ರಾಜ್ಯ

ಹಾಸನಾಂಬೆ ದರ್ಶನಕ್ಕೆ ಟೂರ್‌ ಪ್ಯಾಕೇಜ್‌ : ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಿಂದ ಸಾರಿಗೆ ಸೌಲಭ್ಯ

ಬೆಂಗಳೂರು : ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಭಕ್ತರು ಹಾಗೂ ಪ್ರವಾಸಿಗರಿಗೆ ಪ್ರವಾಸಿತಾಣಗಳನ್ನು ಪರಿಚಯಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದ ವತಿಯಿಂದ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಂದ ಟೂರ್ ಪ್ಯಾಕೇಜ್ ಕಲ್ಪಿಸಲಾಗಿದೆ.

ವೋಲ್ವೊ, ಅಶ್ವಮೇಧ ಹಾಗೂ ಕರ್ನಾಟಕ ಸಾರಿಗೆಗಳಲ್ಲಿ ಟೂರ್ ಪ್ಯಾಕೇಜ್ ರೂಪಿಸಿದ್ದು, ಅ.೨೨ರವರೆಗೆ ಈ ಸೌಲಭ್ಯವಿರುತ್ತದೆ. ಬೆಂಗಳೂರಿನಿಂದ ವೋಲ್ವೊ ಬಸ್ ಮೂಲಕ ಹಾಸನ ತಲುಪಿ, ಹಾಸನಾಂಬೆ ದೇವಿ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮನ ಹೊಸಕೋಟೆ ದೇವಾಲಯದ ಸ್ಥಳಗಳನ್ನು ವೀಕ್ಷಿಸಬಹುದಾಗಿದ್ದು, ಒಟ್ಟು ೪೭೦ ಕಿ.ಮೀ. ಪ್ರಯಾಣವಿದ್ದು, ಬಸ್ಸು ಬೆಳಿಗ್ಗೆ ೬ ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡಲಿದೆ.

ವಯಸ್ಕರಿಗೆ (ಹಾಸನಾಂಬೆ ದೇವಿ ೧,೦೦೦ ರೂ. ಟಿಕೆಟ್ ದರ್ಶನ ಸೌಲಭ್ಯ ಸೇರಿದಂತೆ) ೨,೫೦೦ ರೂ., ಮಕ್ಕಳಿಗೆ (೧,೦೦೦ ರೂ. ಟಿಕೆಟ್‌ನ ದರ್ಶನ ಸೌಲಭ್ಯ ಸೇರಿದಂತೆ) ೨,೨೦೦ ರೂ. ದರ ನಿಗದಿ ಮಾಡಲಾಗಿದೆ.
ಇನ್ನು ಇದೇ ಮಾರ್ಗದಲ್ಲಿ ಹೊರಡುವ ಅಶ್ವಮೇಧ ಬಸ್‌ನಲ್ಲಿ ವಯಸ್ಕರಿಗೆ ೧,೧೦೦ ರೂ. ಟಿಕೆಟ್, ದೇವಿಯ ದರ್ಶನ ಸೇರಿದಂತೆ ೨,೦೦೦ ರೂ., ಮಕ್ಕಳಿಗೆ ೧,೧೦೦ ರೂ. ಟಿಕೆಟ್‌ನ ದರ್ಶನ ಸೌಲಭ್ಯ ಸೇರಿದಂತೆ ೧,೯೦೦ ರೂ. ದರ ಇರಲಿದೆ.

ಇದನ್ನೂ ಓದಿ:-ಪಿಎಫ್‌ಐ ಸಂಘಟನೆ ಬೆಂಬಲಿಸಿ ಪೋಸ್ಟ್‌ : ಧಾರ್ಮಿಕ ಮುಖಂಡನ ಬಂಧನ

ಸಾರಿಗೆ ಬಸ್ ಮೂಲಕ ಹಾಸನ, ಆಲೂರು ಮಾರ್ಗವಾಗಿ ಹಾಸನಾಂಬೆ ದೇವಾಲಯ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮನ ಹೊಸಕೋಟೆ ದೇವಾಲಯ ವೀಕ್ಷಿಸಬಹುದಾಗಿದ್ದು, ಒಟ್ಟು ೯೦ ಕಿ.ಮೀ. ಪ್ರಯಾಣ ಇರುತ್ತದೆ.

ಹಾಸನ ನಗರ ಬಸ್ ನಿಲ್ದಾಣದಿಂದ ಬೆಳಿಗ್ಗೆ ೮ ಗಂಟೆಗೆ ಬಸ್ ಹೊರಡಲಿದ್ದು, ಹಾಸನಾಂಬೆ ದೇವಿಯ ೧,೦೦೦ ರೂ. ಟಿಕೆಟ್ ದರ್ಶನ ಸೌಲಭ್ಯ ಸೇರಿದಂತೆ ೧,೪೦೦ ರೂ., ಮಕ್ಕಳಿಗೆ ೧,೩೦೦ ರೂ. ಟಿಕೆಟ್ ದರ ಇರಲಿದೆ.
ಜಿಲ್ಲೆಯ ಪ್ರವಾಸಿ ತಾಣಗಳಾದ ಬೇಲೂರು ಚನ್ನಕೇಶದೇವಾಲಯ, ಯಗಚ ಜಲಾಶಯ, ಪುಷ್ಪಗಿರಿ, ಹೊಯ್ಸಳೇಶ್ವರ ದೇವಾಲಯ, ಶ್ರವಣಬೆಳಗೊಳ, ವಿಂದ್ಯಾಗಿರಿ ಬೆಟ್ಟ, ಚಂದಗಿರಿಬೆಟ್ಟ, ಮಾಲೆಕಲ್ಲು ತಿರುಪತಿ, ಜೇನುಕಲ್ಲು ಸಿದ್ದೇಶ್ವರ, ಹೇಮಾವತಿ ಜಲಾಶಯ, ಗೊರೂರು ಜಲಾಶಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿಗೆ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂ. ೭೭೬೦೯ ೯೦೫೧೮/ ೭೭೬೦೯ ೯೦೫೧೯/ ೭೭೬೦೯ ೯೦೫೨೩ ಸಂಪರ್ಕಿಸಬಹುದು. ಜೊತೆಗೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿದೆ.

ಆಂದೋಲನ ಡೆಸ್ಕ್

Recent Posts

ಬಿಡದಿ ಹೋರಾಟಕ್ಕೆ ಜೆನ್‌-ಝೀ ಗಳು ಬರಲಿ ; ದೇವನೂರು ಮಹದೇವ ಕರೆ

ಮೈಸೂರು: ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಆಕಾಂಕ್ಷೆ ಪ್ರಭುತ್ವಕ್ಕೆ ಇರಬೇಕು. ಭೂಮಿ ನೀಡುವ ರೈತರ ಬದುಕಿನ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ…

5 hours ago

ಕನ್ನಡ ಭಾಷ ಶಿಕ್ಷಕರ ಪ್ರತ್ಯೇಕ ನೇಮಕಕ್ಕೆ ಸರ್ಕಾರ ಅಸ್ತು ; ಸ್ವಾಗತಾರ್ಹ

ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್‌ಟಿಆರ್ ಹಾಗೂ ಎಚ್‌ಎಸ್‌ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…

9 hours ago

ಶೀಘ್ರದಲ್ಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್?‌

ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್‌ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…

13 hours ago

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

15 hours ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

16 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

17 hours ago