ಕ್ರೀಡೆ

ವನಿತೆಯರ ಏಷ್ಯಾಕಪ್‌ 2024 ವೇಳಾಪಟ್ಟಿ ಪ್ರಕಟ: ಭಾರತ-ಪಾಕಿಸ್ತಾನ ಕಾದಾಟಕ್ಕೆ ವೇದಿಕೆ ಸಜ್ಜು

ಶ್ರೀಲಂಕಾ: ಬಹುನಿರೀಕ್ಷಿತಾ ವನಿತೆಯರ ಏಷ್ಯಾಕಪ್‌ 2024ರ ವೇಳಾಪಟ್ಟಿ ಕೊನೆಯೂ ಪ್ರಕಟವಾಗಿದೆ. ಇದೇ ಜು.19ರಿಂದ ಜು.28 ವರೆಗೆ ಈ ಟೂರ್ನಿ ನಡೆಯಲಿದೆ.

ಶ್ರೀಲಂಕಾ ಕ್ರಿಕೆಟ್‌ ಈ ಟೂರ್ನಿಯನ್ನು ಆಯೋಜಿಸುತ್ತಿದ್ದು, ಒಟ್ಟು ಎಂಟು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಮೊದಲ ಗುಂಪಿನಲ್ಲಿ ಬದ್ಧ ವೈರಿಗಳಾದ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಇತ್ತಂಡಗಳು ಜು.19ರಂದು ಸಂಜೆ 7ಕ್ಕೆ ರಂಗಿರಿ ಡಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿವೆ.

ಇನ್ನು ಈ ಟೂರ್ನಿಯ ಆತಿಥ್ಯ ವಹಿಸಿರುವ ಶ್ರೀಲಂಕಾ ತನ್ನ ಮೊದಲ ಪಂದ್ಯವನ್ನು ಜು.20 ರಂದು ಆಡಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳು ರಂಗಿರಿ ಡಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಾರ್ವಜನಿಕರಿಗೆ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ನೀಡುವುದಾಗಿ ಕ್ರಿಕೆಟ್‌ ಮಂಡಳಿ ಘೋಷಿಸಿದೆ.

ಈ ಟೂರ್ನಿಯಲ್ಲಿ ಒಟ್ಟು 2 ಗುಂಪುಗಳಿದ್ದು, ʼಎʼ ಗುಂಪಿನಲ್ಲಿ ನಾಲ್ಕು ತಂಡಗಳು ಹಾಗೂ ʼಬಿʼ ಗುಂಪಿನಲ್ಲಿ ನಾಲ್ಕು ತಂಡಗಳು ಸ್ಥಾನ ಪಡೆದಿವೆ. ಈ ಎರಡು ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಸ್‌ಗೆ ಅರ್ಹತೆ ಪಡೆಯಲಿವೆ. ಹಾಗೂ ಸೆಮಿಸ್‌ನಲ್ಲಿ ಮೊದಲ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಮೊದಲ ತಂಡಕ್ಕು ಎರಡನೇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡದ ನಡುವೆ ಮೊದಲ ಸೆಮಿಸ್‌ ಪಂದ್ಯ ನಡೆಯುತ್ತದೆ. ಹಾಗೆಯೇ ಎರಡನೇ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ ಮತ್ತು ಮೊದಲ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡದ ನಡುವೆ ಎರಡನೇ ಸೆಮಿಸ್‌ ಪಂದ್ಯ ನಡೆಯಲಿದೆ.

ಈ ಪಂದ್ಯಗಳಲ್ಲಿ ಗೆದ್ದ ತಂಡಗಳು ಫೈನಲ್‌ಗೆ ಪ್ರವೇಶ ಪಡೆಯಲಿದ್ದು, ಫೈನಲ್‌ನಲ್ಲಿ ಗೆದ್ದ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ.

ವೇಳಾಪಟ್ಟಿ ಇಂತಿದೆ:

ಜು.19:
ಮೊದಲ ಪಂದ್ಯ: ಯುಎಇ vs ನೇಪಾಳ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೆ ಪಂದ್ಯ: ಭಾರತ vs ಪಾಕಿಸ್ತಾನ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)

ಜು.20
ಮೊದಲ ಪಂದ್ಯ: ಮಲೇಷಿಯಾ vs ಥಾಯ್ಲೆಂಡ್‌ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಶ್ರೀಲಂಕಾ vs ಬಾಂಗ್ಲಾದೇಶ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)

ಜು.21
ಮೊದಲ ಪಂದ್ಯ: ಭಾರತ vs ಯುಎಇ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಪಾಕಿಸ್ತಾನ vs ನೇಪಾಳ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)

ಜು.22
ಮೊದಲ ಪಂದ್ಯ: ಶ್ರೀಲಂಕಾ vs ಮಲೇಷಿಯಾ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಬಾಂಗ್ಲಾದೇಶ vs ಥಾಯ್ಲೆಂಡ್‌ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)

ಜು.23
ಮೊದಲ ಪಂದ್ಯ: ಪಾಕಿಸ್ತಾನ vs ಯುಎಇ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಭಾರತ vs ನೇಪಾಳ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)

ಜು.24
ಮೊದಲ ಪಂದ್ಯ: ಬಾಂಗ್ಲಾದೇಶ vs ಮಲೇಷಿಯಾ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಶ್ರೀಲಂಕಾ vs ಥಾಯ್ಲೆಂಡ್‌ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)

ಜು. 26 ರಂದು ಸೆಮಿಸ್‌ ಹಾಗೂ ಜು.28 ರಂದು ಫೈನಲ್‌ ಪಂದ್ಯ ನೆಡಲಿದೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago