ಕ್ರೀಡೆ

ಹುಬ್ಬಳ್ಳಿ ಟೈಗರ್ಸ್ ಗೆಲುವಿನ ಓಟಕ್ಕೆ ಮೈಸೂರು ಲಗಾಮು: ಕರುಣ್ ಪಡೆಗೆ ಸತತ ನಾಲ್ಕನೇ ಗೆಲುವು

ಬೆಂಗಳೂರು : ಮೈಸೂರು ವಾರಿಯರ್ಸ್‌ ತಂಡವು ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸೋಲಿಸುವ ಮೂಲಕ ಹುಬ್ಬಳ್ಳಿ ಅಜೇಯ ಓಟಕ್ಕೆ ಲಗಾಮು ಹಾಕಿದೆ. ಜತೆಗೆ ಸತತ ನಾಲ್ಕನೇ ಗೆಲುವು ಸಾಧಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ವಾಡಿದ ಹುಬ್ಬಳ್ಳಿ ಟೈಗರ್ಸ್ ತಂಡವು ಆರಂಭಿಕ ದಾಂಡಿಗ ಲುವ್ನಿತ್ ಸಿಸೋಡಿಯಾ (೬೩ ಎಸೆತಗಳಲ್ಲಿ ೧೦೫ ರನ್) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೮೫ ರನ್ ಕಲೆಹಾಕಿತು. ಬೃಹತ್ ಮೊತ್ತ ಬೆನ್ನತ್ತಿದ ಮೈಸೂರು ವಾರಿಯರ್ಸ್, ಆರಂಭಿಕ ಬ್ಯಾಟರ್ ಆರ್.ಸಮರ್ಥ್ ಅವರ ಸಮರ್ಥ ಆಟದೊಂದಿಗೆ ೭ ಎಸೆತಗಳು ಬಾಕಿ ಇರುವಂತೆಯೇ ೬ ವಿಕೆಟ್‌ಗಳ ಜಯ ದಾಖಲಿಸಿತು.

ಹುಬ್ಬಳ್ಳಿ ಪರ ಆರಂಬಿಕ ದಾಂಡಿಗ ಸಿಸೋಡಿಯಾ ಶತಕಕ್ಕೆ ನಾಯಕ ಮನೀಶ್ ಪಾಂಡೆ ೩೩(೨೧) ಸಾಥ್ ನೀಡಿದರು. ಪ್ರವೀಣ್ ದುಬೆ ೧೬(೬), ನಾಗ ಭರತ್ ೧೨(೧೭) ಆಟದಿಂದ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ವಾರಿಯರ್ಸ್‌ನ ಸಿಎ ಕಾರ್ತಿಕ್ ೪ ಓವರ್ ಬೌಲಿಂಗ್ ವಾಡಿ ೫೦ ರನ್ ನೀಡಿ ಪ್ರಮುಖ ೪ ವಿಕೆಟ್ ಕಬಳಿಸಿದರು. ಶಶಿಕುವಾರ್, ಮನೋಜ್ ಬಾಂಗಡೆ ತಲಾ ೧ ವಿಕೆಟ್ ಪಡೆದರು.

ಬೃಹತ್ ಮೊತ್ತ ಚೇಸ್ ವಾಡಿದ ವಾರಿಯರ್ಸ್‌ಗೆ ಆರಂಭಿಕ ದಾಂಡಿಗ ಆರ್.ಸಮರ್ಥ್ ಉತ್ತಮ ಆರಂಭ ಒದಗಿಸಿದರು, ೪೨ ಎಸೆತಗಳಲ್ಲಿ ೩ ಸಿಕ್ಸರ್ ಮತ್ತು ೬ ಬೌಂಡರಿ ಮೂಲಕ ೭೩ ರನ್ ಕಲೆಹಾಕಿ ತಂಡದ ಗೆಲುವಿಗೆ ಕಾರಣರಾದರು. ನಾುಂಕ ಕರುಣ್ ನಾುಂರ್ ೪೧(೨೫) ಉತ್ತಮ ಇನ್ನಿಂಗ್ಸ್ ಕಟ್ಟಿದರು. ಅಂತಿಮ ಐದು ಓವರ್‌ಗಳಲ್ಲಿ ೪೨ ರನ್‌ಗಳ ಅಗತ್ಯವಿದ್ದಾಗ, ಶೋಯಬ್ ವ್ಯಾನೇಜರ್ (೨೧*) ಮತ್ತು ಶಿವಕುವಾರ್ ರಕ್ಷಿತ್ (೨೨*) ಅವರ ಜೊತೆಯಾಟದಿಂದ ೧೮.೫ ಓವರ್‌ಗಳಲ್ಲಿ ಆರು ವಿಕೆಟ್‌ಗಳು ಬಾಕಿ ಇರುವಂತೆಯೇ ತಂಡ ಜಯದ ಮಂದಹಾಸ ಬೀರಿತು.

ಸಂಕ್ಷಿಪ್ತ ಸ್ಕೋರ್ :

ಹುಬ್ಬಳ್ಳಿ ಟೈಗರ್ಸ್ : ೨೦ ಓವರ್‌ಗಳಲ್ಲಿ ೧೮೫-೭: ಲುವಿನಿತ್ ಸಿಸೋಡಿಯಾ ೧೦೫(೬೩), ಮನೀಶ್ ಪಾಂಡೆ ೩೩(೨೧), ಪ್ರವೀಣ್ ದುಬೆ೧೬(೬) ಸಿಎ ಕಾರ್ತಿಕ್ ೪-೫೦, ಶಶಿಕುವಾರ್ ೧-೨೫, ಮನೋಜ್ ಭಾಂಡಗೆ ೧-೨೮

ಮೈಸೂರು ವಾರಿಯರ್ಸ್ : ೧೮.೫ ಓವರ್‌ಗಳಲ್ಲಿ ೧೮೮-೪: ಆರ್. ಸಮರ್ಥ್ ೭೩(೪೨), ಕರುಣ್ ನಾಯರ್ ೪೧(೨೫), ಸಿಎ ಕಾರ್ತಿಕ್ ೨೯(೧೮) ಪ್ರವೀಣ್ ದುಬೆ ೩-೩೮.

ಪಂದ್ಯಶ್ರೇಷ್ಠ : ಆರ್. ಸಮರ್ಥ್

andolanait

Recent Posts

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

2 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

2 hours ago

ಓದುಗರ ಪತ್ರ | ತಂಬಾಕುಯುಕ್ತ ದಂತ ಉತ್ಪನ್ನಗಳನ್ನು ನಿಷೇಧಿಸಿ

ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…

2 hours ago

ಓದುಗರ ಪತ್ರ | ರಸ್ತೆಯಲ್ಲಿ ವಾಯುವಿಹಾರ ಅಪಾಯಕಾರಿ

ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…

2 hours ago

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ : ಉನ್ನತ ಶಿಕ್ಷಣದಲ್ಲಿ ಬದಲಾವಣೆಗೆ ಕೇಂದ್ರದ ಮುನ್ನುಡಿ

ಆಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ ಡಿಎ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ…

2 hours ago

ಬೈಕ್‌ಗೆ ಲಾರಿ ಡಿಕ್ಕಿ : ಸವಾರ ಸಾವು, ಮತ್ತೊರ್ವ ಗಂಭೀರ

ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ…

2 hours ago