್ಷೆ ಅಂಗಡಿಗಳು ತಲೆಯೆತ್ತಿವೆ. ಅಲ್ಲದೆ, ರೈಲ್ವೆಗೇಟ್‌ ಸಮೀಪ ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

andolana

Recent Posts

ಸಿಎಂ ಆಯ್ಕೆ ವೇಳೆ ಯಾವುದೇ ಗಡುವು ಕೊಟ್ಟಿಲ್ಲ: ಸಚಿವ ಕೆ.ಜೆ.ಜಾರ್ಜ್‌

ಬೆಳಗಾವಿ: ಸಿಎಂ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಸಿಎಂ ಬದಲಾವಣೆ…

41 mins ago

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ KERS ನಿರ್ದೇಶಕ ನೇತೃತ್ವದಲ್ಲಿ ತಂಡ ರಚನೆ

ಬೆಂಗಳೂರು: ಸುಪ್ರೀಂಕೋರ್ಟ್‌ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್‌ ಸಂಶೋಧನಾ ಕೇಂದ್ರ ನಿರ್ದೇಶಕರ…

1 hour ago

ಪಾರಂಪರಿಕ ನಗರ ಅಭಿವೃದ್ಧಿಗೆ ಕಾನೂನು ರೂಪಿಸಿ: ಸಂಸತ್‌ನಲ್ಲಿ ಸಂಸದ ಯದುವೀರ್‌ ಒಡೆಯರ್‌ ಆಗ್ರಹ

ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ…

1 hour ago

ನನ್ನನ್ನು ಸಿಎಂ ಮಾಡುವುದಾದರೆ ಬಿಜೆಪಿಗೆ ವಾಪಸ್‌ ಹೋಗುತ್ತೇನೆ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

ಬೆಳಗಾವಿ: ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಸ್‌ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌…

2 hours ago

ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನಿಂದ ಹಿಟ್‌ ಅಂಡ್‌ ರನ್:‌ ಸವಾರ ಸಾವು

ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವನ್ನಪ್ಪಿರುವ…

3 hours ago

ಯೂನಿಟಿ ಮಾಲ್‌ ನಿರ್ಮಾಣಕ್ಕೆ ತಡೆ ವಿಚಾರ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಮಾಧ್ಯಮ ಹೇಳಿಕೆ ಬಿಡುಗಡೆ

ಮೈಸೂರು: ಯೂನಿಟಿ ಮಾಲ್‌ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…

3 hours ago