ಬೆಂಗಳೂರು:ಸಮುದಾಯದ ಭಾವನೆಗಳಿಗೆ ಧಕ್ಕೆ ತಾರದೆ ತಕ್ಷಣವೇ ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರದ ಕುರಿತು ಯಾರೊಬ್ಬರು ಮಾತನಾಡಬಾರದು ಎಂದು ಆದಿ ಚುಂಚನಗಿರಿ ಪೀಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಕೆಲಸಗಳನ್ನು ಯಾರೊಬ್ಬರೂ ಮಾಡಬಾರದು. ಪ್ರಸ್ತುತ ಎದ್ದಿರುವ ವಿವಾದ ಸುಖಾಂತ್ಯ ಕಾಣಬೇಕು ಎಂಬುದು ನಮ್ಮ ಆಶಯವಾಗಿದೆ. ಇಲ್ಲಿಗೆ ಈ ವಿಷಯವನ್ನು ಎಲ್ಲರೂ ಕೈಬಿಡಬೇಕೆಂದು ಶ್ರೀಗಳು ಸಲಹೆ ಮಾಡಿದರು.
ಸಚಿವರಾದ ಆರ್.ಅಶೋಕ್, ಡಾ.ಅಶ್ವಥನಾರಾಯಣ, ಗೋಪಾಲಯ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಕೂಡ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆಂಬ ವಿಶ್ವಾಸವಿದೆ. ಅವರಿಗೆ ಇತಿಹಾಸದ ಬಗ್ಗೆ ತಿಳಿದಿದೆ ಎಂದು ಭಾವಿಸುತ್ತೇನೆ ಎಂದರು.
ಇನ್ನು ಮುಂದೆ ಅವರು ಕೂಡ ಸುಮ್ಮನಾಗುತ್ತಾರೆ ಎಂದು ಭಾವಿಸುತ್ತೇನೆ ಮತ್ತು ಇತಿಹಾಸದ ಬಗ್ಗೆ ಎಲ್ಲರಿಗೂ ತಿಳಿ ಹೇಳಲಾಗಿದೆ. ಕಲ್ಪನೆ ಮಾಡಿಕೊಂಡು ಬರೆದರೆ ಕಾದಂಬರಿ, ಶಾಸನ ಮತ್ತು ಇತಿಹಾಸದ ಹಿನ್ನಲೆಯಿಂದ ಬರೆದರೆ ಮುಂದಿನ ಪೀಳಿಗೆಗೆ ಶಕ್ತಿಯಾಗುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಉರಿಗೌಡ, ನಂಜೇಗೌಡರು ಕಾಲ್ಪನಿಕ ವ್ಯಕ್ತಿಗಳೋ ಅಥವಾ ಜೀವಂತವಾಗಿ ಇದ್ದರೋ ಎಂಬುದರ ಬಗ್ಗೆ ನಮಗೆ ಇದುವರೆಗೂ ಯಾವುದೇ ಮಾಹಿತಿ ಕೂಡ ಕಂಡುಬಂದಿಲ್ಲ. ಯುವಕರು ಮತ್ತು ಸಮಕಾಲೀನ ಜಗತ್ತಿನಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಮಿಥ್ಯಗಳು ಯುವಕರ ಶಕ್ತಿಗಳನ್ನು ಹಾಳುಮಾಡಬಾರದು ಎಂದು ಕಿವಿಮಾತು ಹೇಳಿದರು.
ಉರಿಗೌಡ, ನಂಜೇಗೌಡ ಕುರಿತು ಶಾಸನಗಳು ಸಿಕ್ಕಲ್ಲಿ ಅದನ್ನು ಸುಕ್ಷೇತ್ರ ಆದಿಚುಂಚನಗಿರಿ ಸಂಸ್ಥಾನಕ್ಕೆ ತಂದೊಪ್ಪಿಸಿ. ಇತಿಹಾಸವನ್ನು ವಿಮರ್ಶೆ ಮಾಡುವಂತಹ ಐತಿಹಾಸಿಕ ಶ್ರೇಷ್ಠರು ನಮ್ಮಲ್ಲಿದ್ದಾರೆ. ಮಾಹಿತಿಯನ್ನು ಓರೆಗೆ ಹಚ್ಚಿ ನಂತರ ಅದರ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
ಕಾಲ್ಪನಿಕ ಪಾತ್ರದ ಕುರಿತು ಯಾರೊಬ್ಬರು ಮಾತನಾಡಬಾರದು – ಆದಿ ಚುಂಚನಗಿರಿ ಪೀಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
Previous Articleಯುವಕ್ರಾಂತಿ ಸಮಾವೇಶ: ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ: ರಾಗಾ ವಾಗ್ದಾಳಿ
Next Article ಚುನಾವಣೆ ಬಳಿಕ ಸಿಎಂ ತೀರ್ಮಾನ: ಯಡಿಯೂರಪ್ಪ