ಕ್ರೀಡೆ

ಗಂಡು ಮಗುವಿನ ತಂದೆಯಾದ ದಿ ಗ್ರೇಟ್‌ ಖಲಿ

ಡಬ್ಲೂಡಬ್ಲೂಇ ಖ್ಯಾತಿಯ ದಿ ಗ್ರೇಟ್‌ ಖಲಿ ಗಂಡು ಮಗುವಿನ ತಂದೆಯಾಗಿದ್ದಾರೆ. ಎರಡನೇ ಬಾರಿಗೆ ತಂದೆಯಾಗಿರೊ ಖುಷಿಯಲ್ಲಿರುವ ಖಲಿ ತಮ್ಮ ಅಜಾನುಬಾಹು ತೋಳುಗಳಿಂದ ತಮ್ಮ ಮುದ್ದು ಮಗನನ್ನು ಅಪ್ಪಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಆಶಿರ್ವಾದದಿಂದ ಇಂದು ನಾನು ಗಂಡು ಮಗುವಿನ ತಂದೆಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದೀಗ ಖಲಿ ಎರಡನೇ ಬಾರಿಗೆ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಖಲಿ ಅವರಿಗೆ ಈಗಾಗಲೇ 9 ವರ್ಷದ ಅವ್ಲೀನ್‌ ಕೌರ್‌ ಎಂಬ ಮಗಳಿದ್ದಾಳೆ. ಇದೀಗ ಖಲಿ ಕುಟುಂಬಕ್ಕೆ ಜ್ಯೂನಿಯ ಖಲಿ ಆಗಮನವಾಗಿದ್ದು, ಖಲಿ ದಂಪತಿಯ ಸಂಭ್ರಮ ದುಪ್ಪಟ್ಟಾಗಿದೆ.

ಡಬ್ಲೂಡಬ್ಲೂಇ ಕಾರ್ಯಕ್ರಮ ಹಿಂದಿನಿಂದಲೂ ಕೂಡ ಯುವ ಸಮೂಹದ ನೆಚ್ಚಿನ ಆಟವಾಗಿದೆ. ಈ ಪಂದ್ಯದಲ್ಲಿ ಸೆಣಸಾಡುವ ಧೈತ್ಯ ಸ್ಪರ್ಧಾಳುಗಳ ದೇಹದಾಡ್ಯತೆಯನ್ನು ನೋಡಿದರೆ ಎಂತಹವರು ಕೂಡ ಹುಬ್ಬೇರಿಸುತ್ತಾರೆ. ಡಬ್ಲೂಡಬ್ಲೂಇ ಪಂದ್ಯಾಟದ ಭಾರತೀಯ ಕುಸ್ತಿ ಪಟು ದಿ ಗ್ರೇಟ್‌ ಖಲಿಯಬಗ್ಗೆ ಕೇಳದೆ ಇರುವವರಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಖಲಿಯ ಹೆಸರು ದಲೀಪ್‌ ಸಿಂಗ್‌ ರಾಣ. ಡಬ್ಲೂಡಬ್ಲೂಇ ಕಾರ್ಯಕ್ರಮದ ಮೂಲಕ ದಿ ಗ್ರೇಟ್‌ ಖಲಿ ಎಂದೇ ಖ್ಯಾತರಾಗಿರುವ ಇವರು ತಮ್ಮ ಅಸಧಾರಣ ಎತ್ತರ, ನಿಬ್ಬೆರಗಾಗಿಸುವ ಮೈಕಟ್ಟಿನಿಂದಲೇ ಪ್ರಸಿದ್ಧಿ ಪಡೆದಿದ್ದಾರೆ.

ದಿ ಗ್ರೇಟ್‌ ಖಲಿ ಅವರು ವಿಶ್ವ ವಿಖ್ಯಾತ ಡಬ್ಲೂಡಬ್ಲೂಇ ಸ್ಪರ್ಧೆಯಲ್ಲಿ ಹೆವಿವೆಯ್ಟ್‌ ಚಾಂಪಿಯನ್‌ಶಿಪ್‌ ನಲ್ಲಿ ಜಯಗಳಿಸಿದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಇನ್ನು ಡಬ್ಲೂಡಬ್ಲೂಇ ಚಾಂಪಿಯನ್‌ಶಿಪ್‌ ಪಡೆದ ಬಳಿಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ದಿ ಗ್ರೇಟ್‌ ಖಲಿ ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ.ಅದಷ್ಟೇ ಅಲ್ಲದೇ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೊ ಬಿಗ್‌ ಬಾಸ್‌ ಹಿಂದಿ ಯಲ್ಲಿಯೂ ಕೂಡ ಸ್ಪರ್ದಿಯಾಗಿ ಭಾಗವಹಿಸಿದ್ದರು.

lokesh

Recent Posts

ಟಿ-20 ವಿಶ್ವಕಪ್‌ | ಸ್ಕಾಟ್ಲೆಂಡ್‌ ವಿರುದ್ಧ ಇಂಗ್ಲೆಂಡ್‌ 5 ವಿಕೆಟ್‌ ಗೆಲುವು

ಕೋಲ್ಕತ್ತ : ಟಿ-20 ವಿಶ್ವಕಪ್‌ನ ಲೀಗ್ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್‌ಗಳ…

10 hours ago

ಡಿಕೆಶಿ ಮುಖ್ಯಮಂತ್ರಿ ಆಗೇ ಆಗ್ತರೆ : ಶಾಸಕ ಗಣಿಗ ರವಿಕುಮಾರ್‌

ಮಂಡ್ಯ: ಡಿ.ಕೆ. ಶಿವಕುಮಾರ್ ಅವರು ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಿ.ರವಿಕುಮಾರ್‌…

10 hours ago

ಮೈಸೂರು | ಶಿವರಾತ್ರಿಗೆ ಎಲ್ಲೆಡೆ ಸಿದ್ಧತೆ

ಮೈಸೂರು : ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿ ಆಚರಣೆಗೆ ಶಿವ ದೇವಾಲಯಗಳು ಸಂಪೂರ್ಣ ಸಜ್ಜಾಗಿವೆ. ನಗರದ ಪ್ರಮುಖ…

10 hours ago

ಮೈಸೂರು | 4 ಲಕ್ಷ ಮೌಲ್ಯದ ಡ್ರಗ್ಸ್ ವಶ‌ ; ಆರೋಪಿ ಬಂಧನ

ಮೈಸೂರು : ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಮಂಡಿ ಪೊಲೀಸ್ ಠಾಣಾ ಅಧಿಕಾರಿಗಳು ನಡೆಸಿದ…

10 hours ago

2.20 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ; ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಪ್ರಗತಿ : ಸಿಎಂ ಮೆಚ್ಚುಗೆ

ಹಾವೇರಿ : ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ…

12 hours ago

ರಾಜ್ಯದ 22 ಸಾವಿರಕ್ಕೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಹಣ ಬಿಡುಗಡೆ

​ಬೆಂಗಳೂರು : ಕರ್ನಾಟಕದ ಸಾವಿರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ…

12 hours ago