ರಾಜ್ಯ

ಡಿಸೆಂಬರ್‌ 14ರಿಂದ ಮಂಗಳೂರು – ಬೆಂಗಳೂರು ನಡುವಿನ ಈ ರೈಲುಗಳು ಸ್ಥಗಿತ; ಕಾರಣವೇನು?

ಡಿಸೆಂಬರ್‌ 14ರಿಂದ 22ರವರೆಗೆ ಬೆಂಗಳೂರು ಹಾಗೂ ಮಂಗಳೂರು ಮತ್ತು ಮೈಸೂರು – ಮಂಗಳೂರು, ಮೈಸೂರು ಅರಸಿಕೆರೆ, ಮೈಸೂರು – ತಾಳಗುಪ್ಪ ನಡುವೆ ಸಂಚರಿಸುವ ಬಹುತೇಕ ಎಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಸನ ಜಂಕ್ಷನ್‌ ರೈಲು ನಿಲ್ದಾಣ ಯಾರ್ಡ್‌ ಅನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಈ ವ್ಯತ್ಯಯವಾಗಲಿದೆ.

ಈ ಸಮಯದಲ್ಲಿ ಹಾಸನ ಜಂಕ್ಷನ್‌ನ ಸಿಗ್ನಲಿಂಗ್‌, ಇಂಟರ್‌ಲಾಕ್ ಹಾಗೂ ವಿವಿಧ ಇಂಜಿನಿಯರಿಂಗ್‌ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಲು ರೈಲ್ವೆ ಸಚಿವಾಲಯ ಅನುಮತಿ ನೀಡಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರದ್ದಾದ ರೈಲುಗಳ ಮಾಹಿತಿ: 

ಡಿಸೆಂಬರ್‌ 14ರಿಂದ 22ರವರೆಗೆ ರದ್ದಾದ ರೈಲುಗಳು
06214 ಮೈಸೂರು-ಅರಸೀಕೆರೆ
06213 ಅರಸೀಕೆರೆ – ಮೈಸೂರು
16207 ಯಶವಂತಪುರ-ಮೈಸೂರು
16208 ಮೈಸೂರು-ಯಶವಂತಪುರ
16222 ಮೈಸೂರು -ತಾಳಗುಪ್ಪ
06268 ಮೈಸೂರು-ಅರಸೀಕೆರೆ
06267 ಅರಸೀಕೆರೆ – ಮೈಸೂರು
06269 ಮೈಸೂರು -ಎಸ್ಎಂವಿಟಿ ಬೆಂಗಳೂರು

16221 ತಾಳಗುಪ್ಪ – ಮೈಸೂರು ( ಡಿಸೆಂಬರ್‌ 15 ರಿಂದ ಡಿಸೆಂಬರ್‌ 23ರವರೆಗೆ )

ಬೆಂಗಳೂರು- ಮಂಗಳೂರು- ಕಣ್ಣೂರು ಮಾರ್ಗವಾಗಿ ಸಂಚರಿಸಲಿರುವ ಮತ್ತು ರೈಲು ಸಂಖ್ಯೆ ರೈಲು ಸಂಖ್ಯೆ 16511 ಹಾಗೂ ಬೆಂಗಳೂರು- ಕಾರವಾರ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ 16595 ಅನ್ನು ಡಿಸೆಂಬರ್ 16ರಿಂದ ಡಿಸೆಂಬರ್‌ 20ರವರೆಗೆ ರದ್ದು ಮಾಡಲಾಗಿದೆ.

ಕಣ್ಣೂರು- ಮಂಗಳೂರು- ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿರುವ ರೈಲು ಸಂಖ್ಯೆ 16512 ಮತ್ತು ರೈಲು ಸಂಖ್ಯೆ ಕಾರವಾರ – ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್‌ 16596 ಅನ್ನು ಡಿಸೆಂಬರ್ 17 ರಿಂದ ಡಿಸೆಂಬರ್ 21 ತನಕ ರದ್ದು ಮಾಡಲಾಗಿದೆ. ವಾರಕ್ಕೆ ಮೂರು ಬಾರಿ ಸಂಚರಿಸಲಿರುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ( ಯಶವಂತಪುರ – ಮಂಗಳೂರು 16575 ) ಅನ್ನು ಡಿಸೆಂಬರ್‌ 14, 17, 19 ಹಾಗೂ 21ರಂದು ರದ್ದು ಮಾಡಲಾಗಿದೆ. ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಸಂಚರಿಸುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ 16576 ಅನ್ನು ಡಿಸೆಂಬರ್‌ 15, 18, 20 ಹಾಗೂ 22ರಂದು ರದ್ದುಗೊಳಿಸಲಾಗಿದೆ. ಯಶವಂತಪುರ – ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಖ್ಯೆ 16515 ಅನ್ನು ಡಿಸೆಂಬರ್‌ 13, 15, 18, 20 ಹಾಗೂ 22ರಂದು ರದ್ದು ಮಾಡಲಾಗಿದೆ.

ಹಾಗೆಯೇ ಕಾರವಾರ – ಯಶವಂತಪುರ ಎಕ್ಸ್‌ಪ್ರೆಸ್‌ ರೈಲು 16516 ಅನ್ನು ಡಿಸೆಂಬರ್‌ 14, 16, 19, 21 ಹಾಗೂ 23ರಂದು ರದ್ದು ಮಾಡಲಾಗಿದೆ. ಡಿಸೆಂಬರ್‌ 16 ಹಾಗೂ 17ರಂದು ಯಶವಂತಪುರ – ಮಂಗಳೂರು ಸಾಪ್ತಾಹಿಕ ರೈಲನ್ನು ( 16539 / 16540 ) ರದ್ದು ಮಾಡಲಾಗಿದೆ.

ಯಾವ ರೈಲುಗಳು ಕೆಲಸ ನಿರ್ವಹಿಸಲಿವೆ?

ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌, ಬೆಂಗಳೂರು – ಮುರಡೇಶ್ವರ – ಬೆಂಗಳೂರು ( 16585 / 16586 ) ರೈಲು ಕಾರ್ಯ ನಿರ್ವಹಿಸಲಿದ್ದು, ಇದು ಈ ಸಮಯದಲ್ಲಿ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಏಕೈಕ ರೈಲಾಗಿದೆ. ಈ ರೈಲು 

16585 ರೈಲು:  14.12.2023 to 16.12.2023ರವರೆಗೆ  ಬೆಂಗಳೂರು, ಯಶವಂತಪುರ ಬೈಪಾಸ್, ಚಿಕ್ಕಬಾಣಾವರ, ನೆಲ ಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಈ ಬದಲಾದ ಮಾರ್ಗದಲ್ಲಿ ಚಲಿಸಲಿದೆ. ಮತ್ತು 17.12.2023 to 22.12.2023ರವರೆಗೆ ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ, ಹಾಸನ ಮಾರ್ಗದಲ್ಲಿ ಚಲಿಸಲಿದೆ.  

16586 ರೈಲು: 14.12.2023 to 16.12.2023ರವರೆಗೆ ಹಾಸನ, ಶ್ರವಣಬೆಳಗೊಳ, ನೆಲಮಂಗಲ, ಚಿಕ್ಕಬಾಣಾವರ, ಯಶ ವಂತಪುರ ಬೈಪಾಸ್ ಮತ್ತು ಎಸ್‌ಎಂವಿಟಿ ಬೆಂಗಳೂರು ಈ ಬದಲಿ ಮಾರ್ಗದಲ್ಲಿ ಚಲಿಸಲಿದೆ. ಮತ್ತು 17.12.2023 to 22.12.2023ರವರೆಗೆ ಹಾಸನ, ಅರಸೀಕೆರೆ, ತುಮಕೂರು, ಯಶವಂತಪುರ ಬೈಪಾಸ್ ಮತ್ತು ಎಸ್‌ಎಂವಿಟಿ ಬೆಂಗಳೂರು ಈ ಬದಲಿ ಮಾರ್ಗದಲ್ಲಿ ಚಲಿಸಲಿದೆ. 

 

andolana

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

18 mins ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

22 mins ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

25 mins ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

29 mins ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

34 mins ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

38 mins ago