ರಾಜ್ಯ

ನವೆಂಬರ್‌-ಡಿಸೆಂಬರ್‌ ನಲ್ಲಿ ಹೆಚ್ಚಾದ ಮಾನವ-ಹುಲಿ ಸಂಘರ್ಷ

ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಪ್ರಮುಖವಾಗಿ ಮೈಸೂರು, ಚಾಮರಾಜನಗರ ಭಾಗಗಳಲ್ಲಿ ಚಳಿಗಾಲ ಆರಂಭದಲ್ಲಿಯೇ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ವರ್ಷದ ಕೊನೆಯಲ್ಲಿ ಉಳಿದ ತಿಂಗಳುಗಳಿಗಿಂತ ಸಂಘರ್ಷಗಳ ಸಂಖ್ಯೆ ಏರಿಕೆ ಕಂಡಿದೆ. ಕಾಡಂಚಿನ ಗ್ರಾಮಗಳಲ್ಲಿನ ಜಾನುವಾರುಗಳು, ಮಾನವರ ಮೇಲೆ ದಾಳಿ ನಡೆಯುತ್ತಿದ್ದು, ಮಾನವ-ಪ್ರಾಣಿ ಸಂಘರ್ಷ ಮಾಹಿತಿ ಇಲ್ಲಿದೆ.

ನ.2ರಂದು ಬಂಡೀಪುರದ ಹೆಡಿಯಾಲ ಓಂಕಾರ ವಲಯದ ಮಹಾದೇವನಗರಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿತು. ರೊಚ್ಚಿಗೆದ್ದ ರೈತರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ನ.6ರಂದು ಕಾಡಬೇಗೂರು ಕಾಲೋನಿಯಲ್ಲಿ ಕೃಷಿಕ ಬಾಲಾಜಿ ನಾಯಕ ಎಂಬುವರನ್ನು ಹುಲಿ ಕೊಂದುಹಾಕಿತ್ತು..

ನ.24ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಗಾಯಗೊಂಡಿದ್ದ ಗಂಡು ಹುಲಿಯೊಂದು ಮೃತಪಟ್ಟಿದೆ.

ನ.24ರಂದು ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ದನ ಮೇಯಿಸುತ್ತಿದ್ದ ರತ್ನಮ್ಮ (49) ಅವರ ಮೇಲೆ ಹುಲಿ ದಾಳಿ ನಡೆಸಿ ಬಲಿ ತೆಗೆದುಕೊಂಡಿತ್ತು.

ನ.28ರಂದು ಬಂಡೀಪುರದ ಹೆಡಿಯಾಲ ಓಂಕಾರ ವಲಯದಲ್ಲಿ ದನಗಾಯಿ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದರು.

ನ.29ರಂದು ಮೈಸೂರು ತಾಲೂಕಿನಲ್ಲೂ ಹುಲಿ ಕಾಣಿಸಿಕೊಂಡಿತ್ತು. ಸೆರೆಗೆ ಸತತವಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.

ಡಿ.6ರಿಂದ ನಾಗರಹೊಳೆ ಕಾಡಂಚಿನ ಶೆಟ್ಟಿಹಳ್ಳಿ ನೇಗತ್ತೂರು ಗ್ರಾಮದ ಬಳಿ ಹುಲಿ ಕಂಡಿದ್ದು, ಕಾಡಿಗಟ್ಟುವ ಕೆಲಸ ನಡೆಯುತ್ತಿದೆ.

ಡಿ.8 ಕೊತ್ತಲವಾಡಿ ಗ್ರಾಮದ ಕಂದಾಯ ಇಲಾಖೆ ಜಮೀನಿನ ಪೊದೆಯೊಂದರಲ್ಲಿ ಎರಡು ಹುಲಿಗಳ ಕಳೇಬರ ಪತ್ತೆಯಾಗಿತ್ತು.

ಡಿ.12ರಂದು ಗುಂಡ್ಲುಪೇಟೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಆಡಿನ ಕಣಿವೆ ಗ್ರಾಮದ ಬಸವಯ್ಯ (55) ನನ್ನು ಕೊಂದು ಹಾಕಿತ್ತು.

2022ರ ನವೆಂಬರ್‌-ಡಿಸೆಂಬರ್‌ ಹುಲಿ ದಾಳಿಗಳು.
ನವೆಂಬರ್‌ 8, 2022: ಹಸುವೊಂದು ಮೇವು ಮೇಯುವಾಗ ದಾಳಿ ಮಾಡಿ ಬಲಿ ತೆಗೆದುಕೊಂಡ ಘಟನೆ ಹನಗೋಡು ಸಮೀಪದ ಬಿ ಆರ್ ಕಾವಲು ಅರಣ್ಯದಲ್ಲಿ ನಡೆದಿತ್ತು. ಗೌಡಿಕೆರೆ ಗ್ರಾಮದ ಶೇಖರ್ ಎಂಬುವವರಿಗೆ ಸೇರಿದ ಹಸುವನ್ನು ಕೊಂದಿರುವ ಹುಲಿ ಸುಮಾರು ಅಂದಾಜು 200 ಮೀ. ನಷ್ಟು ಎಳೆದೊಯ್ದು ಬಿಟ್ಟು ಹೋಗಿತ್ತು.

ನವೆಂಬರ್‌ 22, 2022: ಕೊಡಗಿನ ಸ್ವಾತಿ ಕುಟ್ಟಯ್ಯ ಒಡೆತನದ ಕೊಟ್ಟಿಗೆಗೆ ನುಗ್ಗಿದ್ದ ಹುಲಿ ಹಸು ಮೇಲೆ ದಾಳಿ ನಡೆಸಿತ್ತು.

ಡಿಸೆಂಬರ್‌ 14, 2022: ಮೈಸೂರಿನ ಬಳ್ಳೂರು ಹುಂಡಿ ಬಳಿ ದನ ಮೇಯಿಸುತ್ತಿರುವಾಗ ಸ್ವಾಮಿ ದಾಸಯ್ಯ ಎಂಬುವವರ ಮೇಲೆ ಹುಲಿ ದಾಳಿ ನಡೆಸಿತ್ತು. ಈ ವೇಳೆ ಜತೆಗಿದ್ದ ದನಗಾಹಿಗಳಿಬ್ಬರು ಕಲ್ಲು ತೂರಿದ ಮೇಲೆ ಹುಲಿ ದಾಸಯ್ಯ ಅವರನ್ನು ಬಿಟ್ಟು ಹೋಗಿತ್ತು. ಆದರೆ ಪಂಜದಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿತ್ತು.

andolanait

Recent Posts

ಮೈಸೂರು | ತಾಲ್ಲೂಕು ಕಚೇರಿಗೆ ಆಯುಕ್ತರ ದಿಢೀರ್‌ ಭೇಟಿ, ಕಡತ ಪರಿಶೀಲನೆ

ಮೈಸೂರು : ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರು ಬುಧವಾರ ತಾಲ್ಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ…

19 mins ago

ರಾಜ್ಯದಲ್ಲಿ ಏ.15ರಿಂದ ವಸತಿ ಗಣತಿ

ಬೆಂಗಳೂರು : ರಾಜ್ಯದಲ್ಲಿ ಏಪ್ರಿಲ್ 15 ರಿಂದ ಮೇ 15 ರವರೆಗೆ ’ಮನೆಗಳ ಪಟ್ಟಿ ಮತ್ತು ವಸತಿ ಗಣತಿ’ ಪ್ರಕ್ರಿಯೆ…

30 mins ago

ಸದನದಲ್ಲಿ ಮಾತನಾಡಲು ಅವಕಾಶ ನಿರಾಕರಣೆ : ರಾಹುಲ್‌ ಗಾಂಧಿ

ಹೊಸದಿಲ್ಲಿ : ಈ ಸದನವು ಒಂದು ಪಕ್ಷವನ್ನು ಪ್ರತಿನಿಧಿಸುವುದಿಲ್ಲ, ಬದಲಾಗಿ ಇಡೀ ದೇಶವನ್ನು ಪ್ರತಿನಿಧಿಸುತ್ತದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ…

52 mins ago

13 ವರ್ಷಗಳಿಂದ ಕೋಮಾ : ಹರೀಶ್‌ ರಾಣಾ ದಯಾಮರಣಕ್ಕೆ ಸುಪ್ರೀಂ ಅನುಮತಿ

ಹೊಸದಿಲ್ಲಿ : ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್‌ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ ಅನುಮತಿ ನೀಡಿದೆ. ಚಲಿಸಲು ಅಥವಾ ಮಾತನಾಡಲು…

1 hour ago

ಹಾರ್ಮುಜ್‌ ಜಲಸಂಧಿ ಬಳಿ ಅಮೇರಿಕಾ ಅಬ್ಬರ: ಇರಾನ್‌ನ 16 ನೌಕೆಗಳು ಧ್ವಂಸ

ಟೆಹರಾನ್:‌ ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ಹಾರ್ಮುಜ್‌ ಜಲಸಂಧಿಯ ಬಳಿ ನೌಕಾ ಮೈನ್‌ಗಳನ್ನು ಅಳವಡಿಸಲು ಸಜ್ಜಾಗಿದ್ದ ಇರಾನ್‌ನ 16…

3 hours ago

90 ದಿನದೊಳಗೆ ಅಂಗನವಾಡಿ ಖಾಲಿ ಹುದ್ದೆ ಭರ್ತಿಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಹುದ್ದೆ ಖಾಲಿಯಾದ 90 ದಿನಗಳ ಒಳಗಾಗಿ ಭರ್ತಿ ಮಾಡಬೇಕು ಎಂದು ಕಳೆದ ಡಿಸೆಂಬರ್‌ನಲ್ಲೇ ಜಿಲ್ಲಾಧಿಕಾರಿಗಳು…

3 hours ago