ಕ್ರೀಡೆ

ಪಠಾಣ್‌ ಚಿತ್ರದ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ ಶಾರುಕ್‌ ಖಾನ್‌–ವಿರಾಟ್‌ ಕೊಹ್ಲಿ

ಕೋಲ್ಕತ್ತ : ಬಾಲಿವುಡ್‌ ಬ್ಲಾಕ್‌ ಬಾಸ್ಟರ್‌ ಚಿತ್ರ ‘ಪಠಾಣ್‌’ ಹಾಡಿಗೆ ಶಾರುಕ್ ಖಾನ್‌ ಹಾಗೂ ವಿರಾಟ್‌ ಕೊಹ್ಲಿ ಕ್ರಿಕೆಟ್‌ ಮೈದಾನದಲ್ಲಿ ಹೆಜ್ಜೆ ಹಾಕಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಬ್ಬರು ದಿಗ್ಗಜರು ಒಟ್ಟಿಗೆ ಹೆಜ್ಜೆ ಹಾಕಿರುವುದನ್ನು ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ಧಾರೆ.

ಗುರುವಾರ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ಆರ್‌ಸಿಬಿ ಮತ್ತು ಶಾರುಕ್‌ ಒಡೆತನದ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ನಡುವೆ ಪಂದ್ಯ ನಡೆದಿತ್ತು. ಕೆಕೆಆರ್‌ ತಂಡ 81 ರನ್‌ಗಳಲ್ಲಿ ಆರ್‌ಸಿಬಿಯನ್ನು ಮಣಿಸಿತ್ತು.

ತಂಡ ಗೆದ್ದ ಖುಷಿಯಲ್ಲಿ ಶಾರುಕ್‌ ತೇಲಾಡಿದ್ದು. ತಮ್ಮ ಬ್ಲಾಕ್‌ಬಾಸ್ಟರ್‌ ‘ಪಠಾಣ್‌‘ ಚಿತ್ರದ ಜನಪ್ರಿಯ ಹಾಡು ‘ಜೂಮ್ ಜೋ ಪಠಾಣ್‌‘ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವೇಳೆ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿಗೂ ನೃತ್ಯ ಮಾಡುವಂತೆ ಹೇಳಿದ್ದಾರೆ. ಶಾರುಕ್‌ ಹೇಳಿಕೊಟ್ಟಂತೆ ಹಾಡಿನ ‘ಹುಕ್‌ ಸ್ಟೆಪ್‌‘ ಹಾಕಲು ವಿರಾಟ್‌ ಪ್ರಯತ್ನಿಸಿದ್ದಾರೆ. ವಿರಾಟ್‌ನ ಕೆನ್ನೆ ಹಿಡಿದು ಶಾರುಕ್‌ ಮಾತನಾಡಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ಇನ್ನಷ್ಟು ಖುಷಿಪಟ್ಟಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಕೆಕೆಆರ್‌ ಉತ್ತಮ ಪ್ರರ್ದಶನ ನೀಡಿದ್ದು, ಶಾರ್ದುಲ್‌ ಠಾಕೂರ್‌ 29 ಎಸೆತಗಳಿಗೆ 68 ರನ್‌ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2019ರ ನಂತರ ಇದೇ ಮೊದಲ ಬಾರಿಗೆ ಕೆಕೆಆರ್‌ ತನ್ನ ತವರು ನೆಲದಲ್ಲಿ ಆಡಿ ಪಂದ್ಯ ಗೆದ್ದಿರುವುದಕ್ಕೆ ಶಾರುಕ್‌ ಖಾನ್‌ ತಂಡದ ನಾಯಕ ನಿತೀಶ್‌ ರಾಣಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಪಂದ್ಯದ ವೇಳೆ ಶಾರುಕ್‌ ಖಾನ್‌ ಪುತ್ರಿ ಸುಹಾನ ಖಾನ್‌, ಬಾಲಿವುಡ್‌ ನಟಿ ಹಾಗೂ ಕೆಕೆಆರ್‌ನ ಸಹ ಸಂಸ್ಥಾಪಕಿ ಜೂಹಿ ಚಾವ್ಲಾ ಉಪಸ್ಥಿತರಿದ್ದರು.

andolanait

Recent Posts

ರೈತರ ನೆರವಿಗೆ ಕ್ರೆಡಲ್‌ನಿಂದ `ಪಿಎಂ ಕುಸುಮ್‌ ಬಿ’ ಸಹಾಯವಾಣಿ ಕೇಂದ್ರ ಸ್ಥಾಪನೆ

ಬೆಂಗಳೂರು : ಮಾಹಿತಿ ಕೊರತೆ ಅಥವಾ ತಾಂತ್ರಿಕ ತೊಂದರೆಗಳಿಂದಾಗಿ ಅರ್ಹ ರೈತರು ಕುಸುಮ್-ಬಿ ಯೋಜನೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ನವೀಕರಿಸಬಹುದಾದ…

5 mins ago

ಮೈಸೂರು | ಮನುಸ್ಮೃತಿ ಸುಟ್ಟು ಸಮಾನತೆ ಜ್ಯೋತಿ ಬೆಳಗಿಸಿದ ದಸಂಸ

ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮನುಸ್ಮೃತಿಯನ್ನು ಸುಡುವ ಮೂಲಕ…

13 mins ago

ಮರ್ಯಾದೆ ಹತ್ಯೆಗೆ ಮನುಸ್ಮೃತಿ ನಿಯಮಗಳೇ ಕಾರಣ : ಚಿಂತಕ ಶಿವಸುಂದರ್‌ ಪ್ರತಿಪಾದನೆ

ಮೈಸೂರು : ಮೇಲ್ವರ್ಗದ ಯುವತಿಯೊಬ್ಬಳು ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಸ್ವಂತ ಮಗಳನ್ನೆ ಹೆತ್ತ ಅಪ್ಪ-ಅಮ್ಮ-ಅಣ್ಣಂದಿರು ಕೊಲೆ ಮಾಡುವ…

31 mins ago

ಚಾ.ನಗರ | ಮನುಸ್ಮೃತಿ ಪ್ರತಿ ಹರಿದು ಪ್ರತಿಭಟನೆ

ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ಹಾಕಿದ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಮುಖಂಡರು…

42 mins ago

ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿ | ರಾಹುಲ್‌ ಗಾಂಧಿ ಹಾಗೂ ಅಶ್ವಿನ್‌ ವೈಷ್ಣವ್‌ ನಡುವೆ ಟ್ವಿಟ್‌ ವಾರ್…

ಹೊಸದಿಲ್ಲಿ : ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಡುವೆ ಕರ್ನಾಟಕದಲ್ಲಿ ಉದ್ಯೋಗ…

2 hours ago

ಚಿತ್ರದುರ್ಗ ಬಸ್‌ ದುರಂತ | ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ಸಿಗೂ ಬೆಂಕಿ : ಕೂದಲೆಳೆ ಅಂತರದಲ್ಲಿ ಪವಾಡಸದೃಶ ಪಾರು!

ಬೆಂಗಳೂರು : ಚಿತ್ರದುರ್ಗದ ಹಿರಿಯೂರು ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದ ಮಾರ್ಗದಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ…

2 hours ago