ಕ್ರೀಡೆ

ಗಂಡು ಮಗುವಿನ ತಂದೆಯಾದ ದಿ ಗ್ರೇಟ್‌ ಖಲಿ

ಡಬ್ಲೂಡಬ್ಲೂಇ ಖ್ಯಾತಿಯ ದಿ ಗ್ರೇಟ್‌ ಖಲಿ ಗಂಡು ಮಗುವಿನ ತಂದೆಯಾಗಿದ್ದಾರೆ. ಎರಡನೇ ಬಾರಿಗೆ ತಂದೆಯಾಗಿರೊ ಖುಷಿಯಲ್ಲಿರುವ ಖಲಿ ತಮ್ಮ ಅಜಾನುಬಾಹು ತೋಳುಗಳಿಂದ ತಮ್ಮ ಮುದ್ದು ಮಗನನ್ನು ಅಪ್ಪಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಆಶಿರ್ವಾದದಿಂದ ಇಂದು ನಾನು ಗಂಡು ಮಗುವಿನ ತಂದೆಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದೀಗ ಖಲಿ ಎರಡನೇ ಬಾರಿಗೆ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಖಲಿ ಅವರಿಗೆ ಈಗಾಗಲೇ 9 ವರ್ಷದ ಅವ್ಲೀನ್‌ ಕೌರ್‌ ಎಂಬ ಮಗಳಿದ್ದಾಳೆ. ಇದೀಗ ಖಲಿ ಕುಟುಂಬಕ್ಕೆ ಜ್ಯೂನಿಯ ಖಲಿ ಆಗಮನವಾಗಿದ್ದು, ಖಲಿ ದಂಪತಿಯ ಸಂಭ್ರಮ ದುಪ್ಪಟ್ಟಾಗಿದೆ.

ಡಬ್ಲೂಡಬ್ಲೂಇ ಕಾರ್ಯಕ್ರಮ ಹಿಂದಿನಿಂದಲೂ ಕೂಡ ಯುವ ಸಮೂಹದ ನೆಚ್ಚಿನ ಆಟವಾಗಿದೆ. ಈ ಪಂದ್ಯದಲ್ಲಿ ಸೆಣಸಾಡುವ ಧೈತ್ಯ ಸ್ಪರ್ಧಾಳುಗಳ ದೇಹದಾಡ್ಯತೆಯನ್ನು ನೋಡಿದರೆ ಎಂತಹವರು ಕೂಡ ಹುಬ್ಬೇರಿಸುತ್ತಾರೆ. ಡಬ್ಲೂಡಬ್ಲೂಇ ಪಂದ್ಯಾಟದ ಭಾರತೀಯ ಕುಸ್ತಿ ಪಟು ದಿ ಗ್ರೇಟ್‌ ಖಲಿಯಬಗ್ಗೆ ಕೇಳದೆ ಇರುವವರಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಖಲಿಯ ಹೆಸರು ದಲೀಪ್‌ ಸಿಂಗ್‌ ರಾಣ. ಡಬ್ಲೂಡಬ್ಲೂಇ ಕಾರ್ಯಕ್ರಮದ ಮೂಲಕ ದಿ ಗ್ರೇಟ್‌ ಖಲಿ ಎಂದೇ ಖ್ಯಾತರಾಗಿರುವ ಇವರು ತಮ್ಮ ಅಸಧಾರಣ ಎತ್ತರ, ನಿಬ್ಬೆರಗಾಗಿಸುವ ಮೈಕಟ್ಟಿನಿಂದಲೇ ಪ್ರಸಿದ್ಧಿ ಪಡೆದಿದ್ದಾರೆ.

ದಿ ಗ್ರೇಟ್‌ ಖಲಿ ಅವರು ವಿಶ್ವ ವಿಖ್ಯಾತ ಡಬ್ಲೂಡಬ್ಲೂಇ ಸ್ಪರ್ಧೆಯಲ್ಲಿ ಹೆವಿವೆಯ್ಟ್‌ ಚಾಂಪಿಯನ್‌ಶಿಪ್‌ ನಲ್ಲಿ ಜಯಗಳಿಸಿದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಇನ್ನು ಡಬ್ಲೂಡಬ್ಲೂಇ ಚಾಂಪಿಯನ್‌ಶಿಪ್‌ ಪಡೆದ ಬಳಿಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ದಿ ಗ್ರೇಟ್‌ ಖಲಿ ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ.ಅದಷ್ಟೇ ಅಲ್ಲದೇ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೊ ಬಿಗ್‌ ಬಾಸ್‌ ಹಿಂದಿ ಯಲ್ಲಿಯೂ ಕೂಡ ಸ್ಪರ್ದಿಯಾಗಿ ಭಾಗವಹಿಸಿದ್ದರು.

lokesh

Recent Posts

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಸಾಂಸ್ಕೃತಿಕ ನಗರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರಾ ಕೆಲಸಗಳು ಭರದಿಂದ ಸಾಗುತ್ತಿವೆ. ನಾಡಹಬ್ಬ…

3 mins ago

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

20 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

33 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

9 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

10 hours ago