ರಾಜ್ಯ

ರೈತರ ಹಿತರಕ್ಷಣೆಗೆ ಕೇಂದ್ರದ ಕದ ತಟ್ಟಿದ ಚಲುವರಾಯಸ್ವಾಮಿ : ತುರ್ತು ಪರಿಹಾರಕ್ಕೆ ಮನವಿ

ಬೆಂಗಳೂರು :  ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7)  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ರಾಜ್ಯದ ರೈತ ಸಮುದಾಯದ ಹಿತಕ್ಕಾಗಿ ಬಾಕಿ ಇರುವ ಹಲವು ಮಹತ್ವದ ವಿಷಯಗಳನ್ನು ತುರ್ತಾಗಿ ಪರಿಹರಿಸುವಂತೆ ಮನವಿ ಮಾಡಿದರು.

 

ರಾಜ್ಯದ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚುವರಿ ಅನುದಾನ, ಬಿಡುಗಡೆಯಾಗದ ನಿಧಿ, ಯೋಜನೆಗಳ ಅನುಮೋದನೆ ಹಾಗೂ ಇತರ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿದ  ಅವರು, ಸಭೆಯಲ್ಲಿ ಹಲವಾರು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಚಿವರ ಮುಂದಿಟ್ಟರು..

 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)

ಈ ಯೋಜನೆ ಅಡಿಯಲ್ಲಿ ರೈತರ ಹೆಚ್ಚುತ್ತಿರುವ ಯಾಂತ್ರೀಕರಣ ಬೇಡಿಕೆಯನ್ನು ಗಮನಿಸಿ PM-RKVY-SMAM ಯೋಜನೆಯಡಿ  ಈ ವರ್ಷಕ್ಕೆ ಹೆಚ್ಚುವರಿ 250 ಕೋಟಿ ರೂಪಾಯಿ ಅನುದಾನವನ್ನು ಕೋರಿದರು. ಅದೇ ರೀತಿ ಮಳೆಯ ಮೇಲೆ ಅವಲಂಬಿತವಾಗಿರುವ ಕರ್ನಾಟಕದ ಕೃಷಿಯಲ್ಲಿ ಆಗಾಗ ಬೆಳೆ ನಷ್ಟಗಳನ್ನು ತಪ್ಪಿಸಲು ಸೂಕ್ಷ್ಮ ನೀರಾವರಿ ಯೋಜನೆಗೆ (PM-RKVY-PDMC) ಹೆಚ್ಚುವರಿ 250 ಕೋಟಿ ರೂಪಾಯಿ ಬೇಕು ಎಂದು ತಿಳಿಸಿದರು..

ಮೂಲಸೌಕರ್ಯ ಕೇಂದ್ರಿತ ಯೋಜನೆಗಳನ್ನು ಪೂರ್ಣಗೊಳಿಸಲು PM-RKVY-DPR ಅಡಿ 9.45 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಮನವಿ ಮಾಡಿದರು. ಇದಲ್ಲದೆ PM-RKVY-DPR ಮತ್ತು SMAM ಅಡಿ 2025-26ರಲ್ಲಿ ಬಿಡುಗಡೆಯಾಗಬೇಕಾದ ಬಾಕಿ ನಿಧಿಯನ್ನು ತುರ್ತಾಗಿ ನೀಡುವಂತೆ ಕೋರಿದರು..

ಡಿಪಿಆರ್‌ನಲ್ಲಿ 21.17 ಕೋಟಿ ಮತ್ತು SMAMನಲ್ಲಿ 1.512 ಕೋಟಿ ಸೇರಿ ಒಟ್ಟು 22.682 ಕೋಟಿ ರೂಪಾಯಿ ಕೊರತೆ ಇರುವುದನ್ನು ಮನವರಿಕೆ ಮಾಡಿದರು. 2024-25ರಲ್ಲಿ ಬಾಕಿ ಇದ್ದ 152.98 ಕೋಟಿ ರೂಪಾಯಿ ಬಿಲ್‌ಗಳನ್ನು 2025-26ರಲ್ಲಿ ಪಾವತಿಸಿದ್ದರಿಂದ ಈ ವರ್ಷದ ಅನುದಾನದಲ್ಲಿ ಹೆಚ್ಚಿನ ಕೊರತೆ ಉಂಟಾಗಿದೆ ಎಂದು ವಿವರಿಸಿದರು..

ಡಿಜಿಟಲ್ ಕ್ರಾಪ್ ರ್ವೇಗೆ ಕೇಂದ್ರ ಅನುಮೋದಿಸಿದ 25.704 ಕೋಟಿ ರೂಪಾಯಿಯಲ್ಲಿ SCSP ಮತ್ತು TSP ಅಡಿ ಬಿಡುಗಡೆಯಾದ 3.10 ಕೋಟಿ ರೂಪಾಯಿಯನ್ನು ಸಾಮಾನ್ಯ ಶೀರ್ಷಿಕೆಯಡಿ PFMS ಮೂಲಕ ಬಿಡುಗಡೆ ಮಾಡಿ ಹಣದ ಹರಿವನ್ನು ಸುಗಮಗೊಳಿಸುವಂತೆ ಮನವಿ ಮಾಡಿದರು.

ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕತಾ ಅಭಿಯಾನ (NFSNM) ಅಡಿ ಹಸಿರು ಗೊಬ್ಬರ ಬೀಜ ವಿತರಣೆಗೆ ಅನುಮೋದನೆ, ಎತ್ತುಗಳಿಂದ ಎಳೆಯುವ ಉಪಕರಣಗಳು, ಸ್ಥಳೀಯ ನಿರ್ದಿಷ್ಟ ಹಸ್ತಕ್ಷೇಪಗಳಿಗೆ ಅನುಮತಿ ಕೋರಿದರು. ಹಿಂಗಾರು  2025-26ಗೆ ದ್ವಿದಳ ಧಾನ್ಯಗಳ ಅತ್ಮನಿರ್ಭರತಾ ಯೋಜನೆಯ ಪರಿಷ್ಕೃತ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ನ್ಯೂಟ್ರಿಸಿರಿಯಲ್ಸ್ ಅಡಿ ಅಂತರರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ರಾಜ್ಯದ ಕೆಟಿಪಿಪಿ ಕಾಯ್ದೆಯಂತೆ ಹಣ ಬಳಸಲು ಅನುಮತಿ ಕೋರಲಾಯಿತು.

ಎನ್‌ಎಮ್‌ಇಒ-ಒಎಸ್ ಅಡಿ ಖಾಸಗಿ ಸೂರ್ಯಕಾಂತಿ ಹೈಬ್ರಿಡ್ ಬೀಜಗಳಾದ ADV-363, PAC-334, GK-2002 ಮತ್ತು GK-2008 ಬಳಸಲು ಅನುಮತಿ ಕೋರಿದರು..

ರೈತಸಿರಿ ಯೋಜನೆಯನ್ನು ರಾಜ್ಯ ನಿಯಮಗಳಂತೆ ಮಿಲ್ಲೆಟ್ ರೈತರಿಗೆ DBT ಮೂಲಕ ಪ್ರೋತ್ಸಾಹ ನೀಡುವ ರೀತಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ಮಾಡುವಂತೆ ಮನವಿ ಮಾಡಿದರು. ಆಗಸ್ಟ್-ನವೆಂಬರ್ 2025ರ ಅವಧಿಗೆ 31,340 ಅರ್ಹ ಫಲಾನುಭವಿಗಳಿಗೆ ಪಿಎಂ ಕಿಸಾನ್ ಸಹಾಯಧನ ಬಿಡುಗಡೆಯಾಗದಿರುವುದನ್ನು ತಿಳಿಸಿ ತಕ್ಷಣ ಸರಿಪಡಿಸುವಂತೆ ಕೋರಿದರು. ಬೆಂಗಳಗ್ರಾಮ್ (ಚಣ)ಗೆ RMS 2025-26ಗೆ MSP ಅನುಷ್ಠಾನ ಹಾಗೂ ಮೆಕ್ಕೆಗೆ KMS 2025-26ಗೆ PDPS ಅನುಷ್ಠಾನಕ್ಕೆ ಅನುಮೋದನೆ ಕೋರಲಾಯಿತು.

ಜಲಾನಯನ ಅಭಿವೃದ್ಧಿ ಘಟಕ 2.0ರಲ್ಲಿ ರಾಜ್ಯ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದು, PMKSY-WDC 3.0 ಅಡಿ 10.28 ಲಕ್ಷ ಹೆಕ್ಟೇರ್ ಜಲಾನಯನ ಮತ್ತು 193 ಸ್ಪ್ರಿಂಗ್‌ಶೆಡ್ ಯೋಜನೆಗಳಿಗೆ ಅನುಮೋದನೆ ಕೋರಲಾಯಿತು. ಮಣ್ಣು ಆರೋಗ್ಯ ಕಾರ್ಯಕ್ರಮದ ಅಡಿ ರದ್ದಾಗಿರುವ 4.18 ಕೋಟಿ ರೂಪಾಯಿ ಬಿಡುಗಡೆಗೆ ಒತ್ತಾಯಿಸಿದರು. REWARD ಅಭಿಯಾನವನ್ನು ಜೂನ್ 2027ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು. ಮಂಡ್ಯದ ಹೊಸ ಕೃಷಿ ವಿಶ್ವವಿದ್ಯಾಲಯಕ್ಕೆ ICAR ಅಡಿ ಹೊಸ AICRP ಪ್ರಸ್ತಾವಗಳು ಮತ್ತು ಅನುದಾನಗಳಿಗೆ ಬೆಂಬಲ ಕೋರಿದರು.

ಇದಲ್ಲದೆ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳ ಬಲವರ್ಧನೆಗಾಗಿ ಹೊಸ ಯೋಜನೆ ರೂಪಿಸುವುದು, ಸಬ್ಸಿಡಿ ರಸಗೊಬ್ಬರಗಳಿಗೆ ಫ್ರೈಟ್ ಆನ್ ರೋಡ್ ಸೌಲಭ್ಯ ನೀಡುವುದು ಹಾಗೂ ಫರ್ಟಿಲೈಸರ್ ಫ್ಲೈಯಿಂಗ್ ಸ್ಕ್ವಾಡ್ ವರದಿಗಳಲ್ಲಿ ಸಹಿ-ಸೀಲ್ ಅಗತ್ಯತೆಯ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದರು.

ಈ ಭೇಟಿಯ ಸಂದರ್ಭದಲ್ಲಿ ರಾಜ್ಯದ ರೈತರ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸುವಂತೆ ಮನವಿ ಮಾಡಿದ ಚಲುವರಾಯಸ್ವಾಮಿ ಅವರು, ಕೇಂದ್ರದ ಬೆಂಬಲದಿಂದ ಕರ್ನಾಟಕದ ಕೃಷಿ ವಲಯವು ಇನ್ನಷ್ಟು ಬಲಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…

5 hours ago

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…

5 hours ago

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

16 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

16 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

16 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

16 hours ago