ಆಂದೋಲನ 50

ವೃತ್ತಿಗೆ ಭದ್ರಬುನಾದಿ ಹಾಕಿದ್ದು ‘ಆಂದೋಲನ’

ಅಂಶಿ ಪ್ರಸನ್ನಕುಮಾರ್. ಹಿರಿಯ ಪತ್ರಕರ್ತ

‘ಆಂದೋಲನ’ಕ್ಕೆ ೫೦ ವರ್ಷ. ನನ್ನ ಹೆಸರು ‘ಆಂದೋಲನ’ ಪತ್ರಿಕೆಯಲ್ಲಿ ಕಾಣಿಸಿಕೊಳ್ಳತೊಡಗಿ ನಲವತ್ತು ವರ್ಷ!. ಸಕ್ರಿಯ ಪತ್ರಿಕೋದ್ಯಮಕ್ಕೆ ಬರುವ ಮುಂಚಿನಿಂದಲೂ ನನಗೆ ‘ಆಂದೋಲನ’ ಅಚ್ಚುಮೆಚ್ಚು. ಹೀಗಾಗಿ ಓದುಗರ ಪತ್ರಗಳು, ಲೇಖನ ಪ್ರಕಟವಾಗಿತ್ತು. ಭೇಟಿಯಾದ ಮೊದಲ ದಿನವೇ ಸಂಪಾದಕರಾದ ರಾಜಶೇಖರ ಕೋಟಿಯವರು ಕೆಲಸ ಕೊಟ್ಟರು. ಆ ಮೂಲಕ ನನ್ನ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದರು. ಇದರಿಂದಾಗಿಯೇ ಇಲ್ಲಿಯವರೆಗೆ ಓರ್ವ ಸಕ್ರಿಯ ಪತ್ರಕರ್ತನಾಗಿ ಉಳಿದುಕೊಳ್ಳಲು ಸಾಧ್ಯವಾಗಿದೆ.
ರಾಜಶೇಖರ ಕೋಟಿ ಹಾಗೂ ಬಿ.ಎಸ್. ಹರೀಶ್ ಅವರು ಆರಂಭದಲ್ಲಿ ದೈನಂದಿನ ಕಾರ್ಯಕ್ರಮಗಳಿಗೆ ಕಳುಹಿಸುತ್ತಿದ್ದರು. ಕ್ರಮೇಣ ಎಲ್ಲಾ ವಿಭಾಗಗಳ ವರದಿಗಾರಿಕೆಗೂ ಅವಕಾಶ ಕಲ್ಪಿಸಿದರು. ಅವುಗಳಲ್ಲಿ ನಗರಪಾಲಿಕೆ, ಜಿಲ್ಲಾ ಪರಿಷತ್ ಸಭೆಗಳು ಮುಖ್ಯವಾದವು. ಆಗ ಒಣಭೂಮಿ ಅಭಿವೃದ್ಧಿ ಪ್ರಾಧಿಕಾರ ಇತ್ತು. (ಡಿಎಲ್‌ಡಿಬಿ) ಕೆ.ಎಸ್. ನಿಂಗಪ್ಪ ಎಂಬ ಕೆಎಎಸ್ ಅಧಿಕಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನೀರಿನ ಸಂರಕ್ಷಣೆಯಿಂದ ಬರಡುಭೂಮಿಯನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ವಿಶೇಷ ವರದಿ ಮಾಡಿದೆ. ಮುಜರಾಯಿ ದೇವಾಲಯಗಳಿಗೆ ದಲಿತರನ್ನು ಅರ್ಚಕವಾಗಿ ನೇಮಿಸಲು ಮುಂದಾದ ಅಂದಿನ ಜಿಲ್ಲಾಧಿಕಾರಿ ವಿ.ಪಿ. ಬಳಿಗಾರ್ ಸಂದರ್ಶನ, ಲಕ್ಷ್ಮೀಪುರಂ ಗೋಪಾಲಸ್ವಾಮಿ ಶಿಶುವಿಹಾರದ ಬಳಿ ನಡೆದಿದ್ದ ಡಾ.ಚಂದ್ರಶೇಖರ್ ಕೊಲೆ ಪ್ರಕರಣ, ಇಲವಾಲದ ಬಳಿ ನಡೆದಿದ್ದ ರುಂಡವಿಲ್ಲದ ದೇಹ ಪತ್ತೆ ಪ್ರಕರಣ, ದಸರಾ, ಪ್ರೀಮಿಯರ್ ಸ್ಟುಡಿಯೋ ಆಗ್ನಿ ದುರಂತ- ಹೀಗೆ ವರದಿಗಾರಿಕೆ ಸಾಗಿತ್ತು.
ನಂತರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವಾರು ಸಮೀಕ್ಷೆಗೆ ಅವಕಾಶ ಮಾಡಿಕೊಟ್ಟರು. ನಗರಪಾಲಿಕೆ ಚುನಾವಣೆಯಲ್ಲಿ ವಾರ್ಡ್‌ವಾರು ಸಮೀಕ್ಷೆ ಬರೆದ ಮೊದಲ ಪತ್ರಿಕೆ ‘ಆಂದೋಲನ’ ಎನಿಸಿಕೊಂಡಿತು. ೧೯೯೦ ರಲ್ಲಿ ಅರಮನೆಯಲ್ಲಿ ನಡೆದ ೬೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವರದಿ ಮಾಡಲಾಯಿತು.
ವಿಧಾನಮಂಡಲ ಅಧಿವೇಶನ, ೧೯೮೯-೯೦ರ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ವೀರೇಂದ್ರ ಪಾಟೀಲ್ ಪದಚ್ಯುತಿ, ಹೊಸ ಸಿಎಂ ಆಗಿ ಎಸ್. ಬಂಗಾರಪ್ಪ ಆಯ್ಕೆ ಸಂದರ್ಭ, ವಿಧಾನಮಂಡಲ ಅಧಿವೇಶನಗಳಿಗೂ ಕೂಡ ಕೋಟಿಯವರು ಕಳುಹಿಸುತ್ತಿದ್ದರು.

ಮುತ್ತತ್ತಿ- ಎಲ್‌ಟಿಟಿಇ ಉಗ್ರರ ಆತ್ಮಹತ್ಯೆ
೧೯೯೧ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬದೂರು ಬಳಿ ಮಾನವ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಯಿತು. ಅದರಲ್ಲಿ ಭಾಗಿಯಾಗಿದ್ದ ಎಲ್‌ಟಿಟಿಇ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕು ಮುತ್ತತ್ತಿ ಬಳಿ ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಾಗ ರಾತ್ರೋರಾತ್ರಿ ಕೋಟಿಯವರೊಂದಿಗೆ ನಾನು ಹೋಗಿದ್ದೆ. ಆಗಷ್ಟೇ ಖರೀದಿಸಿದ್ದ ಹೊಸ ಕಾರಿನಲ್ಲಿ ಕೋಟಿಯವರು ಅಲ್ಲಿಗೆ ತಲುಪಿದ್ದರು. ಇದಾದ ನಂತರ ಬೆಂಗಳೂರಿನ ಕೋಣನಕುಂಟೆ ಬಳಿ ಶಿವರಸನ್, ಶುಭಾ ಇದ್ದಾರೆ ಎಂಬ ಮಾಹಿತಿ ಸಿಕ್ಕಿತು.

ವೀರಪ್ಪನ್ ಕುಕೃತ್ಯಗಳು
ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಸಿಲ್ವೇಕಲ್ ಬಳಿ ಕೋಟ್ಯಂತರ ರೂ. ಮೌಲ್ಯದ ಶ್ರೀಗಂಧ ವಶಪಡಿಸಿಕೊಂಡರು. ನಾನು ಮತ್ತು ಆಗ ಛಾಯಾಗ್ರಾಹಕರಾಗಿದ್ದ ಸಾಗ್ಗೆರೆ ರಾಮಸ್ವಾಮಿ ವರದಿಗೆ ಧರ್ಮಪುರಿ, ಸೇಲಂ ಮತ್ತಿತರ ಕಡೆ ಹೋಗಿದ್ದವು. ಗೋಪಿನಾಥಂ ಬಳಿ ಎರಕೆಹಳ್ಳದಲ್ಲಿ ಡಿಸಿಎಫ್ ಪಿ.ಶ್ರೀನಿವಾಸನ್ ಅನ್ನು ವೀರಪ್ಪನ್ ರುಂಡ- ಮುಂಡ ಬೇರ್ಪಡಿಸಿ, ಹತ್ಯೆ ಮಾಡಿದಾಗ ಕೋಟಿಯವರು ಹಾಗೂ ನಾನು ಹೋಗಿ, ವರದಿ ಮಾಡಿದ್ದೆವು.
ಇದಾದ ನಂತರ ಮೀಣ್ಯಂ ಬಳಿ ಎಸ್ಪಿ ಟಿ.ಹರೀಕೃಷ್ಣ, ಎಸ್‌ಐ ಶಕೀಲ್ ಅಹಮದ್ ಹತ್ಯೆ, ಪಾಲಾರ್ ಸೇತುವೆ ಬಳಿ ನಡೆದ ೨೨ ಮಂದಿಯ ಹತ್ಯೆ, ರಾಮಾಪುರ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಐವರು ಪೊಲೀಸರ ಹತ್ಯೆ, ಗದ್ದೆಸಾಲು ಬಳಿ ಐವರು ಗಿರಿಜನರ ಹತ್ಯೆ, ಮಹದೇಶ್ವರ ಬೆಟ್ಟದ ರಂಗಸ್ವಾಮಿ ಒಡ್ಡು ಬಳಿ ಗೋಪಾಲ್ ಹೊಸೂರು ಕಾರಿನ ಮೇಲೆ ದಾಳಿ ಹೀಗೆ ನಾನಾ ಪ್ರಕರಣಗಳ ಬಗ್ಗೆ ಕೊಳ್ಳೇಗಾಲದ ಎ.ಎಚ್. ಗೋವಿಂದ, ಹನೂರು ವೆಂಕಟೇಗೌಡ, ಕಾಮಗೆರೆಯ ಸೋಮಶೇಖರ್, ರಾಮಾಪುರದ ಶಿವಕುಮಾರ್, ಮಹದೇಶ್ವರ ಬೆಟ್ಟದ ವೀರಭದ್ರಸ್ವಾಮಿ, ನೇತ್ರರಾಜು ಮೊದಲಾದವರ ನೆರವಿನಿಂದ ವರದಿ ಮಾಡಲಾಯಿತು.

ಸತ್ಯದೇವ್ ಪ್ರಕರಣ
ಮೈಸೂರಿನಲ್ಲಿ ವಿಕ್ರಾಂತ್ ಟಯರ್ಸ್ ಕಾರ್ಮಿಕ ಸತ್ಯದೇವ್ ಎಂಬವರು ಅಸಹಜ ರೀತಿಯಲ್ಲಿ ಸಾವಿಗೀಡಾಗಿದ್ದರು. ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ (ಯುಡಿಆರ್) ದಾಖಲಾಗಿತ್ತು. ಆದರೆ ಅದು ಅಸ್ವಾಭಾವಿಕ ಸಾವಲ್ಲ, ಕೊಲೆ ಎಂಬುದನ್ನು ಸಾಂದರ್ಭಿಕ ಸಾಕ್ಷ್ಯಗಳು ಒತ್ತಿ ಒತ್ತಿ ಹೇಳುತ್ತಿದ್ದವು. ನನಗೆ ಈ ಬಗ್ಗೆ ಮಾಹಿತಿ ಬಂತು. ಅದನ್ನು ತನಿಖಾ ವರದಿ ಮಾಡಲು ಹೋದಾಗ ಖಚಿತಪಡಿಸಿಕೊಳ್ಳಲು ಹರಸಾಹಸ ಪಡಬೇಕಾಯಿತು. ಆದರೆ ಧೈರ್ಯದಿಂದ ಮಾಡಿದ ಈ ವರದಿಯನ್ನು ಯಾವುದೇ ಮುಲಾಜಿಗೆ ಒಳಗಾಗದೇ ’ಆಂದೋಲನ’ ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರು ಪ್ರಕಟ ಮಾಡಿದ್ದು ನನ್ನ ಪತ್ರಿಕೋದ್ಯಮ ಯಾತ್ರೆಗೆ ಪೂರಕವಾಯಿತು.

andolanait

Recent Posts

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

27 mins ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

2 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

2 hours ago

ಮಂಡ್ಯ ಭಾಗದ ರೈತರ ಅಭಿವೃದ್ಧಿಗೆ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ಥಾಪನೆ: ಎನ್ ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…

2 hours ago

ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿರುತ್ತದೆ ಎಂದ ಸಚಿವ ಎಂ.ಬಿ.ಪಾಟೀಲ್‌

ಬೆಂಗಳೂರು: ಆರ್‌.ಅಶೋಕ್‌ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್‌…

2 hours ago

ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…

3 hours ago