ಕ್ರೀಡೆ

ಒಂದೇ ಎಸೆತದಲ್ಲಿ ಎರಡು ಬಾರಿ ರಿವೀವ್; ಅಶ್ವಿನ್ ವಿಚಿತ್ರ ನಿರ್ಧಾರ

ಕೊಯಂಬತ್ತೂರು: ಭಾರತ ತಂಡದ ಸ್ಪಿನ್ ಬೌಲರ್ ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಆಡುತ್ತಿದ್ದಾರೆ. ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕರಾಗಿರುವ ಅಶ್ವಿನ್ ಇದೀಗ ವಿಚಿತ್ರ ಕಾರಣದಿಂದ ಸುದ್ದಿಯಾಗಿದ್ದಾರೆ.

ತಿರುಚ್ಚಿ ವಿರುದ್ಧದ ಪಂದ್ಯದಲ್ಲಿ ಒಂದೇ ಎಸೆತದಲ್ಲಿ ಎರಡು ಬಾರಿ ರಿವೀವ್ ಪಡೆಯಲಾಗಿದೆ. ಒಮ್ಮೆ ರಿವೀವ್ ಪಡೆದು ಮೂರನೇ ಅಂಪೈರ್ ನಿರ್ಧಾರ ಪ್ರಕಟಿಸಿದ ಬಳಿಕ ಆ ತೀರ್ಪಿನ ವಿರುದ್ಧವೇ ಮತ್ತೊಮ್ಮೆ ರಿವೀವ್ ಮಾಡಲಾಗಿದೆ.

ತಿರುಚ್ಚಿ ಆಟಗಾರ ರಾಜಕುಮಾರ್ ಅವರಿಗೆ ಅಶ್ವಿನ್ ಎಸೆದ ಚೆಂಡು ವಿಕೆಟ್ ಕೀಪರ್ ಗ್ಲೌಸ್ ಸೇರಿತು. ಮೈದಾನದ ಅಂಪೈರ್ ಔಟ್ ನೀಡಿದರು. ಆದರೆ ಬ್ಯಾಟರ್ ರಾಜಕುಮಾರ್ ಡಿಆರ್ ಎಸ್ ಮನವಿ ಮಾಡಿದರು. ಟಿವಿ ಅಂಪೈರ್ ಪರಿಶೀಲನೆ ಮಾಡುವಾಗ ಬ್ಯಾಟ್ ಚೆಂಡಿಗೆ ಬಡಿಯದೆ, ನೆಲಕ್ಕೆ ತಾಗಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಅವರು ಔಟ್ ತೀರ್ಮಾನವನ್ನು ಬದಲಿಸಿ ನಾಟೌಟ್ ಎಂದರು.

ಮೂರನೇ ಅಂಪೈರ್ ನಾಟೌಟ್ ಎಂದ ಕೂಡಲೇ ಆಕ್ರೋಶಗೊಂಡ ಅಶ್ವಿನ್ ಮತ್ತೆ ಮತ್ತೆ ಡಿಆರ್ ಎಸ್ ಕೇಳಿದರು. ಟಿವಿ ಅಂಪೈರ್ ಮತ್ತೆ ಪರಿಶೀಲನೆ ನಡೆಸಿ ನಾಟೌಟ್ ತೀರ್ಪು ನೀಡಿದರು.

ಪಂದ್ಯದ ಬಳಿಕ ಇದರ ಬಗ್ಗೆ ಮಾತನಾಡಿದ ಅಶ್ವಿನ್, “ಟೂರ್ನಮೆಂಟ್‌ ನಲ್ಲಿ ಡಿಆರ್‌ ಎಸ್ ಹೊಸದು. ಚೆಂಡು ಬ್ಯಾಟ್‌ ನಿಂದ ಹಾದುಹೋಗುವ ಮೊದಲು ಸ್ಪೈಕ್ ಇತ್ತು. ನನಗೆ ಸಂತೋಷವಾಗಲಿಲ್ಲ, ಅವರು ಬೇರೆ ಕೋನದಲ್ಲಿ ನೋಡುತ್ತಾರೆ ಎಂದು ನಾನು ಭಾವಿಸಿದೆ” ಎಂದು ಹೇಳಿದರು.

ಇದರ ಹೊರತಾಗಿಯೂ ಅಶ್ವಿನ್ ನಾಯಕತ್ವದ ದಿಂಡಿಗಲ್ ತಂಡವು ಆರು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಿರುಚ್ಚಿ 19.1 ಓವರ್ ನಲ್ಲಿ 120 ರನ್ ಗೆ ಆಲೌಟಾದರೆ, ದಿಂಡಿಗಲ್ ತಂಡವು 14.5 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು.

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

47 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

57 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago