ಖಾಸಗಿ ಚಾನೆಲ್ ನಡೆಸಿದ ಸಂದರ್ಶನವೊಂದರಲ್ಲಿ ʼರಾಮನನ್ನು ದೇವರು ಅಂತ ಹೇಳಿ ನಮ್ಮ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪೂಜೆ ಮಾಡುವುದಿಲ್ಲ. ನೀವು ಹಳ್ಳಿಗಳಲ್ಲಿ ಹೋಗಿ ನೋಡಿ. ಮನೆಗಳಲ್ಲಿ ಕೆಲವರು ಫೋಟೊಗಳನ್ನು ಸಹ ಇಡುವುದಿಲ್ಲʼ ಎಂದು ಡಿಕೆ ಸುರೇಶ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಯ ವಿಡಿಯೊ ತುಣುಕನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಆರ್ ಅಶೋಕ್ ʼದಕ್ಷಿಣ ಭಾರತದಲ್ಲಿ ಯಾರೂ ರಾಮನನ್ನ ಪೂಜಿಸುವುದಿಲ್ಲವಂತೆ. ಡಿಕೆ ಸುರೇಶ್ ಅವರ ನುಡಿಮುತ್ತುಗಳನ್ನ ಒಮ್ಮೆ ಕೇಳಿಸಿಕೊಳ್ಳಿ. ಅವರ ದೇಶ ವಿಭಜನೆಯ ಮಾತು ಬಾಯಿ ತಪ್ಪಿ ಬಂದಿದ್ದಲ್ಲ. ಅದರ ಹಿಂದೆ ಬಹಳ ದೊಡ್ಡ ಮಸಲತ್ತು ಇದೆ. ಹಿಂದೂ ಧರ್ಮ ಒಡೆದರೆ ಮಾತ್ರ ದೇಶ ಒಡೆಯಲು ಸಾಧ್ಯ ಅಂತ ಬ್ರಿಟಿಷರಿಂದ, ಮೊಘಲರಿಂದ, ಟಿಪ್ಪುವಿನಿಂದ ಚೆನ್ನಾಗಿ ಕಲಿತಿರುವ ಕಾಂಗ್ರೆಸ್ ನಾಯಕರು, ಅದನ್ನ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಎಕ್ಸ್ನಲ್ಲಿಯೇ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್ ʼಇಂದಿಗೂ ನಮ್ಮ ಹಳ್ಳಿಯ ಜನ ತಮ್ಮ ಜಾನಪದ ಪರಂಪರೆಯ ಮಾರಮ್ಮ, ಚೌಡಮ್ಮ, ಹುಲಿಗೆಮ್ಮ, ಯಲ್ಲಮ್ಮ, ಕಬ್ಬಾಳಮ್ಮ, ಮದ್ದೂರಮ್ಮ, ಮಾದಪ್ಪ, ಮುನೇಶ್ವರ, ಸಿದ್ದೇಶ್ವರ, ಭೂತ, ವರ್ತೆ, ಪಂಜುರ್ಲಿ ದೈವಗಳನ್ನೇ ತಮ್ಮ ಮನೆದೇವರಾಗಿ ಆರಾಧಿಸಿಕೊಂಡು ಬಂದವರು. ನಮ್ಮದು ಮೂಲ ದ್ರಾವಿಡ ಪರಂಪರೆ. ನಮ್ಮ ಹಳ್ಳಿಯ ಜನರ ಮನೆಗಳಲ್ಲಿ ಸಿಗುವುದು ನಮ್ಮ ಪರಂಪರೆಯ ದೈವಗಳು ನನ್ನ ಮಾತಿನ ಅರ್ಥವನ್ನು ತಿರುಚಿ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹರಿಬಿಡುವುದು, ಜನರನ್ನು ಭಾವನಾತ್ಮಕವಾಗಿ ಕೆಣಕುವುದು ಬಿಜೆಪಿ ಪಕ್ಷದ ಹಳಸಲು ಸಿದ್ಧಾಂತ. ಅಭಿವೃದ್ಧಿ, ಸಿದ್ಧಾಂತದ ಅಡಿಯಲ್ಲಿ ನಮ್ಮನ್ನು ಎದುರಿಸಲಾಗದ ನಿಮಗೆ ಸಿಗುವುದು ಇಂತವೇ ಪುರಾವೆಗಳು. ಜನ ದಡ್ಡರಲ್ಲ. ಈ ಚುನಾವಣೆ ನಿಮಗೆ ತಕ್ಕ ಪಾಠ ಕಲಿಸಲಿದೆ! ನೆನಪಿರಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…