ಬೆಂಗಳೂರು : ವಿಜಯನಗರ ಆಟೋಮೋಟಿವ್ ಸ್ಪೋರ್ಟ್ಸ್ ಅಸೋಸಿಯೇಷನ್ (VASA), ಎಫ್.ಎಂ.ಎಸ್.ಸಿ.ಐ ಹಾಗೂ ಇಂಡಿಯಾ ಮೋಟಾರ್ ಸ್ಪೋರ್ಟ್ಸ್ನ ವತಿಯಿಂದ ಇಂದಿನಿಂದ(ಜೂ.21) ರ್ಯಾಲಿ ಆಫ್ ಬೆಂಗಳೂರು ನಡೆಯುತ್ತಿದ್ದು, ನಾಳೆ ಫೈನಲ್ ಹಣಾಹಣೆ ಇರಲಿದೆ.
ಜೂನ್ 21 ಮತ್ತು 22ರಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಶಕ್ತಿ ಹಿಲ್ ರೆಸಾರ್ಟ್ನಲ್ಲಿ ನಡೆಯುತ್ತಿದೆ . ಜೆಕೆ ಟೈರ್ ಮೋಟಾರ್ ಸ್ಪೋರ್ಟ್ ಮತ್ತು ವಂಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್ನ ಬೆಂಬಲದಿಂದ ಅನೇಕ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ.
ರ್ಯಾಲಿ ಆಫ್ ಬೆಂಗಳೂರು ಸ್ಪರ್ಧಿಗಳ ಪಟ್ಟಿಯನ್ನು INTSDRC-1 (ಒವರ್ಆಲ್), INTSDRC-2, ಪ್ರೊ ಸ್ಟಾಕ್, ವುಮೆನ್ಸ್, ಕಪಲ್ (INTSDRC-C), ಮತ್ತು ಕಾರ್ಪೊರೇಟ್ (INTSDRC-Corp) ವರ್ಗಗಳು ಸೇರಿವೆ.
ರ್ಯಾಲಿಯಲ್ಲಿ ಭಾಗವಹಿಸುತ್ತಿರುವ ಚಾಲಕರು ಮತ್ತು ಸಿಬ್ಬಂದಿಗೆ ಸಮಗ್ರ ವೈದ್ಯಕೀಯ ನೆರವನ್ನು ಒದಗಿಸಲು ನ್ಯಾನೋ ಆಸ್ಪತ್ರೆಗಳು ಮತ್ತು ಟ್ರೂಸ್ಕ್ಯಾನ್ ಡಯಾಗ್ನೋಸ್ಟಿಕ್ಸ್ ಆರೋಗ್ಯ ಸಂಸ್ಥೆಗಳು ನೆರವಾಗುತ್ತಿವೆ. ಜೊತೆಗೆ ಕೆಫೆ ಪೆಟ್ರಿಕ್ಕೋರ್, ಆಕ್ಟೇನ್ಪಿಟ್ಸ್ ಮತ್ತು ಗಿಗಾಬೈಟ್ ಇಂಕ್ (ಟೆಕ್ ಪಾರ್ಟ್ನರ್) ಮುಂತಾದ ಪ್ರಮುಖ ಸಹಯೋಗಿಗಳೂ ರ್ಯಾಲಿಗೆ ಬೆಂಬಲ ನೀಡುತ್ತಿವೆ.
ದೇಶದ ಅತಿಪುರಾತನ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆಗಳಲ್ಲಿ ಒಂದಾದ ವಿಜಯನಗರ ಆಟೋಮೋಟಿವ್ ಸ್ಪೋರ್ಟ್ಸ್ ಅಸೋಸಿಯೇಷನ್ (VASA) ಈ ವರ್ಷ ತನ್ನ 30ನೇ ವರ್ಷದ ಸಂಭ್ರಮದಲ್ಲಿದ್ದು, ಈ ರ್ಯಾಲಿ ಸಂಸ್ಥೆಯ ಪರಂಪರೆಯ ಹೆಮ್ಮೆಗೂ ಸಾಕ್ಷಿಯಾಗಲಿದೆ.
ಮೈಸೂರು : ಚಾಮುಂಡಿ ಬೆಟ್ಟ ಉಳಿಸಿ ಎಂಬ ಆಶಯದಲ್ಲಿ ಹಲವು ಸಂಘಟನೆಗಳು ಹಾಗೂ ನಾಗರಿಕರು ಸೇರಿ ‘ಚಾಮುಂಡಿಬೆಟ್ಟ ಸಂರಕ್ಷಣೆಗಾಗಿ ನಡಿಗೆ’…
ಬೆಂಗಳೂರು : ಬೆಂಗಳೂರು ನಗರದ ಜನಸಂಖ್ಯೆ ಮುಂದಿನ 20 ರಿಂದ 25 ವರ್ಷಗಳಲ್ಲಿನ ದ್ವಿಗುಣಗೊಳ್ಳಲಿದ್ದು, ನಗರದ ಮೂಲ ಸೌಕರ್ಯ ಕೊರತೆ…
ಮೈಸೂರು : ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕುಕ್ಕರಹಳ್ಳಿ ರೈಲ್ವೆ ಗೇಟ್ ಬಳಿ ನಡೆದಿದೆ.ಜ…
ಶಿರಸಿ : ಇಲ್ಲಿನ ಯಲ್ಲಾಪುರದಲ್ಲಿ ನಡೆದ ವಿವಾಹಿತೆ ರಂಜಿತಾ ಹತ್ಯೆ ಕೇಸ್ಗೆ ಬಿಗ್ ಟ್ವೀಸ್ಟ್ ಸಿಕ್ಕಿದ್ದು, ಹತ್ಯೆ ಆರೋಪಿ ರಫೀಕ್…
ಬೆಂಗಳೂರು : ಹಿಂದುಳಿದವರು ಸಂಘಟಿಸಿದರೆ ಜಾತೀಯತೆಯಾಗುವುದಿಲ್ಲ. ಉಪಜಾತಿಗಳಲ್ಲಿ ವಿಭಜಿಸದೇ ಒಂದೇ ಶಕ್ತಿಯಾಗಿ ಸಂಘಟಿತರಾಗಿ ಎಂದು ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ…
ಬೆಂಗಳೂರು: ಬಳ್ಳಾರಿ ಗಲಭೆಗೆ ಕಾರಣಕರ್ತರಾದ ಶಾಸಕ ನಾರಾ ಭರತ್ರೆಡ್ಡಿಯನ್ನು ದ್ವೇಷಭಾಷಣ ಕಾಯ್ದೆಯಡಿ ಬಂಧಿಸಿ ಸರ್ಕಾರ ಜೈಲಿಗೆ ಏಕೆ ಹಾಕಿಲ್ಲ ಎಂದು…