ಆಂದೋಲನ 50

ಗಿಡಗಂಟಿಗಳ ನಡುವೆ ಮುಚ್ಚಿ ಹೋಗಿದೆ ಪಾರಂಪರಿಕ ಸೇತುವೆ

ಮೈಸೂರು-ನಂಜನಗೂಡು ರಸ್ತೆಗೆ ಅಡ್ಡವಾಗಿ ಕಪಿಲಾ ನದಿಗೆ ನಿರ್ಮಿಸಲಾದ ರಾಜ್ಯದ ಅತ್ಯಂತ ಪುರಾತನವಾದ ಸೇತುವೆ ನಂಜನಗೂಡಿನ ಹಿರಿಮೆಯನ್ನು ಹೆಚ್ಚಿಸಿದೆ. ೧೭೩೫ ರಲ್ಲಿ ನಿರ್ಮಿಸಿದ ದಾಖಲೆ ಇರುವ ಈ ಸೇತುವೆ ರಾಜ್ಯದ ಅತ್ಯಂತ ಹಳೆಯ ಸೇತುವೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಆಧುನಿಕ ಸೇತುವೆಗಳು ಲೋಕಾರ್ಪಣೆಯಾದ ಕೆಲವರ್ಷಗಳಲ್ಲೇ ನೆಲಕಚ್ಚುವ ಸ್ಥಿತಿಯನ್ನು ಕಾಣುತ್ತಿರುವ ಈ ಕಾಲದಲ್ಲಿ ನಂಜನಗೂಡಿನ ಕಪಿಲಾ ಸೇತುವೆ ಈಗಲೂ ಸಾಕಷ್ಟು ಭದ್ರವಾಗಿಯೇ ಇ ದೆಎಂಬುದು ರಾಜ್ಯಕ್ಕೊಂದು ಹೆಮ್ಮೆಯ ವಿಷಯವಾಗಿದೆ. ಪ್ರಾರಂಭದಲ್ಲಿ ಎತ್ತಿನ ಗಾಡಿ, ಕುದುರೆ ಗಾಡಿಗಳ ಸಂಚಾರಕ್ಕಾಗಿ ಎಂಬಂತಾಗಿ ದ ಈ ಸೇತುವೆಯಲ್ಲಿ ೧೯ನೇ ಶತಮಾನ ದಲ್ಲಿ ಮೋಟಾರು ವಾಹನಗಳು ಸಂಚರಿಸಲಾರಂಭಿಸಿದ್ದವು.

ಶತಮಾನಗಳ ಹಿಂದೆೆಯೇ ನಂಜನಗೂಡಿಗೆ ರೈಲು ಸಂಪರ್ಕ ಕಲ್ಪಿತವಾದಾಗ ಈ ಸೇತುವೆಯಲ್ಲಿ ಮೋಟಾರು ಹಾಗೂ ರೈಲುಗಳೆರಡರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಮೀಟರ್‌ ಗೇಜಿ ನಿಂದ ಬ್ರಾಡ್‌ ಗೇಜಾಗಿ ಇಲ್ಲಿನ ರೈಲು ಬದಲಾಗುವವರೆಗೂ (೨೦೦೮) ಇದೇ ಸೇತುವೆ ಮೇಲೆ ರೈಲು ಸರಾಗವಾಗಿ ಸಂಚರಿಸುತ್ತಿತ್ತು. ಮೈಸೂರು- ನಂಜನಗೂಡು ನಡುವೆ ಸುಗಮ ಸಂಚಾರಕ್ಕಾಗಿ ದಳವಾಯಿ ದೇವರಾಜ ಎನ್ನುವವರು ಬೆಲ್ಲ, ಸುಣ್ಣ ದ ಗಾರೆ ಹಾಗೂ ಇಟ್ಟಿಗೆಗಳಿಂದ ಈ ಬಲಿಷ್ಠ ಸೇತುವೆಯನ್ನು ೧೭೩೫ ರಲ್ಲಿ ನಿರ್ಮಿಸಿ ದರು. ಸುಮಾರು ೨೭೩ ವರ್ಷಗಳ ಕಾಲ ಸಂಚಾರ ದ ವ್ಯವಸ್ಥೆಗೆ ಸಾಕ್ಷಿಯಾಗಿ ಈಗ ೨೮೬ ವರ್ಷ ಕಳೆದರೂ ಸಾಕಷ್ಟು ಗಟ್ಟಿಯಾಗಿ ಇರುವ ಈ ಸೇತುವೆ ಅಪರೂಪದ ವಾಸ್ತು ಶೈಲಿಯಿಂದ ಕೂಡಿದ್ದು ಅದನ್ನು ನಾವೀಗ ಉಳಿಸಿಕೊಳ್ಳ ಬೇಕಿದೆ. ಈಸ್ಟ್‌ ಇಂಡಿಯಾ ಕಂಪನಿಯ ರಾಯಭಾರಿ ಡ್ಯಾನೀಷ್‌ ರೇವ್‌ ಎಂಬವರು ಕಪಿಲಾ ನದಿಯಾ ಈ ಸೇತುವೆ ಕುರಿತು ೧೭೭೯ ಆಗಸ್ಟ್‌ ೨೩ ರಂದು ದಾಖಲಿಸಿದ್ದಾರೆ.

೧೦ ಅಡಿ ವಿಸ್ತಾರದ ಗೋಥಿಕ್‌ ಶೈಲಿಯ ಇತಿಹಾಸ ಹೊಂದಿರುವ ಕಮಾನುಗಳ ಸರಣಿಯಿಂದ ಕೂಡಿದ ಈ ಸೇತುವೆ ೮ ಅಡಿ ಅಗಲದ ಮಧ್ಯಸ್ಥಿಕೆಯ ಬೃಹತ್ತಾದ ಸ್ತಂಭಗಳನ್ನು ಹೊಂದಿದೆ. ಆರ್ಚ್‌ ಕ್ರೈಸ್ಟ್‌ ಮೇಲೆ ೫ ಅಡಿಗಳಿಗಿಂತ ಹೆಚ್ಚು ಅಗಲದ ಅಡಿಪಾಯದ ಕಲ್ಲಿನ ಸ್ತರಗಳ ಮೇಲೆ ಇದನ್ನು ನಿಲ್ಲಿಸಲಾಗಿದೆ. ಮೂರು ಶತಮಾನಗಳ ಇತಿಹಾಸ ಹೊಂದಿರುವ ಈ ಸೇತುವೆಮ ಕಪಿಲೆಯಲ್ಲಿ ಬಂದ ಪ್ರವಾಹಗಳಿಗೆ ಜಗ್ಗದೆ ಅಳುಕದೆ ನಮ್ಮ ಮುಂದೆ ನಿಂತಿರುವುದೇ ನಮ್ಮವರ ಅಂದಿನ ಕಾಲದ ತಾಂತ್ರಿಕತೆಗೆ ಸಾಕ್ಷಿಯಾಗಿದೆ.

andolana

Recent Posts

ರೇಸ್‌ಕ್ಲಬ್‌ ಸುತ್ತಮುತ್ತ ಕುದುರೆ ಚಟುವಟಿಕೆಗಳಿಗೆ ನಿರ್ಬಂಧ

ಮೈಸೂರು : ಮೈಸೂರಿನ ರೇಸ್‌ಕ್ಲಬ್‌ನ ಪ್ರದೇಶದ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವಲನ, ಕುದುರೆಗಳನ್ನು…

33 mins ago

ರಸ್ತೆ ಅಪಘಾತ ಸಂಖ್ಯೆ ಶೂನ್ಯವಾಗಬೇಕು : ನಿ.ನ್ಯಾಯಮೂರ್ತಿ ಅಭಯ್‌ ಮನೋಹರ್‌ ಸಪ್ರೆ

ಮೈಸೂರು : ಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋಟ್೯ನ ನಿ.ನ್ಯಾಯಮೂರ್ತಿಯೂ ಆದ…

48 mins ago

ಸ್ಲೀವ್‌ಲೆಸ್‌, ಹರಿದ ಜೀನ್ಸ್‌ ಹಾಕುವ ಸರ್ಕಾರಿ ನೌಕರರೇ ಹುಷಾರ್.. : ರಾಜ್ಯ ಸರ್ಕಾರದ ಎಚ್ಚರಿಕೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಯೋಗ್ಯ ಸೂಕ್ತ ಬಟ್ಟೆ ಧರಿಸಿಕೊಂಡು ಬರದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ…

1 hour ago

ಮೈಸೂರು ವಿಶ್ವವಿದ್ಯಾನಿಲಯ ; ಅನಧಿಕೃತ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು : ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಿಕೆ ಹಾಗೂ ವಿ.ವಿ ಕ್ಯಾಂಪಸ್‌ಗೆ ಅನಧಿಕೃತ…

1 hour ago

ವಿಶೇಷ ಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಬದ್ಧ

ಬೆಂಗಳೂರು : ವಿಶೇಷ ಚೇತನರ ಬಗ್ಗೆ ಯಾರೂ ಕನಿಷ್ಠ ಭಾವನೆ ಹೊಂದಬೇಕಾಗಿಲ್ಲ. ಅವರಿಗೆ ದೇವರು ವಿಶೇಷವಾದ ಶಕ್ತಿಯನ್ನು ಕೊಟ್ಟಿರುತ್ತಾನೆ. ಹೀಗಾಗಿ…

1 hour ago

ಸಿಎಂ ಹಾಗೂ ಡಿಸಿಎಂ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಬದ್ಧ: ಡಾ. ಶರಣಪ್ರಕಾಶ್‌ ಪಾಟೀಲ್‌

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಾಗಲಿ ಅಥವಾ ಸರ್ಕಾರದಲ್ಲಾಗಲಿ ಯಾವುದೇ ಗೊಂದಲಗಳಿಲ್ಲ. ಸರ್ಕಾರ ಸುಭದ್ರವಾಗಿದೆ. ಸಮರ್ಥ ಆಡಳಿತ ನಡೆಸುತ್ತಿದೆ ಎಂದು ವೈದ್ಯಕೀಯ…

3 hours ago