ಹುಬ್ಬಳ್ಳಿ: ಬಡವರಿಗೆ ಹಣದಾಸೆ ತೋರಿಸಿ ಅಕ್ರಮವಾಗಿ ಪಡಿತರ ಅಕ್ಕಿ ಖರೀದಿಸಿ ಬೇರೆ ರಾಜ್ಯಕ್ಕೆ ಹೆಚ್ಚಿನ ಬೆಲೆ ಸಾಗಟ ಮಾಡಲು ಸಂಗ್ರಹ ಮಾಡಿದ ಗೂಡೌನ ಮೇಲೆ ಹುಬ್ಬಳ್ಳಿ ಸಿಸಿಬಿ ಘಟಕದ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಯಾರ್ಡದಲ್ಲಿರುವ ದಾಸ್ತಾನು ಮಳಿಗೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ಸುಮಾರು 50 ಕೆಜಿಯ ಸುಮಾರಿ 5,00,000 ಲಕ್ಷ ರೂಪಾಯಿ ಮೌಲ್ಯದ 450 ಚೀಲ ಪಡಿತರ ಅಕ್ಕಿ ಹಾಗೂ ನಾಲ್ಕು ವಾಹನಗಳ ಸೇರಿ ಒಂಬತ್ತು ಲಕ್ಷ ಮೌಲ್ಯದ ಅಕ್ಕಿ ಹಾಗೂ ನಾಲ್ಕು ವಾಹನ ಜಪ್ತಿ ಮಾಡಲಾಗಿದ್ದಾರೆ.
ಇನ್ನೂ ಷಣ್ಮುಖಪ್ಪ ತಂದೆ ಚೆನ್ನಪ್ಪ ಬೆಟಗೇರಿ ಈತನು ಸರ್ಕಾರದಿಂದ ಬಿಪಿಎಲ್ ಕಾರ್ಡದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು 10 ರಿಂದ 15 ರೂಪಾಯಿ ಬೆಲೆಗೆ ಬಡವರಿಗೆ ಹಣದಾಸೆ ತೋರಿಸಿ ಸಾರ್ವಜನಿಕರಿಂದ ಖರೀದಿಸಿ ಮಾಡಿ, ಬಳಿಕ ಅದೇ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಂಜುನಾಥ ಹರ್ಲಾಪುರ ಎನ್ನುವರಿಗೆ ಮಾರಾಟ ಮಾಡುತ್ತಿದ್ದನಂತೆ. ಮಂಜುನಾಥ ಹರ್ಲಾಪುರ ವ್ಯಕ್ತಿಯು ಈತನು ಸುಮಾರು 23 ರಿಂದ 25 ರೂಪಾಯಿಗೆ ರೂಪಾಯಿ ಹೆಚ್ಚಿನ ಬೆಲೆಗೆ ಮಾಹಾರಾಷ್ಟ್ರ ರಾಜ್ಯಕ್ಕೆ ಮಾರಾಟ ಮಾಡುವ ವಿಚಾರ ಸಿಸಿಬಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.