ದೋಹಾ: ಇದು ಫುಟ್ಬಾಲ್ ಪಂದ್ಯದ ಮಹತ್ವದ ವಸ್ತು
ಪೋರ್ಚುಗಲ್ ನಬ್ರೂನೊ ಫರ್ನಾಂಡಿಸ್ ಹೊಡೆದ ಎರಡು ಗೋಲುಗಳು ತಂಡವನ್ನು ನಾಕೌಟ್ ಹಂತಕ್ಕೆ ತಲುಪಿತು.
‘ಎಚ್’ ಗುಂಪಿನ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೊರ್ಚುಗಲ್ 2–0 ಗೋಲುಗಳ ಅಂತರದಿಂದ ಉರುಗ್ವೆ ತಂಡವನ್ನು ಪರಾಭವಗೊಳಿಸಿತು.
ಲುಸೈಲ್ ಕ್ರೀಡಾಂಗಣದಲ್ಲಿ ಸೋಮವಾರ ತಡರಾತ್ರಿ ನಡೆದಪಂದ್ಯದ ಮೊದಲಾರ್ಧದಲ್ಲಿ ಪೋರ್ಚುಗಲ್ ಹಿಡಿತ ಸಾಧಿಸಿತು. ಅಧಿಕ ವೇಳೆ ಚೆಂಡನ್ನು ತನ್ನ ಪರಿಧಿಯಲ್ಲೇ ಉಳಿಸಿಕೊಂಡ ತಂಡ ಗೋಲು ಬಾರಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತು. ಆದರೆ ಉರುಗ್ವೆ ಗೋಲ್ಕೀಪರ್ ಸೆರ್ಗಿಯೊ ರೊಚೆಟ್ ಅವರ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.
ಮೊದಲಾರ್ಧ ಮುಗಿದ ಎಂಟು ನಿಮಿಷಗಳಲ್ಲಿ ಫರ್ನಾಂಡಿಸ್ ಜಾದೂ ಮಾಡಿದರು. ಎಡಭಾಗದಿಂದ ಚೆಂಡನ್ನು ರೊನಾಲ್ಡೊ ಅವರತ್ತ
ನೂಕಿದರು. ಜಿಗಿದ ರೊನಾಲ್ಡೊ ಚೆಂಡನ್ನು ಹೆಡ್ ಮಾಡಲು ಯತ್ನಿಸಿದರು. ಆದರೆ ಅವರಿಗೆ ತಾಗದ ಚೆಂಡು ಗೋಲ್ಪೋಸ್ಟ್ನೊಳಗೆ ಮಿಂಚಿನ ವೇಗದಲ್ಲಿ ಸೇರಿತು. ರೊನಾಲ್ಡೊ ಗೋಲು ಗಳಿಸಿದ ಸಂಭ್ರಮ ಆಚರಿಸಿದರು. ಆದರೆ ವಿಡಿಯೋ ಮರುಪರಿಶೀಲನೆಯ ಬಳಿಕ ಫಿಫಾ ಈ ಗೋಲನ್ನು ಫರ್ನಾಂಡಿಸ್ ಖಾತೆಗೆ ಸೇರಿಸಲಾಗಿದೆ.
ಈ ಗೋಲನ್ನು ರೊನಾಲ್ಡೊ ಗಳಿಸಿದ್ದರೆ ಪದವಿಯಲ್ಲಿ ಅವರ ಒಂಬತ್ತನೇ ಗೋ. ಆ ಮೂಲಕ ಅವರು ಪೋರ್ಚುಗಲ್ ತಂಡದ ದಿಗ್ಗಜ ಯುಸೆಬಿಯೊ ಅವರನ್ನು ಸರಿಗಟ್ಟುತ್ತಿದ್ದರು.
ಫರ್ನಾಂಡಿಸ್ ಗೋಲಿನ ಬಳಿಕ ಉರುಗ್ವೆ ವೇಗದ ಆಟಕ್ಕೆ ಮೊರೆಹೋಯಿತು. ತಂಡದ ಫಾರ್ವರ್ಡ್ ಆಟಗಾರ ಮ್ಯಾಕ್ಸಿ ಗೋಮೆಜ್ 20 ಯಾರ್ಡ್ನಿಂದ ಪಾಸ್ ಮಾಡಿದ ಚೆಂಡನ್ನು ಲೂಯಿಸ್ ಸ್ವಾರೆಜ್ ಗೋಲ್ಪೋಸ್ಟ್ನತ್ತ ತಳ್ಳಿದರು. ಆದರೆ ಚೆಂಡು ನೆಟ್ ಸಮೀಪದಿಂದ ಹಾಯ್ದುಹೋದಾಗ ಸ್ವಾರೆಜ್ ನಿರಾಸೆಗೊಳಗಾದರು.
ಗಾಯದ ಸಮಯದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಫರ್ನಾಂಡಿಸ್ ಅತಿ ಸುಲಭವಾಗಿ ಗೋಲಾಗಿ ಪರಿವರ್ತಿಸಿದರು. ಚೆಂಡನ್ನು ಗೋಲ್ಪೋಸ್ಟ್ನ ಬಲಭಾಗಕ್ಕೆ ಒಡ್ಡ ಅವರು ಗೋಲ್ಕೀಪರ್ ಸೆರ್ಗಿಯೊ ಅವರನ್ನು ವಂಚಿಸಿದರು.
ಇದೇ ಅವಧಿಯಲ್ಲೇ ಮತ್ತೊಂದು ಗೋಲು ಗಳಿಸಿ ಹ್ಯಾಟ್ರಿಕ್ ಸಾಧಿಸುವ ಫರ್ನಾಂಡಿಸ್ ಅವರಿಗಿತ್ತು. ಆದರೆ ಯಶಸ್ಸು ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ ಪೋರ್ಚುಗಲ್, 16ರ ಘಟ್ಟ ತಲುಪಿರುವ ಫ್ರಾನ್ಸ್ ಮತ್ತು ಬ್ರೆಜಿಲ್ ತಂಡಗಳ ಸಾಲಿಗೆ ಸೇರಿತು.
ಗುಂಪು ಹಂತದಲ್ಲಿ ಪೋರ್ಚುಗಲ್ ಸತತ ಎರಡು ಪಂದ್ಯಗಳನ್ನು ಗೆದ್ದಿರುವುದು ಇದು ಎರಡನೇ ಬಾರಿ.
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಗಾಳಿ ಮಳೆಗೆ ಜಗಲಿ ಕಟ್ಟೆಯ ಬುಗರಿ ಮರ ಬಿದ್ದು ಮನೆ ಜಖಂಗೊಂಡಿರುವ…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಗುಡಿ ಬೀಟ್…
ನವದೆಹಲಿ: ದೇಶದಲ್ಲಿ ಕಚ್ಚಾ ತೈಲ ಸಾಕಷ್ಟು ಲಭ್ಯವಿದೆ. ಭಾರತವು ಕಚ್ಚಾ ತೈಲಕ್ಕಾಗಿ ಸಾಕಷ್ಟು ಸಂಗ್ರಹಣಾ ಸೌಲಭ್ಯಗಳು ಮತ್ತು ವಿಶ್ವಾಸಾರ್ಹ ಪೂರೈಕೆ…
ಮೈಸೂರು: ರಸ್ತೆ ಅಪಘಾತದಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ…
ಬೆಂಗಳೂರು: ಮೈಸೂರು ನಗರ ಸೇರಿದಂತೆ ರಾಜ್ಯದಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಎಂಎಲ್ಸಿ ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಈ…
ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಮಾಡಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಿಮರೋಡಿ ಅವರನ್ನು ದಕ್ಷಿಣ…