ರಾಜ್ಯ

ರೈತ ಉತ್ಪಾದಕ ಸಂಸ್ಥೆಗಳ ಬಾಕಿ ಅನುದಾನ ಶೀಘ್ರ ಬಿಡುಗಡೆ: ಎನ್.ಚಲುವರಾಯಸ್ವಾಮಿ

ಬೆಳಗಾವಿ: ರಾಜ್ಯದಲ್ಲಿ ಜಲಾನಯನ ಇಲಾಖೆ ವತಿಯಿಂದ ಸ್ಥಾಪಿಸಲಾಗಿರುವ ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ಬಾಕಿ ಇರುವ ಅನುದಾನವನ್ನು ಆದಷ್ಟು ಶೀಘ್ರ ಒದಗಿಸುವುದಾಗಿ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸಭೆ ಸದಸ್ಯ ಅರಗ ಜ್ಞಾನೇಂದ್ರ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗಧಿಪಡಿಸಿದ ಅನುದಾನ ಪೂರ್ಣವಾಗಿ ಬಿಡುಗಡೆಯಾಗದೇ ಕೊರತೆ ಉಂಟಾಗಿದೆ. ಆದರೆ ನಮ್ಮ ಸರ್ಕಾರ ರೈತ ಪರವಾಗಿದ್ದು, ಆದಷ್ಟು ಹೆಚ್ಚಿನ ಅನುದಾನವನ್ನು ಈ ವರ್ಷದ ಹಣಕಾಸು ವರ್ಷದಲ್ಲೇ ಬಿಡುಗಡೆ ಮಾಡಲಾಗುವುದು. ಉಳಿಕೆ ಹಣವನ್ನು ಮುಂದಿನ ಹಣಕಾಸಿನ ವರ್ಷದಲ್ಲಿ ಹೊಂದಾಣಿಕೆ ಮಾಡಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಅಮೃತ ರೈತ ಉತ್ಪಾದಕರ ಸಂಸ್ಥೆ ಯೋಜನೆಯಡಿ ಬೇಡಿಕೆ ಮತ್ತು ಬಿಡುಗಡೆಯಾದ ಅನುದಾನದ ವಿವರಗಳು

2021-22
ಒಟ್ಟು ಗುರಿ 750 ಎಫ್.ಪಿ.ಒ ಅನುದಾನದ ಗುರಿ 225 ಕೋಟಿಗಳು
ರಚನೆಯಾದ ಎಫ್.ಪಿ.ಒ 330 ಸಂಖ್ಯೆ
ಪ್ರಥಮ ವರ್ಷಕ್ಕೆ ಬೇಕಾದ ಅನುದಾನ 330*8.75 ಲಕ್ಷಗಳು = 28.88 ಕೋಟಿಗಳು
ಬಿಡುಗಡೆಯಾದ ಅನುದಾನ 10.35 ಕೋಟಿಗಳು
ಬಾಕಿ 18.53 ಕೋಟಿಗಳು

2022-23
ಕಳೆದ ವರ್ಷ 2021-22ರ ಬಾಕಿ 18.53 ಕೋಟಿಗಳು
ಕಳೆದ ವರ್ಷ ರಚಿಸಿದ (2021-22) 330 ಸಂಘಗಳ 2ನೇ ವರ್ಷದ ಬೇಡಿಕೆ 330*12.09 ಲಕ್ಷಗಳು = 39.89 ಕೋಟಿಗಳು
2022-23ನೇ ಸಾಲಿನಲ್ಲಿ ರಚನೆಯಾದ 156 ಸಂಘಗಳ ಮೊದಲನೇ ವರ್ಷದ ಬೇಡಿಕೆ 156*8.75 ಲಕ್ಷಗಳು = 13.65 ಕೋಟಿಗಳು
2021-22ನೇ ಸಾಲು ಸೇರಿದಂದ 2022-23ನೇ ಸಾಲಿಗೆ ಬೇಕಾದ ಒಟ್ಟು ಅನುದಾನ 72.07 ಕೋಟಿಗಳು
ಬಿಡುಗಡೆಯಾದ ಅನುದಾನ 33.98 ಕೋಟಿಗಳು
ಬಾಕಿ ಅನುದಾನ 38.98 ಕೋಟಿಗಳು

2023-24 (ಯಾವುದೇ ಹೊಸ ಸಂಘ ರಚನೆಯಾಗಿರುವುದಿಲ್ಲ)
ಕಳೆದ ವರ್ಷ 2022-23ರ ಬಾಕಿ 38.98 ಕೋಟಿಗಳು
2021-22ನೇ ಸಾಲಿನಲ್ಲಿ ರಚಿಸಿದ 330 ಸಂಘಗಳ 3ನೇ ವರ್ಷದ ಅನುದಾನ ಬೇಡಿಕೆ 330*9.16 ಲಕ್ಷಗಳು = 30.22 ಕೋಟಿಗಳು
2022-23ನೇ ಸಾಲಿನಲ್ಲಿ ರಚಿಸಿದ 156 ಸಂಘಗಳ 2ನೇ ವರ್ಷದ ಬೇಡಿಕೆ 156*12.09 ಲಕ್ಷಗಳು = 18.86 ಕೋಟಿಗಳು
2023-24ನೇ ಸಾಲಿನ ಒಟ್ಟು ಬೇಡಿಕೆ 88.16 ಕೋಟಿಗಳು
ಬಿಡುಗಡೆಯಾದ ಅನುದಾನ 4.0 ಕೋಟಿಗಳು
ಬಾಕಿ 84.16 ಕೋಟಿಗಳು

2024-25
ಕಳೆದ ವರ್ಷದ ಬಾಕಿ(2023-24) 84.16 ಕೋಟಿಗಳು
2022-23ನೇ ಸಾಲಿನಲ್ಲಿ ರಚಿಸಿದ 156 ಸಂಘಗಳ 3ನೇ ವರ್ಷದ ಅನುದಾನ ಬೇಡಿಕೆ 156*9.16 ಲಕ್ಷಗಳು = 14.28 ಕೋಟಿಗಳು
ಒಟ್ಟು ಬೇಡಿಕೆ 98.44 ಕೋಟಿಗಳು
ಬಿಡುಗಡೆ 1.16 ಕೋಟಿಗಳು
ಬಾಕಿ 97.28 ಕೋಟಿಗಳು

97.28 ಕೋಟಿಗಳ ಬಾಕಿ ಬೇಡಿಕೆಯಲ್ಲಿ 2024-25ನೇ ಸಾಲಿಗೆ ರೂ.54 ಕೋಟಿಗಳ ಅನುದಾನ ಬೇಡಿಕೆಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ.

ಉಳಿದ ಬಾಕಿ ಬೇಡಿಕೆ ರೂ.43 ಕೋಟಿಗಳನ್ನು ಮುಂದಿನ ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಅಂತಿಮವಾಗಿ ಪಡೆದು ಸಂಘಗಳ ಪ್ರಗತಿಯನ್ನು ಪರಿಶೀಲಿಸಿ ವೆಚ್ಚ ಭರಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದರು

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

9 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

9 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

9 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

9 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

9 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

10 hours ago