ರಾಜ್ಯ

ಬೇಜವಬ್ದಾರಿ ಸಂಸದರನ್ನು ಮೊದಲು ವಜಾಗೊಳಿಸಿ : ಪ್ರತಾಪ್‌ಸಿಂಹ ವಿರುದ್ಧ ಗುಡುಗಿದ ಹೆಚ್‌.ವಿಶ್ವನಾಥ್‌

ಮೈಸೂರು: ದೇಶದಲ್ಲೇ ಹೆಚ್ಚು ಭದ್ರತೆ ಇರುವ ಸಂಸತ್‌ ಭವನದಲ್ಲಿ,  ಭದ್ರತಾಲೋಪದಿಂದ ನಿನ್ನೆ ನಡೆದ ಘಟನೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರನ್ನು ಈ ಕೂಡಲೆ ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಎಂಎಲ್‌ಸಿ ಹೆಚ್‌.ವಿಶ್ವನಾಥ್‌ ಆಗ್ರಹಿಸಿದ್ದಾರೆ.

ಘಟನೆ ಬಗ್ಗೆ  ಆಂದೋಲನ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಹೆಚ್.ವಿಶ್ವನಾಥ್‌, ನಿನ್ನೆ ಸಂಸತ್‌ನಲ್ಲಿ ನಡೆದ ಘಟನೆ ಖಂಡನೀಯ. ದೇಶದಲ್ಲೇ ಅತೀ ಹೆಚ್ಚು ಭದ್ರತೆ ಇರುವ ಸ್ಥಳದಲ್ಲೇ ಭದ್ರತಾಲೋಪವಾಗಿರುವುದು ವಿಪರ್ಯಾಸ ಎಂದಿದ್ದಾರೆ.

ಜವಬ್ಧಾರಿಯುತ ಸಂಸತ್‌ ಸದಸ್ಯರು ಯಾರಿಗೆ ಪಾಸ್‌ ನೀಡಬೇಕು ಎಂಬುದರ ಬಗ್ಗೆ ಸರಿಯಾದ ರೀತಿಯಲ್ಲಿ ತೀರ್ಮಾನ ಕೈಗೊಳ್ಳದಿದ್ದರೇ ಏನೆಲ್ಲಾ ಅನಾಹುತಗಳು ಆಗಬಹುದು ಎಂಬುದಕ್ಕೆ ನಿನ್ನೆ ನಡೆದ ಘಟನೆಯೇ ಸಾಕ್ಷಿ. ನಮ್ಮೂರಿನವರೇ ಆದಂತ ಸಂಸದ ಪ್ರತಾಪ್‌ ಸಿಂಹ, ಪಾಸ್‌ ನೀಡುವಂತ ಸಂದರ್ಭದಲ್ಲಿ ಅವರ ಪೂರ್ವಪರಗಳನ್ನು ತಿಳಿದಿರಬೇಕು .ನಾನೂ ಕೂಡ ಒಬ್ಬ ಸಂಸತ್‌ ಸದಸ್ಯನಾಗಿ ಕೆಲಸ ಮಾಡಿದವನು, ಒಬ್ಬ ಸಂಸತ್‌ ಸದಸ್ಯನಿಗೆ, ಸಂಸತ್‌ಗೆ ಭೇಟಿ ನೀಡುವವರಿಗೆ ಪಾಸ್‌ ನೀಡುವ ಅಧಿಕಾರವನ್ನು ನೀಡಲಾಗಿದೆ.

ಆದರೇ ಆ ಅಧಿಕಾರವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಎಲ್ಲರಿಗೂ ಒಳಗೆ ಪ್ರವೇಶ ನೀಡಿದರೆ ಏನೆಲ್ಲಾ ಅನಾಹುತವಾಗಹುದು ಎಂಬುದಕ್ಕೆ ಇದೇ ಸಾಕ್ಷಿ. ಈ ಕೂಡಲೇ ಸಂಸದ ಪ್ಎಂರತಾಪ್ದ‌ ಸಿಂಹ ಅವರನ್ರುನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಾಪ್‌ ಸಿಂಹಗೆ ಪರಿಚಯಸ್ಥ ಹುಡುಗ:
ನಿನ್ನೆ ಸಂಸತ್‌ನಲ್ಲಿ ನಿರ್ಮಾಣವಾದ ಆತಂಕಕಾರಿ ಘಟನೆಯ ಆರೋಪಿಯಾಗಿರುವ ಮೈಸೂರಿನ ಹುಡುಗ ಮನೋರಂಜನ್‌ ಸಂಸದ ಪ್ರತಾಪ್‌ ಸಿಂಹ ಅವರಿಗೆ ತೀರ ಹತ್ತಿರದ ಒಡನಾಡಿ. ಈ ಬಗ್ಗೆ ಮನೋರಂಜನ್‌ ತಂದೆಯೇ ಹೇಳಿಕೆ ನೀಡಿದ್ದಾರೆ. ಆ ಹುಡುಗನ ನಡವಳಿಕೆ ಬಗ್ಗೆ ಪ್ರತಾಪ್‌ ಸಿಂಹರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಒಂದು ವೇಳೆ ಪ್ರತಾಪ್‌ ಸಿಂಹ ಆ ಹುಡುಗ ಪರಿಚಯ ಇಲ್ಲ ಎಂದರೇ ಅದು ಶುದ್ಧ ಸುಳ್ಳು ಎಂದರು.

ಸಂಸತ್‌ನಲ್ಲಿ ಅಧಿಕಾರಿಗಳ  ಸಮಸ್ಯೆ: ಭದ್ರತೆಗೆ  ಸಂಬಂಧಿಸಿದಂತೆ ಸಂಸತ್‌ ಭವನದಲ್ಲಿ ಕೆಳ ಹಂತದ ಅಧಿಕಾರಿಗಳ ಕೊರತೆ ಇದೆ. ಮೇಲಧಿಕಾರಿಗಳು ಹೆಚ್ಚಾಗಿದ್ದಾರೆ ಹೊರತು ಕೆಳಹಂತದ ಅಧಿಕಾರಿಗಳು ಕಡಿಮೆ. ಕಾಯುವವರಿಗಿಂತಾ, ಕಾಯುವವರನ್ನು ಕಾಯುವ ಅಧಿಕಾರಿಗಳಿದ್ದಾರೆ. ಭದ್ರತಾಲೋಪಕ್ಕೆ ಇದೂ ಒಂದು ಕಾರಣವಾಗಿದೆ ಎಂದು ಹೆಚ್‌.ವಿಶ್ವನಾಥ್‌ ಆರೋಪಿಸಿದರು

ಸರ್ಕಾರದ ಮೇಲೆ ಜನರಿಗೆ ಅಪನಂಬಿಕೆ:  ಈ ರೀರತಿಯ ಘಟನೆಗಳು ಪದೇ ಪದೇ ಆಗಿದ್ದರೂ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದೇವೆ. ಸಾವಿರಾರು ಕೋಟಿ ಕರ್ಚು ಮಾಡಿ ಕಟ್ಟಿರುವ ನೂತನ ಸಂಸತ್‌ ಭವನವನ್ನು ಇಂತಹ ಮನಸ್ಥಿತಿ ಇರುವ ಯುವಕರು ಒಂದು ವೇಳೆ ಒಡೆದು ಹಾಕಿದರೆ, ಸಂಸತ್‌ ಭವನವನ್ನೇ ರಕ್ಷಣೆ ಮಾಡದಂತ ಸರ್ಕಾರ ಭಾರತೀಯರಿಗೆ ಯಾವ ರೀತಿ ರಕ್ಷಣೆ ನೀಡುತ್ತದೆ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತದೆ. ಈಗಾಗಲೇ ಆ ರೀತಿಯ ಪ್ರಶ್ನೆ ಜನರಲ್ಲಿ ಮೂಡಿದೆ ಎಂದರು.

 

andolanait

Recent Posts

ಹಾರ್ಮುಜ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ; ಟ್ರಂಪ್ ಹೇಳಿಕೆಯಿಂದ ವಾಸ್ತವ ಬದಲಾಗಲ್ಲ : ಇರಾನ್ ತಿರುಗೇಟು

ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ…

5 hours ago

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ : ಡಿಐಜಿ ನೇತೃತ್ವದಲ್ಲಿ ತನಿಖೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…

7 hours ago

ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ : ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ; ಖರ್ಗೆ ಕಿಡಿ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…

8 hours ago

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

10 hours ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

15 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

22 hours ago