ಕ್ರೀಡೆ

ಟಿ-20 ಕ್ರಿಕೆಟ್ ವಿಶ್ವಕಪ್ ಸಮರ ಇಂದಿನಿಂದ

ಈ ಬಾರಿ ವಿಶ್ವಕಪ್‌ನಲ್ಲಿ ೧೬ ತಂಡಗಳು ಭಾಗಿ; ನ.೧೩ರಂದು ಫೈನಲ್ ಪಂದ್ಯಾವಳಿ

ಮೈಸೂರು: ಭರಪೂರ ಮನೋರಂಜನೆಯ ಆಗರ ಎಂದೇ ಖ್ಯಾತಿ ಗಳಿಸಿರುವ ಟಿ-೨೦ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಇಂದಿನಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ.
ನ.೧೩ರಂದು ನಡೆಯಲಿರುವ ಫೈನಲ್ ಪಂದ್ಯವನ್ನು ಸೇರಿಸಿಕೊಂಡು ಒಟ್ಟು ೪೫ ಪಂದ್ಯಗಳು ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲಿದೆ.
ಈ ಬಾರಿ ವಿಶ್ವಕಪ್‌ನಲ್ಲಿ ೧೬ ತಂಡಗಳು ಭಾಗವಹಿಸಲಿದ್ದು, ಅದರಲ್ಲಿ ೮ ತಂಡಗಳನ್ನು ತಲಾ ೪ ತಂಡಗಳಂತೆ ಎರಡು ಗ್ರೂಪ್‌ಗಳಾಗಿ ಮಾಡಲಾಗಿದೆ. ಈ ಎರಡು ಗ್ರೂಪ್‌ನಲ್ಲಿ ಮೊದಲ ಎರಡು ಸ್ಥಾನವನ್ನು ಗಳಿಸುವ ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಸಿಕ್ಸ್ ವಿಭಾಗದಲ್ಲೂ ಎರಡು ಗುಂಪುಗಳನ್ನು ಮಾಡಲಾ ಗಿದ್ದು, ಇಲ್ಲೂ ತಮ್ಮ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿವೆ.
ಅರ್ಹತಾ ಸುತ್ತಿನ ಮೊದಲ ಪಂದ್ಯವು ಅ.೧೬ರಂದು ಶ್ರೀಲಂಕಾ ಹಾಗೂ ನಮಿಬಿಯಾ ನಡುವೆ ಪ್ರಾರಂಭವಾಗುವುದರೊಂದಿಗೆ ಟಿ-೨೦ ವಿಶ್ವಕಪ್ ಪಂದ್ಯಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಸೂಪರ್ ಸಿಕ್ಸ್ ಪಂದ್ಯಗಳು ಅ.೨೨ರಂದು ಪ್ರಾರಂಭವಾಗಲಿದ್ದೂ, ಕಳೆದ ಪಂದ್ಯಾವಳಿಯಲ್ಲಿ ಟ್ರೋಫಿಯನ್ನು ಗೆದ್ದ ಆಸ್ಟ್ರೇಲಿಯಾ ಹಾಗೂ ರನ್ನರ್ ಅಪ್ ಆಗಿದ್ದ ನ್ಯೂಜಿಲ್ಯಾಂಡ್ ನಡುವೆ ಪಂದ್ಯ ನಡೆಯುತ್ತದೆ. ಭಾರತ ತಂಡವು ಸೂಪರ್ ಸಿಕ್ಸ್‌ನ ೨ನೇ ಗ್ರೂಪಿನಲ್ಲಿ ಇದೆ. ಇದೇ ಗುಂಪಿನಲ್ಲಿರುವ ಪಾಕಿಸ್ತಾನದ ಜತೆ ಅ.೨೩ರಂದು ಪಂದ್ಯ ಆಡುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
—————-

ಪ್ರಮುಖ ದಿನಗಳು
* ಅ.೧೬ರಂದು ಟೂರ್ನಿ ಶುರು
* ಅ.೨೨ರಂದು ಸೂಪರ್ ಸಿಕ್ಸ್ ಪ್ರಾರಂಭ
* ನ.೯ರಂದು ಮೊದಲ ಸೆಮಿ ಫೈನಲ್
* ನ.೧೦ರಂದು ಎರಡನೇ ಸೆಮಿ ಫೈನಲ್
* ನ.೧೩ರಂದು ಅಂತಿಮ ಪಂದ್ಯಾವಳಿ
———-
ಭಾರತ ತಂಡದ ಪಂದ್ಯಗಳು
ಅ.೨೩- ಪಾಕಿಸ್ತಾನ
ಅ.೨೭ -ಎ೨
ಅ.೩೦- ದಕ್ಷಿಣ ಆಫ್ರಿಕಾ
ನ.೨- ಬಾಂಗ್ಲಾದೇಶ
ನ.೬- ಬಿ೧
———
ಭಾರತದ ತಂಡ
ರೋಹಿತ್ ಶರ್ಮಾ(ನಾಯಕ), ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಶದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿಬಿಷ್ಣೋಯಿ, ದೀಪಕ್ ಚಹರ್.
—————
ಸೂಪರ್ ಸಿಕ್ಸ್ ವಿಭಾಗ
ಗ್ರೂಪ್-೧ : ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಆಫ್ಘಾನಿಸ್ತಾನ, ಇಂಗ್ಲೆಂಡ್, ಎ೧, ಬಿ೨
ಗ್ರೂಪ್-೨: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಎ೨, ಬಿ೧
———–
ಅರ್ಹತಾ ಸುತ್ತು ವಿಭಾಗ
ಗ್ರೂಪ್-ಎ: ಶ್ರೀಲಂಕಾ, ನಮಿಬಿಯಾ, ಯುಎಇ, ನೆದರ್ ಲ್ಯಾಂಡ್.
ಗ್ರೂಪ್-ಬಿ: ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬ್ಬಾವ್ವೆ, ಐರ್ಲೆಂಡ್


ವಿಶ್ವಕಪ್ ಗೆದ್ದ ತಂಡಗಳು
೨೦೦೭: ಭಾರತ
೨೦೦೯: ಪಾಕಿಸ್ತಾನ
೨೦೧೦: ಇಂಗ್ಲೆಂಡ್
೨೦೧೨: ವೆಸ್ಟ್ ಇಂಡೀಸ್
೨೦೧೪: ಶ್ರೀಲಂಕಾ
೨೦೧೬: ವೆಸ್ಟ್ ಇಂಡೀಸ್
೨೦೨೧: ಆಸ್ಟ್ರೇಲಿಯಾ

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

4 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago