ಕ್ರೀಡೆ

T20 : ದಕ್ಷಿಣ ಆಫ್ರಿಕಾ ಮುಂದೆ ಭಾರತ 178ರನ್​ಗೆ ಆಲ್​ ಔಟ್

ಇಂದೋರ್​ : ದಕ್ಷಿಣ ಆಫ್ರಿಕಾ ನೀಡಿದ್ದ ಬೃಹತ್​ ಮೊತ್ತವನ್ನು ಭೇದಿಸಲಾಗದೇ ಭಾರತ ಸೋಲು ಕಂಡಿದೆ. ಬ್ಯಾಟಿಂಗ್​ ವೈಫಲ್ಯದಿಂದ ಭಾರತ 178ರನ್​ಗೆ ಆಲ್​ ಔಟ್​ ಆಗಿದೆ. ಈ ಮೂಲಕ ಭಾರತದ ಎದುರು ದಕ್ಷಿಣ ಆಫ್ರಿಕಾ 49ರನ್​ಗಳ ಗೆಲುವು ಸಾಧಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಮಾಡಿದ್ದ ಹರಿಣಗಳು ರಿಲೀ ರೊಸೊವ್ ಅವರ ಶತಕ ಹಾಗೂ ಕ್ವಿಂಟನ್ ಡಿ ಕಾಕ್ ಅರ್ಧ ಶತಕದ ನೆರವಿನಿಂದ ಭಾರತಕ್ಕೆ 228 ರನ್​ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ರಬಾಡ ಮೊದಲ ಓವರ್​ನಲ್ಲೇ ರೋಹಿತ್​ ಶರ್ಮಾ(0) ವಿಕೆಟ್​ ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದರು.

ನಂತರ ಬಂದ ಶ್ರೇಯಸ್​ ಅಯ್ಯರ್​(1) ಕೂಡಾ ಬಂದ ಕೂಡಲೇ ಎಲ್​ಬಿಡ್ಲ್ಯೂಗೆ ವಿಕೆಟ್​ ಒಪ್ಪಿಸಿದರು. ಆರಂಭಿಕರಾಗಿ ಬಂದಿದ್ದ ರಿಷಬ್​ ಪಂತ್​(27) ಬೃಹತ್​ ಮೊತ್ತ ಚೇಸಿಂಗ್​ ಮಾಡಲಿರುವ ಕಾರಣ ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್​ ಒಪ್ಪಿಸಿದರು. ಅವರೊಂದಿಗೆ ದಿನೇಶ್ ಕಾರ್ತಿಕ್​ ಕೂಡ ಕ್ವಿಕ್​ ಇನ್ನಿಂಗ್ಸ್​ ಕಟ್ಟಿದರು 21 ಬಾಲ್​ಗೆ 4 ಬೌಂಡರಿ ಮತ್ತು ಸಿಕ್ಸ್​ ಗಳಿಸಿ 46ರನ್​ಗೆ ಔಟ್​ ಆದರು.

ಸೂರ್ಯಕುಮಾರ್​ ಯಾದವ್​(8) ಇಂದು ವಿಫಲತೆ ಕಂಡರು. ಅವರೊಂದಿಗೆ ಅಕ್ಷರ್​ ಪಟೇಲ್​(9), ಹರ್ಷಲ್​ ಪಟೇಲ್​(17), ಅಶ್ವನ್​(2) ಸಹ ಕ್ರಿಸ್​ನಲ್ಲಿ ನಿಲ್ಲಲೇ ಇಲ್ಲ. ದಿಪಕ್​ ಚಹಾರ್​(31) ಕೊನೆಯ ಗಳಿಗೆಯಲ್ಲಿ ರನ್​ ಕದಿಯುವ ಪ್ರಯತ್ನ ಮಾಡಿದರು. ಸಿರಾಜ್​ 5 ರನ್​ ಹೊಡೆದು ಔಟ್​ ಆದರೆ ಉಮೇಶ್​ ಯಾದವ್​ (20) ಅಜೇಯರಾಗಿ ಉಳಿದರು.

ದಕ್ಷಿಣ ಆಫ್ರಕಾ ಪರ ಡ್ವೈನ್ ಪ್ರಿಟೋರಿಯಸ್ ಮೂರು ವಿಕೆಟ್​ ಪಡೆದರು. ವೇಯ್ನ್ ಪಾರ್ನೆಲ್, ಲುಂಗಿ ಎನ್‌ಗಿಡಿ ಮತ್ತು ಕೇಶವ್ ಮಹಾರಾಜ್ ತಲಾ ಎರಡು ಹಾಗೇ ಕಗಿಸೊ ರಬಾಡ ಒಂದು ವಿಕೆಟ್​ ಪಡೆದರು.

andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

15 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

5 hours ago