Sports
ಬೆಂಗಳೂರು : 64ನೇ ಸುಬ್ರೋಟೋ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸಬ್ ಜೂನಿಯರ್ ಬಾಯ್ಸ್ (U-15) ವಿಭಾಗದ ಮೂರನೇ ದಿನವು ರೋಚಕ ಪಂದ್ಯಗಳ ಸಾಕ್ಷಿಯಾಯಿತು. ಹರಿಯಾಣ ಮತ್ತು ಪಶ್ಚಿಮ ಬಂಗಾಳ ದೊಡ್ಡ ಅಂತರದ ಗೆಲುವುಗಳೊಂದಿಗೆ ಗಮನ ಸೆಳೆದರೆ, ಗುಜರಾತ್ ಕೂಡ ವಿಶ್ವಾಸಾರ್ಹ ಜಯ ದಾಖಲಿಸಿತು.
ದಿನದ ಆರಂಭಿಕ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಹಾಗೂ ಶ್ರೀ ಲೀಲಾನಂದ ಸೆಕೆಂಡರಿ ಸ್ಕೂಲ್ (ಝಾರ್ಖಂಡ್) ನಡುವೆ 2-2 ಡ್ರಾ ಆಯಿತು. CISCE ಪರ ಮಮೇಶ್ (30’) ಮತ್ತು ಬಿಕ್ಸನ್ (33’) ಗೋಲು ಗಳಿಸಿದರೆ, ಝಾರ್ಖಂಡ್ ಪರ ಸಂದೀಪ್ (22’) ಮತ್ತು ಅಶೀಷ್ (35’) ಗೋಲು ದಾಖಲಿಸಿದರು.
ಹರಿಯಾಣದ ಇಂದಿರಾ ಮಾಡರ್ನ್ ಹೈ ಸ್ಕೂಲ್ ಅದ್ಭುತ ಪ್ರದರ್ಶನ ನೀಡಿ ತಾಶಿ ನಮ್ಗ್ಯಾಲ್ ಅಕಾಡೆಮಿ (IPSC) ವಿರುದ್ಧ 8-0 ಅಂತರದ ಭರ್ಜರಿ ಜಯ ದಾಖಲಿಸಿತು. ಸುಖ್ವಿಂದರ್ ನಾಲ್ಕು ಗೋಲುಗಳನ್ನು (2’, 17’, 20’, 43’) ಗಳಿಸಿ ಮೆರೆದರೆ, ರೋಹಿತ್ (11’), ಅರಣ್ (22’, 24’) ಮತ್ತು ಆದಿತ್ಯ (50+2’) ತಲಾ ಗೋಲು ಹೊಡೆದರು.
ಚಂಡೀಗಢದ ಗವರ್ಮೆಂಟ್ ಮಾದರಿ ಸೀನಿಯರ್ ಸೆಕೆಂಡರಿ ಸ್ಕೂಲ್ ಮತ್ತು ಹಿಮಾಚಲ ಪ್ರದೇಶದ ಮದರ್ಸ್ ಪ್ರೈಡ್ ಪಬ್ಲಿಕ್ ಸ್ಕೂಲ್ ನಡುವಿನ ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿತು. ಕೃಷ್ಣ (9’) ಚಂಡೀಗಢ ಪರ ಗೋಲು ಸಾಧಿಸಿತು.
ಮಧ್ಯಾಹ್ನದ ಪಂದ್ಯದಲ್ಲಿ, ಪಶ್ಚಿಮ ಬಂಗಾಳದ ಮಾನಿಕ್ಪಾರ ವಿವೇಕಾನಂದ ವಿದ್ಯಾಪೀಠ, ನಾಗಲ್ಯಾಂಡ್ ನ SFS ಹೈಯರ್ ಸೆಕೆಂಡರಿ ಸ್ಕೂಲ್ ವಿರುದ್ಧ 8-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಕೌಶಿಕ್ (2’, 25’), ಮುರ್ಮು (27’, 29’), ಸೌಮೆನ್ (9’), ಫಾಗುನ್ (11’), ಅಭಿಜಿತ್ (42’) ಮತ್ತು ನೆಹಾಲ್ (50+1’) ಪಶ್ಚಿಮ ಬಂಗಾಳ ಪರ ಗೋಲು ಗಳಿಸಿದರು. ನಾಗಲ್ಯಾಂಡ್ ಪರ ಎನ್ಗ್ನಮಿಲ್ಲೆನ್ (46’) ಏಕೈಕ ಗೋಲು ದಾಖಲಿಸಿದರು.
ಕೊನೆಯ ಪಂದ್ಯದಲ್ಲಿ, ಗುಜರಾತ್ನ ಆನಂದ್ ನಿಕೇತನ ಸ್ಕೂಲ್ ಜಯಶ್ರೀ ಪೆರಿವಾಲ್ ಇಂಟರ್ನ್ಯಾಷನಲ್ ಸ್ಕೂಲ್ (ISSO) ವಿರುದ್ಧ 2-0 ಅಂತರದ ಜಯ ಸಾಧಿಸಿತು. ಮೇಘ್ (23’) ಮೊದಲ ಗೋಲು ಗಳಿಸಿದರೆ, ಶುಭಮ್ (50+1’) ಇಂಜುರಿ ಟೈಮ್ನಲ್ಲಿ ಜಯವನ್ನು ಸಾಧಿಸಿದರು.
ಮೂರನೇ ದಿನ ಸುಬ್ರೋಟೋ ಕಪ್ ಯುವ ಆಟಗಾರರ ಕೌಶಲ್ಯ, ತಂಡದ ಆಟ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.
ಕಳೆದ ಬಾರಿಯ ಭೀಕರ ಕಾಲ್ತುಳಿತ ಬಳಿಕ ರಂಗೇರಿದ ಕ್ರಿಕೆಟ್ ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್…
ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…
ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ…
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ…
ಬಿಆರ್ಟಿ ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲೊಂದು ಬಿಳಿಗಿರಿ ರಂಗನ ಬೆಟ್ಟ (ಬಿಆರ್ಟಿ) ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ…
ಮಹೇಶ ಎಲಕುಂಚವಾರ್ ಅವರ ಪ್ರಸಿದ್ಧ ಮರಾಠಿ ನಾಟಕವನ್ನು ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿದ್ದಾರೆ ಮರಾಠಿಯ ಮಹೇಶ ಎಲಕುಂಚವಾರ ಅವರ…