ಕ್ರೀಡೆ

ಅಂತಿಮ ಟೆಸ್ಟ್‌ನಲ್ಲಿ ಜಯ ಗಳಿಸಿದ ನ್ಯೂಜಿಲೆಂಡ್:‌ ಸರಣಿ ಸಮಬಲ

ಬಾಂಗ್ಲಾದೇಶ (ಢಾಕಾ) : ಗ್ಲೆನ್‌ ಪಿಲಿಪ್‌ ಅವರ ಆಲ್‌ರೌಂಡರ್‌ ಆಟದ ಪರಿಣಾಮ ನ್ಯೂಜಿಲೆಂಡ್‌ ತಂಡ, ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾದೇಶ ವಿರುದ್ಧ ೪ ವಿಕೆಟ್‌ಗಳ ಜಯ ದಾಖಲಿಸಿದೆ.

ಇಲ್ಲಿನ ಶೇರ್‌ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಗೆಲ್ಲುವ ಮೂಲಕ ಎರಡು ಟೆಸ್ಟ್‌ ಪಂದ್ಯಗಳ ಸರಣಿಯನ್ನು ೧-೧ ಸಮಬಲದಿಂದ ಗೆದ್ದುಕೊಂಡಿದೆ.

ಟಾಸ್‌ ಗೆದ್ದು ಮೊದಲ ಇನ್ನಿಂಗ್ಸ್‌ ಆರಂಭಿಸಿದ ಬಾಂಗ್ಲಾ ಪರವಾಗಿ ಮುಷ್ಫಿಕರ್‌ ರಹೀಮ್‌ ೩೫, ಹೊಸೇನ್‌ ೩೧, ಮೆಹದಿ ಹಸನ್‌ ೨೦ ರನ್‌ ಗಳಿಸಿದರು. ಬಾಂಗ್ಲಾ ಮೊದಲ ಇನ್ನಿಂಗ್ಸ್‌ ಅಂತ್ಯಕ್ಕೆ ೬೬.೨ ಓವರ್‌ಗಳಲ್ಲಿ ೧೦ ವಿಕೆಟ್‌ ನಷ್ಟಕ್ಕೆ ೧೭೨ ರನ್‌ ಕಲೆಹಾಕಿದರು. ನ್ಯೂಜಿಲೆಂಡ್‌ ಪರ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಗ್ಲೆನ್‌ ಪಿಲಿಪ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ ತಲಾ ೩ ವಿಕೆಟ್‌ ಪಡೆದರು.

೧೭೨ ರನ್‌ ಬೆನ್ನತ್ತಿದ ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ ಎದುರಾಯಿತು. ತಂಡ ೪೬ ರನ್‌ ಗಳಿಸುವಷ್ಟರಲ್ಲೇ ಪ್ರಮುಖ ೫ ವಿಕೆಟ್‌ ಕಳೆದುಕೊಂಡಿತು. ಇತ್ತ ಏಕಾಂಗಿ ಹೋರಾಟ ನಡೆಸಿದ ಗ್ಲೆನ್‌ ಪಿಲಿಪ್‌ ೭೨ ಎಸೆತಗಳಲ್ಲಿ ೯ ಬೌಂರಿ ಮತ್ತು ೪ ಸಿಕ್ಸರ್‌ ಮೂಲಕ ೮೭ ರನ್‌ ಕಲೆಹಾಕಿದರು. ಅಂತಿಮವಾಗಿ ಕೀವಿಸ್‌ ಮೊದಲ ಇನ್ನಿಂಗ್ಸ್‌ನಲ್ಲಿ ೩೭.೧ ಓವರ್‌ಗಳಲ್ಲಿ ೧೦ ವಿಕೆಟ್‌ ಕಳೆದುಕೊಂಡು ೧೮೦ ರನ್‌ ದಾಖಲಿಸಿತು. ತನ್ನ ಮೊದಲ ಇನ್ನಿಂಗ್ಸ್‌ ಅಂತ್ಯಕ್ಕೆ ೮ ರನ್‌ ಮುನ್ನಡೆ ಕಾಯ್ದುಕೊಂಡು ಎದುರಾಳಿಯನ್ನು ಆಹ್ವಾನಿಸಿತು.

ಬಾಂಗ್ಲಾ ಪರ ಅಮೋಘ ದಾಳಿ ನಡೆಸಿದ ಮೆಹದಿ ಹಸನ್‌ ಮತ್ತು ತೈಜುಲ್‌ ಇಸ್ಲಾಮ್‌ ತಲಾ ೩ ವಿಕೆಟ್‌ ಪಡೆದರು. ಶೋರಿಫುಲ್‌ ಇಸ್ಲಾಮ್‌ ಮತ್ತು ನಯೀಮ್‌ ತಲಾ ೨ ವಿಕೆಟ್‌ ಪಡೆದು ಮಿಂಚಿದರು.

ಇದರ ಬೆನ್ನಲ್ಲೇ ೮ ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಬಾಂಗ್ಲಾ ಕೇವಲ ೧೪೪ಕ್ಕೆ ಆಲ್‌ಔಟ್‌ ಆಯಿತು. ಬಾಂಗ್ಲಾ ಪರ ಝಕಿರ್‌ ಹಸನ್‌ ೫೯, ನಾಯಕ ಸಾಂಟೋ ೧೫ ಮತ್ತು ಬೌಲರ್‌ ತೈಜುಲ್‌ ಇಸ್ಲಾಮ್‌ ೧೪ ರನ್‌ ಗಳಿಸಿದ್ದೇ ಹೆಚ್ಚು.

ಕರಾರುವಕ್ಕಾಗ ದಾಳಿ ಮಾಡಿದ ಅಜಜ್‌ ಪಟೇಲ್‌ ೬ ವಿಕೆಟ್‌ಗಳ ಗೊಂಚಲು ಪಡೆದರು. ಸ್ಯಾಂಟ್ನರ್‌ ೩ ವಿಕೆಟ್‌ ಪಡೆದರೇ ಸೌಥಿ ೧ ವಿಕೆಟ್‌ ಪಡೆದರು.

ಸಾಧಾರಣ ಗುರಿ ಬೆನ್ನತ್ತಿದ ಕೀವಿಸ್‌ ಪಡೆ ೬ ವಿಕೆಟ್‌ ಕಳೆದುಕೊಂಡು ೧೩೯ ರನ್‌ ಗಳಿಸಿ ೪ ವಿಕೆಟ್‌ಗಳ ಜಯ ದಾಖಲಿಸಿತು. ಕೀವಿಸ್‌ ಪರ ಗ್ಲೆನ್‌ ಪಿಲಿಪ್‌ ೪೦, ಸ್ಯಾಂಟ್ನರ್‌ ೩೫, ಲಾಥಮ್‌ ೨೬ ರನ್‌ ಬಾರಿಸಿ ತಂಡವನ್ನು ಗೆಲಿವಿನತ್ತ ಕೊಂಡ್ಯೋಯ್ದರು. ಆ ಮೂಲಕ ಎರಡು ಟೆಸ್ಟ್‌ ಸರಣಿಯನ್ನು ಇತ್ತಂಡಗಳು ಸಮಬಲ ಕಾಯ್ದುಕೊಂಡವು.

ಬಾಂಗ್ಲಾ ಪರ ಮೆಹದಿ ಹಸನ್‌ ೩, ತೈಜುಲ್‌ ಇಸ್ಲಾಮ್‌ ೨ ಮತ್ತು ಸೋರಿಫುಲ್‌ ಇಸ್ಲಾಮ್‌ ೧ ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ : ಗ್ಲೆನ್‌ ಪಿಲಿಪ್‌
ಸರಣಿ ಶ್ರೇಷ್ಠ : ತೈಜುಲ್‌ ಇಸ್ಲಾಮ್‌

andolanait

Recent Posts

ನೇಪಾಳದಲ್ಲಿ ಭೀಕರ ಪ್ರವಾಹ ; ಭಾರತೀಯರ ನೆರವಿಗೆ ಸಹಾಯವಾಣಿ ಆರಂಭ

ಕಠ್ಮಂಡು : ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.…

1 hour ago

ಸಂಪುಟದಲ್ಲಿ ಚರ್ಚಿಸಿ ಬರ ಘೋಷಣೆ ; ಡಿಸಿಎಂ ಪರಮೇಶ್ವರ್‌

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ…

2 hours ago

ಸ್ವಚ್ಛತಾ ಅಭಿಯಾನ | ವಿವಿಧೆಡೆ 15 ಟನ್‌ ತ್ಯಾಜ್ಯ ವಿಲೇವಾರಿ

ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ…

3 hours ago

ನೇಪಾಳ ಪ್ರವಾಹ | 105 ಭಾರತೀಯರು ಸೇರಿ 400 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…

4 hours ago

ನೇಪಾಳದಲ್ಲಿ ಭೀಕರ ಪ್ರವಾಹ | ಹತ್ತಾರು ಹಳ್ಳಿಗಳು ಜಲಾವೃತ ; ನಾಪತ್ತೆಯಾದ ಪ್ರವಾಸಿಗರು

ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…

4 hours ago

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

8 hours ago