ಹರಪನಹಳ್ಳಿ : ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಉಚ್ಚಂಗಿದುರ್ಗ ಕೋಟೆ ಕ್ಯಾಂಪ್ನ ಮದ್ಯಕೋಟೆ ಬಳಿ ಪುರಾತನ ಕಾಲದ ಬಾವಿ ಪತ್ತೆಯಾಗಿದೆ.
ಗ್ವಾಲಿಯರ್ ಖ್ಯಾತಿಯ ಕೋಟೆಗೆ ತೆರಳುವ ಮಾರ್ಗ ದುರಸ್ತಿ ಕಾರ್ಯ ನಡೆಸುವಾಗ ಏಕಾಏಕಿ ವಾಹನ ಸಹಿತ ಚಕ್ರಗಳು ಕುಸಿದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬಾವಿಯು ೨೦ ಅಡಿಯಷ್ಟು ಅಳವಾಗಿದ್ದು, ಅಡ್ಡವಾಗಿ ಕಲ್ಲುಗಳು ಇವೆ. ಮೇಲ್ನೋಟಕ್ಕೆ ಬಾವಿಯಂತೆ ಗೋಚರವಾಗುತ್ತಿದ್ದರೂ ಅಗೆವು ಅಥವಾ ಟಂಕಸಾಲೆಯಂತೆ ಕಾಣುತ್ತಿದೆ.
ಇತಿಹಾಸದಲ್ಲಿ ಹಿಂದೆ ಕೋಟೆ ಬೀದಿಯಲ್ಲಿ ಹಿಂದೆ ಗ್ರಾಮವೊಂದಿತ್ತು. ರಾಜರು ಆಳ್ವಿಕೆ ಕಾಲದಲ್ಲಿ ಪ್ರತಿ ಸಮುದಾಯಕ್ಕೊಂದು ಕುಡಿಯುವ ನೀರಿನ ಬಾವಿ ಕೊರೆಯಲಾಗಿತ್ತು. ಒಂದೆರಡು ಬಾವಿಯನ್ನು ಹೊರತು ಪಡಿಸಿದರೆ, ಹಲವು ಬಾವಿಗಳು ಮುಚ್ಚಲ್ಪಟ್ಟಿವೆ. ಅವುಗಳ ಉತ್ಖನನದ ಕುರಿತು ಅಧ್ಯಯನ ನಡೆಯಬೇಕು ಎನ್ನುತ್ತಾರೆ ಸ್ಥಳೀಯರು.
ಕೋಟೆಯ ಸುತ್ತಲೂ ಹಲವು ದೇವಾಲಯಗಳು, ಬಾವಿಗಳು ಪುರಾತತ್ವ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿ ನಶಿಸಿಹೋಗಿವೆ. ಹಿರಿಯರು ನೀಡಿದ ಬಳುವಳಿಯನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಅಽಕಾರಿಗಳು ಸಮಗ್ರ ಉತ್ಖನನ ಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡ ಕುಲುಮಿ ಸುರೇಶ್ ಒತ್ತಾಯಿಸಿದರು.
ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದ್ದು, ಬಂಗ್ಲೆಗುಡ್ಡದಲ್ಲಿ ಸಿಕ್ಕ 7 ಅಸ್ಥಿಪಂಜರಗಳನ್ನು ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ.…
ನವದೆಹಲಿ: ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಿತಿನ್ ನಬಿನ್ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳತ್ತ ಗಮನಹರಿಸಿದ್ದಾರೆ.…
ಕೇಪ್ ಕೆನವೆರೆಲ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳ ಕಾಲ ಸುದೀರ್ಘ ಕಾಲದ ಅನುಭವ ಹೊಂದಿರುವ ಸುನಿತಾ ವಿಲಿಯಮ್ಸ್ ನಿವೃತ್ತರಾಗಿದ್ದಾರೆ.…
ಮಹಾದೇಶ್ ಎಂ ಗೌಡ ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ರಾಮನಗರ: ತೆಂಗಿನ ಮರ ಹತ್ತಿ ಕೆಳಗೆ ಬಿದ್ದ ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ…
ಮಹಾದೇಶ್ ಎಂ ಗೌಡ ಹನೂರು: ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ…