ಬೆಂಗಳೂರು: 2023ರ ಐಪಿಎಲ್ ಕೂಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರ್ಗಮಿಸಿದೆ. ಸತತ ಮೂರು ಬಾರಿ ಪ್ಲೇ ಆಫ್ ತಲುಪಿದ್ದ ಆರ್ ಸಿಬಿ ಈ ಬಾರಿ ಅಂತಿಮ ಪಂದ್ಯದಲ್ಲಿ ಸೋಲುವ ಮೂಲಕ ಲೀಗ್ ಹಂತದಲ್ಲೇ ಮನೆದಾರಿ ಹಿಡಿದಿದೆ. ಆರ್ ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಈ ಋತುವಿನ ಐಪಿಎಲ್ನಲ್ಲಿನ ತನ್ನ ತಂಡದ ಪ್ರದರ್ಶನದ ಬಗ್ಗೆ ವಿಮರ್ಶಾತ್ಮಕ ಮೌಲ್ಯಮಾಪನ ಮಾಡಿದ್ದು “ಕೂಟದಲ್ಲಿ ನಮ್ಮದು ಅತ್ಯುತ್ತಮ ತಂಡಗಳಲ್ಲಿ ಒಂದಾಗಿರಲಿಲ್ಲ ಮತ್ತು ಪ್ಲೇ ಆಫ್ ತಲುಪುಲು ಅರ್ಹರಾಗಿರಲಿಲ್ಲ” ಎಂದು ಹೇಳಿದರು.
“ನಮ್ಮ ಋತುವು ಅಲ್ಲಿಗೆ ಕೊನೆಗೊಳ್ಳುತ್ತದೆ ಎಂದು ನಾನು ನಿರಾಶೆಗೊಂಡಿದ್ದೇನೆ. ನಾವು ನಮ್ಮ ಬಗ್ಗೆ ಆಳವಾಗಿ ಅವಲೋಕಿಸಿದರೆ, ನಾವು ಸ್ಪರ್ಧೆಯಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದಾಗಿರಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ” ಎಂದು ಫಾಫ್ ಹೇಳಿದರು.
ನಾವು ಅದೃಷ್ಟ ಹೊಂದಿದ್ದೆವು, ಹೀಗಾಗಿ ಋತುವಿನ ಉದ್ದಕ್ಕೂ ಕೆಲವು ಉತ್ತಮ ಪ್ರದರ್ಶನಗಳು ಬಂದಿದ್ದವು, ಆದರೆ ಒಟ್ಟಾರೆಯಾಗಿ ತಂಡವಾಗಿ, ನೀವು 15-14 ಪಂದ್ಯಗಳ ಅವಧಿಯನ್ನು ನೋಡಿದರೆ, ನಾವು ಬಹುಶಃ ಪ್ಲೇ ಆಫ್ ನಲ್ಲಿರಲು ಅರ್ಹರಲ್ಲ” ಎಂದು ಆರ್ ಸಿಬಿ ನಾಯಕ ಫಾಫ್ ಹೇಳಿದರು.
ಗುಜರಾತ್ ವಿರುದ್ಧದ ಸೋಲಿನ ಬಗ್ಗೆ ಮಾತನಾಡಿದ ಫಾಫ್, “ಈ ಸೋಲು ಇನ್ನೂ ನೋವುಂಟು ಮಾಡುತ್ತಿದೆ. ನಾವು ಭಾನುವಾರ ರಾತ್ರಿ ನಿಜವಾಗಿಯೂ ಕಷ್ಟಪಟ್ಟು ಪ್ರಯತ್ನಿಸಿದ್ದೇವೆ, ಆದರೆ ದುರದೃಷ್ಟವಶಾತ್ ವಿಫಲವಾದೆವು. ಈ ವರ್ಷದ ನಮ್ಮ ಪಾಸಿಟಿವ್ ಗಳನ್ನು ನೋಡಿದರೆ ಗ್ಲೆನ್ ಮ್ಯಾಕ್ಸ್ವೆಲ್ ಆಟ, ನನ್ನ ಮತ್ತು ವಿರಾಟ್ ನಡುವೆ ನಾವು ಹೊಂದಿದ್ದ ಜೊತೆಯಾಟಗಳು. ಬಹುಶಃ ಪ್ರತಿ ಪಂದ್ಯದಲ್ಲೂ 50 ರನ್ ಜೊತೆಯಾಟವಾಡಿದ್ದೆವು. ಮೊಹಮ್ಮದ್ ಸಿರಾಜ್ ಉತ್ತಮ ಸೀಸನ್ ಹೊಂದಿದ್ದರು” ಎಂದರು.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸ್ವಂತ ಮಗನಿಗೆ ತಾಯಿ ಕಿಡ್ನಿ ಜೋಡಣೆಗೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣ ವ್ಯಾಪ್ತಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕನನ್ನು ಮಕ್ಕಳ ರಕ್ಷಣಾ ಘಟಕದ…
ನವದೆಹಲಿ: ಭಾರತ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿಗೆ ಗುರುವಾರ…
ಸೆಸ್ಕ್ ವತಿಯಿದ ಮೈಸೂರು ನಗರದಲ್ಲಿ ಕೈಗೊಂಡಿರುವ ಯೋಜನೆ ಮೈಸೂರು : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದಿಂದ ಮೈಸೂರು…
ಕೇರಳಂ : ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಆಯ್ಕೆಯಾಗಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ…