ರಾಜ್ಯ

ರೈತ ಉತ್ಪಾದಕ ಸಂಸ್ಥೆಗಳ ಬಾಕಿ ಅನುದಾನ ಶೀಘ್ರ ಬಿಡುಗಡೆ: ಎನ್.ಚಲುವರಾಯಸ್ವಾಮಿ

ಬೆಳಗಾವಿ: ರಾಜ್ಯದಲ್ಲಿ ಜಲಾನಯನ ಇಲಾಖೆ ವತಿಯಿಂದ ಸ್ಥಾಪಿಸಲಾಗಿರುವ ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ಬಾಕಿ ಇರುವ ಅನುದಾನವನ್ನು ಆದಷ್ಟು ಶೀಘ್ರ ಒದಗಿಸುವುದಾಗಿ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸಭೆ ಸದಸ್ಯ ಅರಗ ಜ್ಞಾನೇಂದ್ರ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗಧಿಪಡಿಸಿದ ಅನುದಾನ ಪೂರ್ಣವಾಗಿ ಬಿಡುಗಡೆಯಾಗದೇ ಕೊರತೆ ಉಂಟಾಗಿದೆ. ಆದರೆ ನಮ್ಮ ಸರ್ಕಾರ ರೈತ ಪರವಾಗಿದ್ದು, ಆದಷ್ಟು ಹೆಚ್ಚಿನ ಅನುದಾನವನ್ನು ಈ ವರ್ಷದ ಹಣಕಾಸು ವರ್ಷದಲ್ಲೇ ಬಿಡುಗಡೆ ಮಾಡಲಾಗುವುದು. ಉಳಿಕೆ ಹಣವನ್ನು ಮುಂದಿನ ಹಣಕಾಸಿನ ವರ್ಷದಲ್ಲಿ ಹೊಂದಾಣಿಕೆ ಮಾಡಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಅಮೃತ ರೈತ ಉತ್ಪಾದಕರ ಸಂಸ್ಥೆ ಯೋಜನೆಯಡಿ ಬೇಡಿಕೆ ಮತ್ತು ಬಿಡುಗಡೆಯಾದ ಅನುದಾನದ ವಿವರಗಳು

2021-22
ಒಟ್ಟು ಗುರಿ 750 ಎಫ್.ಪಿ.ಒ ಅನುದಾನದ ಗುರಿ 225 ಕೋಟಿಗಳು
ರಚನೆಯಾದ ಎಫ್.ಪಿ.ಒ 330 ಸಂಖ್ಯೆ
ಪ್ರಥಮ ವರ್ಷಕ್ಕೆ ಬೇಕಾದ ಅನುದಾನ 330*8.75 ಲಕ್ಷಗಳು = 28.88 ಕೋಟಿಗಳು
ಬಿಡುಗಡೆಯಾದ ಅನುದಾನ 10.35 ಕೋಟಿಗಳು
ಬಾಕಿ 18.53 ಕೋಟಿಗಳು

2022-23
ಕಳೆದ ವರ್ಷ 2021-22ರ ಬಾಕಿ 18.53 ಕೋಟಿಗಳು
ಕಳೆದ ವರ್ಷ ರಚಿಸಿದ (2021-22) 330 ಸಂಘಗಳ 2ನೇ ವರ್ಷದ ಬೇಡಿಕೆ 330*12.09 ಲಕ್ಷಗಳು = 39.89 ಕೋಟಿಗಳು
2022-23ನೇ ಸಾಲಿನಲ್ಲಿ ರಚನೆಯಾದ 156 ಸಂಘಗಳ ಮೊದಲನೇ ವರ್ಷದ ಬೇಡಿಕೆ 156*8.75 ಲಕ್ಷಗಳು = 13.65 ಕೋಟಿಗಳು
2021-22ನೇ ಸಾಲು ಸೇರಿದಂದ 2022-23ನೇ ಸಾಲಿಗೆ ಬೇಕಾದ ಒಟ್ಟು ಅನುದಾನ 72.07 ಕೋಟಿಗಳು
ಬಿಡುಗಡೆಯಾದ ಅನುದಾನ 33.98 ಕೋಟಿಗಳು
ಬಾಕಿ ಅನುದಾನ 38.98 ಕೋಟಿಗಳು

2023-24 (ಯಾವುದೇ ಹೊಸ ಸಂಘ ರಚನೆಯಾಗಿರುವುದಿಲ್ಲ)
ಕಳೆದ ವರ್ಷ 2022-23ರ ಬಾಕಿ 38.98 ಕೋಟಿಗಳು
2021-22ನೇ ಸಾಲಿನಲ್ಲಿ ರಚಿಸಿದ 330 ಸಂಘಗಳ 3ನೇ ವರ್ಷದ ಅನುದಾನ ಬೇಡಿಕೆ 330*9.16 ಲಕ್ಷಗಳು = 30.22 ಕೋಟಿಗಳು
2022-23ನೇ ಸಾಲಿನಲ್ಲಿ ರಚಿಸಿದ 156 ಸಂಘಗಳ 2ನೇ ವರ್ಷದ ಬೇಡಿಕೆ 156*12.09 ಲಕ್ಷಗಳು = 18.86 ಕೋಟಿಗಳು
2023-24ನೇ ಸಾಲಿನ ಒಟ್ಟು ಬೇಡಿಕೆ 88.16 ಕೋಟಿಗಳು
ಬಿಡುಗಡೆಯಾದ ಅನುದಾನ 4.0 ಕೋಟಿಗಳು
ಬಾಕಿ 84.16 ಕೋಟಿಗಳು

2024-25
ಕಳೆದ ವರ್ಷದ ಬಾಕಿ(2023-24) 84.16 ಕೋಟಿಗಳು
2022-23ನೇ ಸಾಲಿನಲ್ಲಿ ರಚಿಸಿದ 156 ಸಂಘಗಳ 3ನೇ ವರ್ಷದ ಅನುದಾನ ಬೇಡಿಕೆ 156*9.16 ಲಕ್ಷಗಳು = 14.28 ಕೋಟಿಗಳು
ಒಟ್ಟು ಬೇಡಿಕೆ 98.44 ಕೋಟಿಗಳು
ಬಿಡುಗಡೆ 1.16 ಕೋಟಿಗಳು
ಬಾಕಿ 97.28 ಕೋಟಿಗಳು

97.28 ಕೋಟಿಗಳ ಬಾಕಿ ಬೇಡಿಕೆಯಲ್ಲಿ 2024-25ನೇ ಸಾಲಿಗೆ ರೂ.54 ಕೋಟಿಗಳ ಅನುದಾನ ಬೇಡಿಕೆಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ.

ಉಳಿದ ಬಾಕಿ ಬೇಡಿಕೆ ರೂ.43 ಕೋಟಿಗಳನ್ನು ಮುಂದಿನ ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಅಂತಿಮವಾಗಿ ಪಡೆದು ಸಂಘಗಳ ಪ್ರಗತಿಯನ್ನು ಪರಿಶೀಲಿಸಿ ವೆಚ್ಚ ಭರಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದರು

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮುಸ್ಲಿಂ ಸಮುದಾಯದ ಜಹಾನ ಈಗ ವೈದ್ಯೆ!

ಕೋಟೆ ತಾಲ್ಲೂಕಿನ ಮುಸ್ಲಿಂ ಸಮುದಾಯದ ಪ್ರಥಮ ವೈದ್ಯೆ ಎಂಬ ಹೆಗ್ಗಳಿಕೆ ಹೊಂದಿದ ಜಹಾನ   ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ…

5 hours ago

ಚೇತನ್ ಅಹಿಂಸಾ ಗಡಿಪಾರಿಗೆ ಆಗ್ರಹ

ಅಭಿಮಾನಿಗಳು, ನಿರ್ಮಾಪಕರ ಸಂಘದ ಆಕ್ರೋಶ ಬೆಂಗಳೂರು : ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ…

9 hours ago

ಕೊಡಗು | ಗುಂಡು ಹೊಡೆದುಕೊಂಡು ಶಿಕ್ಷಕಿ ಆತ್ಮಹತ್ಯೆ

ಮಡಿಕೇರಿ : ಶಿಕ್ಷಕಿಯೊಬ್ಬರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯಲ್ಲಿ ನಡೆದಿದೆ.…

9 hours ago

ಬಿಜೆಪಿಗೆ ಸೇರ್ಪಡೆಗೊಂಡ 7 ರಾಜ್ಯಸಭಾ ಸದಸ್ಯರ ವಿರುದ್ಧ ಕ್ರಮಕ್ಕೆ ಎಎಪಿ ಆಗ್ರಹ

ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದ್ದು, ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ)…

10 hours ago

ಶಾಲೆಗಳಲ್ಲಿ ದಿನಪತ್ರಿಕೆ ಓದುವುದು ಇನ್ಮುಂದೆ ಕಡ್ಡಾಯ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರತಿದಿನ ದಿನಪತ್ರಿಕೆ ಓದಿಸುವುದನ್ನು ಕಡ್ಡಾಯಗೊಳಿಸಲು ಶಿಕ್ಷಣ…

10 hours ago

ಜನಗಣತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾಲ್ಗೊಳ್ಳುವಿಕೆ ಅತ್ಯಗತ್ಯ: ಪ್ರಧಾನಿ ಮೋದಿ

ನವದೆಹಲಿ : ದೇಶದಾದ್ಯಂತ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರದ ಕೆಲಸವಲ್ಲ, ಬದಲಾಗಿ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ. ಇದರಲ್ಲಿ ಎಲ್ಲರ…

11 hours ago