ಕ್ರೀಡೆ

ಟಿ-20 ಕ್ರಿಕೆಟ್ ವಿಶ್ವಕಪ್ ಸಮರ ಇಂದಿನಿಂದ

ಈ ಬಾರಿ ವಿಶ್ವಕಪ್‌ನಲ್ಲಿ ೧೬ ತಂಡಗಳು ಭಾಗಿ; ನ.೧೩ರಂದು ಫೈನಲ್ ಪಂದ್ಯಾವಳಿ

ಮೈಸೂರು: ಭರಪೂರ ಮನೋರಂಜನೆಯ ಆಗರ ಎಂದೇ ಖ್ಯಾತಿ ಗಳಿಸಿರುವ ಟಿ-೨೦ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಇಂದಿನಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ.
ನ.೧೩ರಂದು ನಡೆಯಲಿರುವ ಫೈನಲ್ ಪಂದ್ಯವನ್ನು ಸೇರಿಸಿಕೊಂಡು ಒಟ್ಟು ೪೫ ಪಂದ್ಯಗಳು ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲಿದೆ.
ಈ ಬಾರಿ ವಿಶ್ವಕಪ್‌ನಲ್ಲಿ ೧೬ ತಂಡಗಳು ಭಾಗವಹಿಸಲಿದ್ದು, ಅದರಲ್ಲಿ ೮ ತಂಡಗಳನ್ನು ತಲಾ ೪ ತಂಡಗಳಂತೆ ಎರಡು ಗ್ರೂಪ್‌ಗಳಾಗಿ ಮಾಡಲಾಗಿದೆ. ಈ ಎರಡು ಗ್ರೂಪ್‌ನಲ್ಲಿ ಮೊದಲ ಎರಡು ಸ್ಥಾನವನ್ನು ಗಳಿಸುವ ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಸಿಕ್ಸ್ ವಿಭಾಗದಲ್ಲೂ ಎರಡು ಗುಂಪುಗಳನ್ನು ಮಾಡಲಾ ಗಿದ್ದು, ಇಲ್ಲೂ ತಮ್ಮ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿವೆ.
ಅರ್ಹತಾ ಸುತ್ತಿನ ಮೊದಲ ಪಂದ್ಯವು ಅ.೧೬ರಂದು ಶ್ರೀಲಂಕಾ ಹಾಗೂ ನಮಿಬಿಯಾ ನಡುವೆ ಪ್ರಾರಂಭವಾಗುವುದರೊಂದಿಗೆ ಟಿ-೨೦ ವಿಶ್ವಕಪ್ ಪಂದ್ಯಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಸೂಪರ್ ಸಿಕ್ಸ್ ಪಂದ್ಯಗಳು ಅ.೨೨ರಂದು ಪ್ರಾರಂಭವಾಗಲಿದ್ದೂ, ಕಳೆದ ಪಂದ್ಯಾವಳಿಯಲ್ಲಿ ಟ್ರೋಫಿಯನ್ನು ಗೆದ್ದ ಆಸ್ಟ್ರೇಲಿಯಾ ಹಾಗೂ ರನ್ನರ್ ಅಪ್ ಆಗಿದ್ದ ನ್ಯೂಜಿಲ್ಯಾಂಡ್ ನಡುವೆ ಪಂದ್ಯ ನಡೆಯುತ್ತದೆ. ಭಾರತ ತಂಡವು ಸೂಪರ್ ಸಿಕ್ಸ್‌ನ ೨ನೇ ಗ್ರೂಪಿನಲ್ಲಿ ಇದೆ. ಇದೇ ಗುಂಪಿನಲ್ಲಿರುವ ಪಾಕಿಸ್ತಾನದ ಜತೆ ಅ.೨೩ರಂದು ಪಂದ್ಯ ಆಡುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
—————-

ಪ್ರಮುಖ ದಿನಗಳು
* ಅ.೧೬ರಂದು ಟೂರ್ನಿ ಶುರು
* ಅ.೨೨ರಂದು ಸೂಪರ್ ಸಿಕ್ಸ್ ಪ್ರಾರಂಭ
* ನ.೯ರಂದು ಮೊದಲ ಸೆಮಿ ಫೈನಲ್
* ನ.೧೦ರಂದು ಎರಡನೇ ಸೆಮಿ ಫೈನಲ್
* ನ.೧೩ರಂದು ಅಂತಿಮ ಪಂದ್ಯಾವಳಿ
———-
ಭಾರತ ತಂಡದ ಪಂದ್ಯಗಳು
ಅ.೨೩- ಪಾಕಿಸ್ತಾನ
ಅ.೨೭ -ಎ೨
ಅ.೩೦- ದಕ್ಷಿಣ ಆಫ್ರಿಕಾ
ನ.೨- ಬಾಂಗ್ಲಾದೇಶ
ನ.೬- ಬಿ೧
———
ಭಾರತದ ತಂಡ
ರೋಹಿತ್ ಶರ್ಮಾ(ನಾಯಕ), ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಶದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿಬಿಷ್ಣೋಯಿ, ದೀಪಕ್ ಚಹರ್.
—————
ಸೂಪರ್ ಸಿಕ್ಸ್ ವಿಭಾಗ
ಗ್ರೂಪ್-೧ : ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಆಫ್ಘಾನಿಸ್ತಾನ, ಇಂಗ್ಲೆಂಡ್, ಎ೧, ಬಿ೨
ಗ್ರೂಪ್-೨: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಎ೨, ಬಿ೧
———–
ಅರ್ಹತಾ ಸುತ್ತು ವಿಭಾಗ
ಗ್ರೂಪ್-ಎ: ಶ್ರೀಲಂಕಾ, ನಮಿಬಿಯಾ, ಯುಎಇ, ನೆದರ್ ಲ್ಯಾಂಡ್.
ಗ್ರೂಪ್-ಬಿ: ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬ್ಬಾವ್ವೆ, ಐರ್ಲೆಂಡ್


ವಿಶ್ವಕಪ್ ಗೆದ್ದ ತಂಡಗಳು
೨೦೦೭: ಭಾರತ
೨೦೦೯: ಪಾಕಿಸ್ತಾನ
೨೦೧೦: ಇಂಗ್ಲೆಂಡ್
೨೦೧೨: ವೆಸ್ಟ್ ಇಂಡೀಸ್
೨೦೧೪: ಶ್ರೀಲಂಕಾ
೨೦೧೬: ವೆಸ್ಟ್ ಇಂಡೀಸ್
೨೦೨೧: ಆಸ್ಟ್ರೇಲಿಯಾ

andolanait

Recent Posts

ರೈತರಿಗೆ ಕಿರುಕುಳ ನೀಡುವ ಖಾಸಗಿ ಫೈನಾನ್ಸಿಯರ್‌ಗಳ ವಿರುದ್ಧ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಮೈಕ್ರೋ ಫೈನಾನ್ಸ್‌ ಕಂಪನಿಗಳು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ…

7 mins ago

ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಡಿಸ್ಚಾರ್ಜ್‌

ರಾಯಚೂರು: ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ರಾಯಚೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ…

22 mins ago

ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ ಬಹಿರಂಗಪಡಿಸಲಿ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ ಬಹಿರಂಗಪಡಿಸಲು ಎಂದು ಶಾಸಕ ತನ್ವೀರ್‌ ಸೇಠ್‌ ಆಗ್ರಹಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ…

2 hours ago

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಅಕ್ರಮ ತಡೆಗೆ ಹದ್ದಿನ ಕಣ್ಣು

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಯಾವುದೇ ಅಕ್ರಮ ನಡೆಯದಂತೆ ಪರೀಕ್ಷಾ ಬೋರ್ಡ್‌ ಹದ್ದಿನ ಕಣ್ಣಿಟ್ಟಿದೆ. ನಾಳೆಯಿಂದ…

2 hours ago

ರಾಮನಗರ| ಜಿಮ್‌ ಟ್ರೇನರ್‌ಗೆ ಪ್ರೇಯಸಿಯಿಂದಲೇ ಚಾಕು ಇರಿತ

ರಾಮನಗರ: ಜಿಮ್‌ ಟ್ರೇನರ್‌ಗೆ ಪ್ರೇಯಸಿಯೇ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ರಾಮನಗರ ತಾಲ್ಲೂಕಿನಲ್ಲಿ ನಡೆದಿದೆ. ರಾಮನಗರದ ಬಿಡದಿಯಲ್ಲಿ ಈ…

2 hours ago

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಗೆ ಸುಪ್ರೀಂಕೋರ್ಟ್‌ ರಿಲೀಫ್‌

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸುಬ್ಬಾರೆಡ್ಡಿಗೆ ಸುಪ್ರೀಂಕೋರ್ಟ್‌ ಬಗ್‌ ರಿಲೀಫ್‌ ನೀಡಿದೆ. ಶಾಸಕ ಸ್ಥಾನದಿಂದ ಅವರನ್ನು…

2 hours ago