ರಾಜ್ಯ

ಇಂದಿರಾ ಕ್ಯಾಂಟೀನ್‌ ಹೊಸ ಮೆನು, ಸಮಯ ಪ್ರಕಟ; ಏನೆಲ್ಲಾ ಲಭ್ಯ, ಬೆಲೆ ಎಷ್ಟು?

ರಾಜ್ಯ ಸರ್ಕಾರವು ಇಂದಿರಾ ಕ್ಯಾಂಟೀನ್‌ ಯೋಜನೆಯಡಿಯಲ್ಲಿ ಆಹಾರ ಒದಗಿಸಲು ಮುಂದಾಗಿದ್ದು, ಇಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಎಕ್ಸ್‌ ಖಾತೆಯಲ್ಲಿ ಏನೆಲ್ಲಾ ಆಹಾರಗಳು ಹಾಗೂ ಯಾವ ಬೆಲೆಯಲ್ಲಿ ಲಭ್ಯವಿರಲಿದೆ ಎಂದು ಪ್ರಕಟಿಸಿದ್ದಾರೆ. ಜನವರಿ 16ರಿಂದ ಇದು ಆರಂಭವಾಗಲಿದೆ ಎಂದು ತಿಳಿಸಿದೆ.

ಹಸಿದ ಹೊಟ್ಟೆಗೆ ಅಕ್ಷಯ ಪಾತ್ರೆ, ಅಗ್ಗದ ದರದಲ್ಲಿ ದೇಹಕ್ಕೆ ಒಗ್ಗುವ ಊಟ ಉಪಹಾರ ಎಂದು 5 ರೂಪಾಯಿಗಳಿಗೆ ಒಂದು ಪ್ಲೇಟ್‌ ಉಪಾಹಾರ, 10 ರೂಪಾಯಿಗೆ ಒಂದು ಪ್ಲೇಟ್‌ ಮಧ್ಯಾಹ್ನ ಊಟ ಹಾಗೂ 10 ರೂಪಾಯಿಗೆ ರಾತ್ರಿ ಊಟವನ್ನು ನೀಡಲು ಮುಂದಾಗಿದೆ.

ಬೆಳಗ್ಗಿನ ಉಪಹಾರ, ಪ್ಲೇಟ್‌ಗೆ 5 ರೂಪಾಯಿ ( ಬೆಳಗ್ಗೆ 7 ರಿಂದ 10 ): ಇಂಡ್ಲಿ – ಸಾಂಬಾರ್‌, ಇಂಡ್ಲಿ – ಚಟ್ನಿ, ವೆಜ್‌ ಪುಲಾವ್‌ – ರಾಯಿತಾ, ಖಾರಾಬಾತ್‌ – ಚಟ್ನಿ, ಚೌಚೌ ಬಾತ್‌ – ಚಟ್ನಿ, ಮಂಗಳೂರು ಬನ್ಸ್‌, ಬಿಸಿಬೇಳೆ ಬಾತ್‌ – ಬೂಂದಿ, ಪೊಂಗಲ್‌ – ಚಟ್ನಿ, ಬ್ರೆಡ್‌ – ಜಾಮ್‌ ಹಾಗೂ ಬನ್ಸ್. ವಿಶೇಷ: ಮಾವಿನಕಾಯಿ ಸೀಸನ್‌ನಲ್ಲಿ ಮಾವಿನಕಾಯಿ ಚಿತ್ರಾನ್ನ.

ಮಧ್ಯಾಹ್ನದ ಊಟ, ಪ್ಲೇಟ್‌ಗೆ 10 ರೂಪಾಯಿ ( ಮಧ್ಯಾಹ್ನ 1 ರಿಂದ 3 ): ಅನ್ನ – ತರಕಾರಿ ಸಾಂಬಾರು – ಖೀರು, ಅನ್ನ – ತರಕಾರಿ ಸಾಂಬಾರು – ರಾಯಿತಾ, ಅನ್ನ – ತರಕಾರಿ ಸಾಂಬಾರು – ಮೊಸರನ್ನ, ರಾಗಿಮುದ್ದೆ – ಸೊಪ್ಪಿನಸಾರು – ಖೀರು ಮತ್ತು ಚಪಾತಿ – ಸಾಗು – ಖೀರು.

ರಾತ್ರಿ ಊಟ, ಪ್ಲೇಟ್‌ಗೆ 10 ರೂಪಾಯಿ ( ಸಂಜೆ 7.30 ರಿಂದ ರಾತ್ರಿ 9 ) : ಅನ್ನ – ತರಕಾರಿ ಸಾಂಬಾರು, ಅನ್ನ – ತರಕಾರಿ ಸಾಂಬಾರು – ರಾಯಿತಾ, ರಾಗಿಮುದ್ದೆ – ಸೊಪ್ಪಿನಸಾರು ಮತ್ತು ಚಪಾತಿ ವೆಜ್‌ ಗ್ರೇವಿ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago