ಆಂದೋಲನ 50

ಓಲೆಕಾರರಿಗೆ ರಾಜ ಮರ್ಯಾದೆ

ಮೈಸೂರಿನ ಕಾರಂಜಿ ಕೆರೆಯ ಎದುರಿಗೆ ಇರುವ ಅಶ್ವಾರೋಹಿ ಪಡೆಯ ಆವರಣದ ಮುಂದೆ ಸ್ಥಾಪನೆ ಮಾಡಿರುವ ಇಬ್ಬರು ಮಹನೀಯರ ಪ್ರತಿಮೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಈ ಪ್ರತಿಮೆಗಳ ಮೂಲಕ ಈಗಲೂ ಜೀವಂತವಾಗಿರುವ ಮಹನೀಯರಿಗೆ ಸಾಕ್ಷಾತ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಗೌರವ ಸಮರ್ಪಣೆ ಮಾಡಿದ್ದರು. ಆ ಎರಡು ಪ್ರತಿಮೆಗಳಲ್ಲಿ ಒಬ್ಬರದ್ದು ಪೋಸ್ಟ್‌ಮನ್ ಬಸವಯ್ಯ ಅವರದ್ದು. ಪೋಸ್ಟ್ ಮನ್ ಎನ್ನುವುದಕ್ಕಿಂತ ಓಲೇಕಾರ ಎಂದು ಕರೆಯಬಹುದು. ಬಸವಯ್ಯ ಅವರು ಓಲೆಗಳನ್ನು ಸಮಯಕ್ಕೆ ಸರಿಯಾಗಿ ಮುಟ್ಟಿಸುತ್ತಿದ್ದ ಪರಿ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಆ ಕಾಲದಲ್ಲಿ ಓಲೆ ಕೊಡಲು ನಡೆದುಕೊಂಡೇ ಹೋಗಬೇಕು. ಕೈಯಲ್ಲಿ ಗಂಟೆಗಳನ್ನು ಅಳವಡಿಸಿಕೊಳ್ಳಲಾಗಿದ್ದ ಉದ್ದನೆ ಕೋಲು, ಮತ್ತೊಂದು ಕೈಯಲ್ಲಿ ಲಾಟೀನು, ಬಗಲಲ್ಲಿ ಮಳೆ-ಗಾಳಿ ಬಂದರೂ ಏನು ಆಗದಂತಹ ಬ್ಯಾಗು. ರಾತ್ರಿ-ಹಗಲು, ಮಳೆ-ಬಿಸಿಲು ಎಲ್ಲ ಕಾಲದಲ್ಲೂ ಸೇವೆ ನಡೆಯುತ್ತಿತ್ತು.
ಇನ್ನೂ ಭುಜಂಗರಾವ್ ಕೂಡ ಸಂದೇಶ ವಾಹಕರೇ. ಅದರೆ ಇವರು ಕುದುರೆಯ ಮೇಲೆ ಕುಳಿತು ಪ್ರದೇಶದಿಂದ ಪ್ರದೇಶಕ್ಕೆ ಸಂದೇಶ ತಲುಪಿಸುತ್ತಿದ್ದರು. ಇಂತಹವರನ್ನು ಗುರುತಿಸಿ ನಾಲ್ವಡಿಯವರು ಅವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿರುವುದು ಮೈಸೂರು ರಾಜಪರಂಪರೆಯು ಸಾಮಾನ್ಯರಿಗೂ ಕೊಡುತ್ತಿದ್ದ ಗೌರವದ ದ್ಯೋತಕ.

andolanait

Recent Posts

ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಂರ ಮೀಸಲಾತಿಗೆ ಸಂಪುಟ ಒಪ್ಪಿಗೆ

ಬೆಂಗಳೂರು: ಸುಮಾರು 1ಕೋಟಿ ರೂ. ವರೆಗಿನ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.…

31 mins ago

ಆನೆ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ

ಬೆಂಗಳೂರು: ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ 45 ವರ್ಷದ ಮಹಿಳೆಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ, ಈ…

42 mins ago

ಒಂದು ತಿಂಗಳು ʼಜಲ ಸಂರಕ್ಷಣಾ ಅಭಿಯಾನʼ: ಡಿಕೆ ಶಿವಕುಮಾರ್‌

ಬೆಂಗಳೂರು: ಜಲ ಸಂರಕ್ಷಣೆ ವಿಚಾರವಾಗಿ ರಾಜ್ಯದಲ್ಲಿ ಒಂದು ತಿಂಗಳುಗಳ ಕಾಲ ʼಜಲ ಸಂರಕ್ಷಣಾ ಅಭಿಯಾನʼ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿಕೆ…

1 hour ago

ಸರ್ವಜ್ಞನಗರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು: ಸರ್ವಜ್ಞ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಯನ್ನು ಕ್ಷೇತ್ರದ ಶಾಸಕರಾದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಪರಿಶೀಲನೆ ನಡೆಸಿದರು.…

2 hours ago

ಹೊಸ 7 ವಿವಿಗಳನ್ನು ಮುಚ್ಚುವುದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ 7 ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ನಾವು ಎಲ್ಲಿಯೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾಸಭೆಯಲ್ಲಿ…

2 hours ago

ವೈದ್ಯರ ನಿವೃತ್ತಿ ವಯಸ್ಸು ಏರಿಸಲು ಚಿಂತನೆ: ಸಚಿವ ಶರಣ ಪ್ರಕಾಶ ಪಾಟೀಲ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಪಡೆದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ತಜ್ಞ ವೈದ್ಯರ ನಿವೃತ್ತಿ ವಯಸ್ಸನ್ನು…

3 hours ago