ಟೆಕ್‌

ವಾಟ್ಸಾಪ್‌ಗೆ ಈಗ ಇನ್ನಷ್ಟು ಭದ್ರತೆ

ಪ್ರಪಂಚದಾದ್ಯಂತ ಹೆಚ್ಚಿನ ಜನರು ಬಳಸುವ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಕಂಪೆನಿಯು ತನ್ನ ಸೆಕ್ಯೂರಿಟಿಯನ್ನು ಮತ್ತಷ್ಟು ಬಲಪಡಿಸುತ್ತಿದೆ. ನೀವು ವಾಟ್ಸಾಪ್ ಬಳಕೆದಾರರೇ? ನೀವು ನಿಮ್ಮ ವಾಟ್ಸಾಪ್ ಹೆಚ್ಚು ಸೆಕ್ಯೂರಿಟಿಯಿಂದ ಕೂಡಿರಬೇಕು ಎಂದು ಬಯಸುವುದಾದರೆ ಇಲ್ಲಿದೆ ನೋಡಿ ವ್ಯಾಟ್ಸಾಪ್‌ನ ಹೊಸ ಫೀಚರ್.

ವಾಟ್ಸಾಪ್ ತನ್ನ ಸೆಕ್ಯೂರಿಟಿ ಫೀಚರ್‌ಗಳನ್ನು ದಿನೇ ದಿನೇ ಬಲಪಡಿಸುತ್ತಿದೆ. ಈಗ ಮತ್ತೊಂದು ಅತ್ಯಾಧುನಿಕ ಸೆಕ್ಯೂರಿಟಿ ಫೀಚರ್ ಅನ್ನು ಅಭಿವೃದ್ಧಿಪಡಿಸಿದೆ. ಅದು “ಪಾಸ್‌ಕೀ ಸಪೋರ್ಟ್’.

ಮೆಟಾ ಕಂಪೆನಿ ಈ ಫೀಚರ್ ಮೇಲೆ 2024ರ ಜನವರಿ ತಿಂಗಳಲ್ಲಿ ಕಾರ್ಯ ಆರಂಭಿಸಿತು. ನಂತರದ ಮೂರು ತಿಂಗಳು ಬೆಟಾ ಟೆಸ್ಟಿಂಗ್ ಮಾಡುವ ಮೂಲಕ, ಈಗ ವಾಟ್ಸಾಪ್ ಬಳಕೆದಾರರಿಗೆ ಜಗತ್ತಿನಾದ್ಯಂತ ಲಭ್ಯಗೊಳಿಸಿದೆ. ಅಂದಹಾಗೆ ‘ಪಾಸ್‌ಕೀ ಸಪೋರ್ಟ್’ ಫೀಚರ್ ಐಫೋನ್ ಬಳಕೆದಾರರಿಗೆ ಲಭ್ಯವಿದೆ. ಆದರೆ ಇದಕ್ಕೂ ಮೊದಲೇ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರಿಗೂ ಈ ಫೀಚರ್ ಅಳವಡಿಸಲಾಗಿದೆ.

ಈ ಸೆಕ್ಯೂರಿಟಿ ಯಾವ ಐಓಎಸ್ ವರ್ಷನ್‌ನಲ್ಲಿ ಲಭ್ಯವಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಈ ಹಿಂದಿನ ಒಂದು ವರದಿ ಪ್ರಕಾರ ಐಒಎಸ್ 17 ಮತ್ತು ಅದರ ನಂತರದ ವರ್ಷನ್‌ಗಳಲ್ಲಿ ‘ಪಾಸ್‌ಕೀ ಸಪೋರ್ಟ್’ ವರ್ಕ್
ಆಗಲಿದೆ ಎಂದು ಹೇಳಲಾಗಿದೆ.

Passkey ಹೇಗೆ ಭದ್ರತೆಯನ್ನು ಹೆಚ್ಚಿಸುತ್ತದೆ? ಎಸ್‌ಎಂಎಸ್‌ ಕೋಡ್‌ಗೆ ಹೋಲಿಸಿದರೆ, ಪಾಸ್‌ ಕೀ ಒಂದು ಅತ್ಯುತ್ತಮ ಭದ್ರತಾ ಫೀಚರ್ ಆಗಿದೆ. ಇದೊಂದು ಅಥೆಂಟಿಕೇಷನ್ ವಿಧಾನವಾಗಿದೆ. ಇದನ್ನು ಫಿಡೊ ಅಲೈಯನ್ಸ್ ನಿಂದ ಅಭಿವೃದ್ಧಿಪಡಿಸಿದ್ದು, ದೊಡ್ಡ ದೊಡ್ಡ ಟೆಕ್ ದೈತ್ಯ ಕಂಪೆನಿಗಳಾದ ಆ್ಯಪಲ್, ಗೂಗಲ್, ಮೈಕ್ರೋಸಾಫ್ಟ್ ಕಂಪೆನಿಗಳು ಅನುಮೋದಿಸಿವೆ.

ಪಾಸ್‌ಕೀ ಸೆಟ್ ಮಾಡುವುದು ಹೇಗೆ?
• ನಿಮ್ಮ ಐಒಎಸ್ ಡಿವೈಸ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ಓಪನ್ ಮಾಡಿ.
• ಸೆಟ್ಟಿಂಗ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ‘Accounts’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
• ‘Passkeys’ ಆಯ್ಕೆ 4ನೇ ಆಕ್ಷನ್ ಆಗಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
• ಮುಂದಿನ ಸ್ಟೀನ್‌ನಲ್ಲಿ ‘Create Passkey’ ಬಟನ್ ಕ್ಲಿಕ್ ಮಾಡಿ.
ನಂತರ ನೀವು Face ID ಅಥವಾ Touch ID ಆಯ್ಕೆಗಳನ್ನು ನೋಡುತ್ತೀರಿ. ಆಯ್ಕೆ ಮಾಡಿ ‘Continue’ ಎಂಬಲ್ಲಿ ಕ್ಲಿಕ್ ಮಾಡಿ.

andolana

Recent Posts

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

8 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

21 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

8 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

9 hours ago

ಮೈಸೂರು: ಬೆಳವಾಡಿ ರಾಯಲ್‌ ಬ್ರದರ್ಸ್‌ ವತಿಯಿಂದ 13ಅಡಿ ಗಣಪ ಪ್ರತಿಷ್ಠಾಪನೆ

ಮೈಸೂರು: ನಗರದಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಚೋರಾಗಿಯೇ ನಡೆಯುತ್ತಿದೆ. ನಗರದ ಬೆಳವಾಡಿಯ ರಾಯಲ್‌ ಬ್ರದರ್ಸ್‌ ವತಿಯಿಂದ ಸತತ ಎಂಟು…

15 hours ago