ಬೆಂಗಳೂರು : ಇಂದಿನಿಂದ ಭಾರತ ಮತ್ತು ಸೌಥ್ ಆಫ್ರಿಕಾ ನಡುವಿನ ಮೊದಲ ಟಿ೨೦ ಪಂದ್ಯ ಇಂದು ಸಂಜೆ ೭.೩೦ ( ಭಾರತೀಯ ಕಾಲಮಾನ) ಆರಂಭವಾಗಲಿದೆ. ವಿಶ್ವಕಪ್ ನಂತರ ಭಾರತ ತಂಡ ಮೊದಲ ಬಾರಿಗೆ ಪ್ರವಾಸ ಕೈಗೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ೩ ಏಕದಿನ, ೩ ಓಡಿಐ ಮತ್ತು ೨ ಟಸ್ಟ್ ಪಂದ್ಯಗಳಲ್ಲಿ ಕಾದಾಡಲಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ೨೦೨೩ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ೬ ವಿಕೆಟ್ಗಳ ಸೋಲು ಕಂಡು ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧ ಮೊಲದ ಟಿ೨೦ ಸರಣಿಯ ಆಡಿ ಅದರಲ್ಲಿ ೪-೧ ಅಂತರದಿಂದ ಗೆದ್ದ ಬೀಗಿದ್ದ ಭಾರತ ತಂಡಕ್ಕೆ ದ. ಆಫ್ರಿಕಾ ತಂಡ ಸವಾಲೋಡ್ಡಲಿದೆ.
ಇಂದಿನಿಂದ ದ. ಆಫ್ರಿಕಾ ವಿರುದ್ಧ ಆರಂಭವಾಗುವ ಸರಣಿಗೂ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಂಗಾಮಿ ಟಿ೨೦ ನಾಯಕ ಸೂರ್ಯಕುಮಾರ ಯಾದವ್, ಆಸೀಸ್ ವಿರುದ್ಧದ ಸರಣಿ ಗೆಲುವು ಸೌಥ್ ಆಫ್ರಿಕಾ ವಿರುದ್ಧ ಭಯಮುಕ್ತ ಆಟವಾಡಲು ಸಹಕರಿಸಲಿದೆ ಮತತು ಆತ್ಮಸ್ಥೈರ್ಯ ಹೆಚ್ಚಾಗಿದೆ. ಆದರೆ ವಿಶ್ವಕಪ್ ಸೋಲು ನನ್ನನ್ನು ಸದಾ ಕಾಡುತ್ತಿದೆ ಎಂದು ಸೂರ್ಯ ಹೇಳಿದ್ದಾರೆ.
ಆಸೀಸ್ ವಿರುದ್ಧದ ವಿಶ್ವಕಪ್ ಸೋಲು ನಿರಾಶಾದಾಯಕವಾಗಿದ್ದು, ಇದನ್ನು ನಾವು ಮರೆಯುವುದು ತುಂಬಾ ಕಷ್ಟ. ಆದರೆ ವಿಶ್ವಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವು ಆಟಗಾರರಲ್ಲಿ ಧೈರ್ಯ ತುಂಬಿದೆ. ಕಾಂಗರೂ ವಿರುದ್ಧ ನಾವು ಭಯಮುಕ್ತ ಆಟ ಆಡಿದ್ದೆವು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಇದೇ ಆಟ ಮುಂದುವರೆಸುತ್ತೇವೆ ಎಂದರು.
6ನೇ ಬೌಲರ್ ಬಗ್ಗೆ ಚಿಂತನೆ ನಡೆಸಿದ್ದೇವೆ : ನಾವು ಈಗಾಗಲೇ ತಂಡದ ಪರ 6ನೇ ಬೌಲರ್ ಜವಾಬ್ದಾರಿ ಯಾರಿಗೆ ನೀಡಬೇಕೆಂದು ಯೋಚಿಸಿದ್ದೇವೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ವೇಳೆ ಬಿಸಿಸಿಐ ಸೆಲೆಕ್ಟರ್ಗಳು ಯಂಗ್ ಪ್ಲೇಯರ್ಗಳ ಮೇಲೆ ನಂಬಿಕೆ ಇಟ್ಟಿದ್ದರು. ಅದಕ್ಕೆ ತಕ್ಕಂತೆ ಉತ್ತಮ ಫಲಿತಾಂಶ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಇದೇ ಸಂಸ್ಕೃತಿ ಮುಂದುವರಿಯುತ್ತಾ ಎಂಬುದನ್ನು ನೋಡಬೇಕು. ಹಾಗೆಯೇ ನಮ್ಮಲ್ಲಿ 6ನೇ ಬೌಲರ್ಗಾಗಿ ಸಾಕಷ್ಟು ಆಯ್ಕೆಗಳಿವೆ. ತಂಡವು ಉತ್ತಮ ಆಟಗಾರರ ಸಂಯೋಜನೆಯನ್ನು ಹೊಂದಿದ್ದು, ನಾಯಕನಾಗಿ ತಂಡವನ್ನು ಮುನ್ನಡೆಸಲು ಸಂತೋಷವಾಗುತ್ತಿದೆ,” ಎಂದು ಸೂರ್ಯಕುಮಾರ್ ಯಾದವ್ ಸಂತಸ ವ್ಯಕ್ತಪಡಿಸಿದ್ದಾರೆ.
ಯುವ ಆಟಗಾರರಿಗೆ ಸೂರ್ಯ ನೀಡಿದ ಸಲಹೆ ಏನು? : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಯುವ ಆಟಗಾರರಾದ ರಿಂಕು ಸಿಂಗ್ ಹಾಗೂ ಜಿತೇಶ್ ಶರ್ಮಾ ಅವರಿಗೆ ತಮ್ಮ ರಾಜ್ಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ನೀಡುವ ಪ್ರದರ್ಶನವನ್ನೇ ಮುಂದುವರಿಸುವಂತೆ ಸಲಹೆ ನೀಡಿದ್ದೆವು. ತಮ್ಮ ರಾಜ್ಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ರಾಷ್ಟ್ರೀಯ ತಂಡದಲ್ಲೂ ಅವರು ಈಗ ಸ್ಥಾನ ಪಡೆದುಕೊಂಡಿದ್ದಾರೆ. ಸ್ಥಳೀಯ ಹಾಗೂ ಐಪಿಎಲ್ ಟೂರ್ನಿಯ ತಂಡಗಳಲ್ಲಿ ನೀಡುವ ಪ್ರದರ್ಶನವನ್ನೇ ರಾಷ್ಟ್ರೀಯ ತಂಡದಲ್ಲೂ ಪ್ರದರ್ಶಿಸಿ ಅದಕ್ಕಿಂತ ಹೆಚ್ಚಿನದನ್ನು ಮಾಡಬೇಡಿ ಎಂದು ಸಲಹೆ ನೀಡಿದ್ದೆವು,” ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…