ರಾಜ್ಯ

ಹೃದಯಾಘಾತ | ಬದಲಾದ ಜೀವನ ಶೈಲಿ ಕಾರಣ ; ವರದಿ

ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳಿಗೆ, ಜನರ ಜೀವನಶೈಲಿಯೇ ಪ್ರಮುಖ ಕಾರಣವಾಗಿದ್ದು, ಕೋವಿಡ್ ನಂತರ ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತದ ಪ್ರಮಾಣ ಶೇ.5ರಷ್ಟು ಹೆಚ್ಚಾಗಿದೆ ಎಂದು ಉನ್ನತ ಮಟ್ಟದ ತಾಂತ್ರಿಕ ಸಮಿತಿಯ ಅಧ್ಯಕ್ಷರೂ ಆಗಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ತಿಳಿಸಿದ್ದಾರೆ.

12 ಜನ ತಜ್ಞರನ್ನೊಳಗೊಂಡ ಸಮಿತಿಯ ವರದಿಯನ್ನು ಸೋಮವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಹೃದಯಾಘಾತಕ್ಕೊಳಗಾದ 251 ಜನರನ್ನು ಸಮಿತಿ ಅಧ್ಯಯನಕ್ಕೊಳಪಡಿಸಿದೆ ಹಾಗೂ ಕೋವಿಡ್‌ಗಿಂತ ಮೊದಲು 2019 ರಲ್ಲಿನ ಹೃದಯಾಘಾತದ ಪ್ರಕರಣಗಳನ್ನೂ ಪರಿಶೀಲಿಸಲಾಗಿದೆ ಎಂದು ಹೇಳಿದರು.

ಹಠಾತ್ ಹೃದಯಾಘಾತಕ್ಕೆ ಮಧುಮೇಹ, ರಕ್ತದೊತ್ತಡ, ಒಬೆಸಿಟಿ, ಜೀವನಶೈಲಿ, ಸ್ಟಿರಾಯ್ಡ್ ಬಳಕೆ, ಒತ್ತಡದ ಜೀವನ ಕಾರಣವಾಗಿವೆ. ಬಹು ವಿಶೇಷ ರೋಗ (ಮಲ್ಟಿ ಸ್ಪೆಷಲ್ ಡಿಸೀಸ್) ಗಳ ವ್ಯವಸ್ಥೆಯಿಂದಾಗಿ ಹೃದ್ರೋಗಗಳು ಹೆಚ್ಚುತ್ತಿವೆ ಎಂದರು.

ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಪ್ರಾಂಕಿಯಾಟಿಸ್‌ನಲ್ಲಿ ಬಿಡಾಟಾ ಸೆಲ್ ಫಂಕ್ಷನ್‌ನಿಂದ ಮಧುಮೇಹ ಹೆಚ್ಚುತ್ತಿದೆ. ವರ್ಕ್ ಫ್ರಂ ಹೋಂ ಸಂದರ್ಭದಲ್ಲಿ ಕಂಪ್ಯೂಟರ್ ಮುಂದೆ ಕುಳಿತವರಿಗೆ ದೈಹಿಕ ಚಟುವಟಿಕೆಗಳಿರುವುದಿಲ್ಲ. ಇದು ಕೂಡ ಹೃದಯಾಘಾತ ಹೆಚ್ಚಲು ಕಾರಣವಾಗಿದೆ ಎಂದು ಹೇಳಿದರು.

ಜೀವನಶೈಲಿಯಿಂದ ಹೃದ್ರೋಗದ ಅಪಾಯಗಳು (ರಿಸ್ಕ್ ಫ್ಯಾಕ್ಟರ್ರಸ) ಹೆಚ್ಚುತ್ತಿವೆ. ಪರಿಸರ ಮಾಲಿನ್ಯ, ಜೀವನಶೈಲಿಯಿಂದ ಶೇ.80 ರಷ್ಟು ಹೃದ್ರೋಗಗಳು ಸಂಭವಿಸಿದರೆ ಬಾಕಿ ಇರುವ ಶೇ.20 ರಷ್ಟು ಪ್ರಕರಣಗಳ ಕಾರಣಗಳ ಬಗ್ಗೆ ಮತ್ತಷ್ಟು ಅಧ್ಯಯನ ನಡೆಯುತ್ತಿವೆ ಎಂದರು.

ಎಲ್ಲಾ ಜಿಲ್ಲೆಗಳಲ್ಲಿ ಸಂಭವಿಸಿರುವ ಹೃದಯಾಘಾತ ಪ್ರಕರಣಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ. 251 ಜನರಲ್ಲಿ ಶೇ.19 ರಷ್ಟು ಮಂದಿ ಕೋವಿಡ್ ಸೋಂಕಿಗೆ ಸಿಲುಕಿದ್ದರು. ಒಟ್ಟು ಜನರಲ್ಲಿ ಶೇ.98 ರಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿದ್ದರು ಎಂದು ಹೇಳಿದ ಅವರು, 2019 ರ ನಂತರ ಹೃದಯಾಘಾತದ ಸಮಸ್ಯೆಗಳು ಶೇ.5 ರಷ್ಟು ಹೆಚ್ಚಾಗಿದೆ ಎಂದು ಪುನರುಚ್ಚರಿಸಿದರು.

ವರದಿ ಸಲ್ಲಿಕೆ
ತಜ್ಞರ ಸಮಿತಿ ಸಲ್ಲಿಸಿರುವ ವರದಿ ಪ್ರಕಾರ, ಹೃದಯಾಘಾತಕ್ಕೆ ಧೂಮಪಾನ ಮತ್ತು ಕೊಲೆಸ್ಟ್ರಾಲ್ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಧೂಮಪಾನಿಗಳಲ್ಲಿ ಶೇ.51ರಷ್ಟು ಹೃದಯಾಘಾತದ ಅಪಾಯ ಹೆಚ್ಚಿದೆ. 2019ರ ಮೊದಲು ಈ ಪ್ರಮಾಣ ಶೇ.48.8 ರಷ್ಟಿತ್ತು. 2019 ರಲ್ಲಿ ಶೇ.13.9 ರಷ್ಟು ಜನರಲ್ಲಿ ಮಧುಮೇಹದಿಂದ ಹೃದಯಾಘಾತವಾಗುತ್ತಿದ್ದರೆ, ಈಗ ಅದು ಶೇ.20.5 ರಷ್ಟು ಹೆಚ್ಚಾಗಿದೆ. ಅಧಿಕ ರಕ್ತದೊತ್ತಡದ ಅಪಾಯ ಶೇ.13.9 ರಿಂದ ಶೇ.17.6 ಕ್ಕೆ ಏರಿಕೆಯಾಗಿದೆ. ಕೊಲೆಸ್ಟ್ರಾಲ್‌ನ ಅಸ್ವಸ್ಥತೆಯ ಅಪಾಯ ಶೇ.34.8 ರಿಂದ 44.1 ರಷ್ಟು ಹೆಚ್ಚಾಗಿದೆ. ಕೌಟುಂಬಿಕ ಹಿನ್ನೆಲೆಯ ಆತಂಕಗಳು ಶೇ.11.6 ರಿಂದ 14.7 ಕ್ಕೆ ಹೆಚ್ಚಾದರೆ ಬೊಜ್ಜಿನ ಕಾರಣ ಶೇ.9.6 ರಿಂದ 11.7 ರಷ್ಟು ಹೆಚ್ಚಾಗಿದೆ ಎಂದು ರವೀಂದ್ರನಾಥ್ ತಿಳಿಸಿದರು.

218 ಪುರುಷರು,
251 ಜನರ ಅಧ್ಯಯನದಲ್ಲಿ 124 ಮಂದಿ ಪ್ರಮುಖವಾಗಿ ಬೆಂಗಳೂರಿನವರಾಗಿದ್ದು, ಚಾಲಕರು ಹಾಗೂ ಕಾರ್ಮಿಕ ವರ್ಗಕ್ಕೆ ಸೇರಿದ್ದಾರೆ. 218 ಮಂದಿ ಪುರುಷರು, 33 ಮಂದಿ ಮಹಿಳೆಯರನ್ನು ತಪಾಸಣೆಗೊಳಪಡಿಸಲಾಗಿದೆ. 77 ಮಂದಿ ಈ ಯಾವುದೇ ಸಮಸ್ಯೆಗಳಿಲ್ಲದೆ ಹೃದಯಾಘಾತಕ್ಕೊಳಗಾಗಿದ್ದು, ಕಾರಣಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ಮೂಲಕ ಹೃದಯಾಘಾತಕ್ಕೆ ಸಂಬಂಧಪಟ್ಟಂತೆ ಕೋವಿಡ್ ಹಾಗೂ ಕೋವಿಡ್ ಲಸಿಕೆ ಮೇಲಿದ್ದ ಅನುಮಾನವನ್ನು ತಜ್ಞರ ಸಮಿತಿ ನಿವಾರಣೆ ಮಾಡಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

7 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

7 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

7 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

7 hours ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

7 hours ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

10 hours ago