Categories: ಕ್ರೀಡೆ

ವರ್ಷದ ಬಳಿಕ ಕಮ್‌ಬ್ಯಾಕ್‌ ಮಾಡಿದ ಮಹಮ್ಮದ್ ಶಮಿ

ಮಧ್ಯಪ್ರದೇಶ: ವಿಶ್ವ ಕಪ್‌ ನಂತರ ಗಾಯಗೊಂಡು ಮೈದಾನದಿಂದ ಹೊರಗುಳಿದಿದ್ದ ಶಮಿ ವರ್ಷದ ಬಳಿಕ ರಣಜಿ ಪಂದ್ಯದಲ್ಲಿ ಮಿಂಚಿದ್ದಾರೆ. ಈ ಮೂಲಕ ತಮ್ಮ ಫಿಟ್‌ನೆಸ್‌ ಸಾಬೀತು ಮಾಡಿರುವ ಇವರು ಆಸ್ಟ್ರೇಲಿಯಾದ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ.

ಇಂದೋರ್‌ನ ಹೋಲ್ಕರ್‌ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಬಂಗಾಳ ಪರವಾಗಿ ಆಡಿದ ಮಹಮ್ಮದ್‌ ಶಮಿ ಒಟ್ಟು 7 ವಿಕೆಟ್‌ ಕಬಳಿಸುವ ಮೂಲಕ ಬಂಗಾಳಕ್ಕೆ ಜಯದ ಕಾಣಿಕೆ ನೀಡಿದರು.

ಮಧ್ಯಪ್ರದೇಶ ತಂಡದ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಬಂಗಾಳ ಮೊದಲ ಇನ್ನಿಂಗ್ಸ್‌ನಲ್ಲಿ 228 ರನ್‌ ಕಲೆಹಾಕಿತ್ತು. ನಂತರ ಬ್ಯಾಟ್‌ ಬೀಸಿದ ಮಧ್ಯ ಪ್ರದೇಶ ತಂಡಕ್ಕೆ ಮಾರಕವಾಗಿ ಪರಿಣಮಿಸಿದ ಶಮಿ ಬಂಗಾಳದ ಪರ 4 ವಿಕೆಟ್‌ ಕಬಳಿಸಿದರು. ಮಧ್ಯಪ್ರದೇಶ ತಂಡವು 167 ರನ್‌ಗಳಿಗೆ ಆಲೌಟ್‌ ಆಯಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ 226 ರನ್‌ ಕಲೆಹಾಕಿದ ಬಂಗಾಳ, ಮಧ್ಯಪ್ರದೇಶ ತಂಡಕ್ಕೆ 338 ರನ್‌ಗಳ ಗುರಿ ನೀಡಿದರು.

ಬಂಗಾಳ ನೀಡಿದ ಗುರಿಗೆ ಪ್ರತ್ಯುತ್ತರವಾಗಿ ಮಧ್ಯಪ್ರದೇಶ ತಂಡ ಆರಂಭದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆದರೆ ಶಹಬಾಜ್‌ ಅಹ್ಮದ್‌ ಹಾಗೂ ಮಹಮದ್‌ ಶಮಿ ಅವರ ಅನುಭವ ಬೌಲಿಂಗ್‌ ಮುಂದೆ 326 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಬಂಗಾಳದ ಮುಂದೆ ಸೋಲೊಪ್ಪಿಕೊಂಡರು.

ತಂಡದ ಗೆಲುವಿನ ರೂವಾರಿಯಾದ ಮಹಮ್ಮದ್‌ ಶಮಿ ಈ ಪಂದ್ಯದಲ್ಲಿ 44 ಓವರ್‌ಗಳಿಗೆ 156 ರನ್‌ ನೀಡಿ 7 ವಿಕೆಟ್‌ ಕಬಳಿಸಿದರು ಹಾಗೂ ಬ್ಯಾಟಿಂಗ್‌ನಲ್ಲೂ ಮಿಂಚಿದ ಶಮಿ 37ರನ್‌ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು.

ಆಂದೋಲನ ಡೆಸ್ಕ್

Recent Posts

ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಕಡಿತ ಮಾಡಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆಯನ್ನು ಕಡಿತ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು,…

11 mins ago

ಧಾರ್ಮಿಕ ಪ್ರದೇಶದ ಪುಣ್ಯಭೂಮಿ ಚಾಮರಾಜನಗರ: ಡಿಸಿಎಂ ಡಿ.ಕೆ.ಶಿವಕುಮಾರ್‌

ಚಾಮರಾಜನಗರ: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬುದು ಸುಳ್ಳು. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ…

41 mins ago

ದುಬಾರೆ ದುರಂತ ಬೆನ್ನಲ್ಲೇ ಸಕ್ರೆಬೈಲು ಆನೆ ಬಿಡಾರ ತಾತ್ಕಾಲಿಕ ಬಂದ್‌

ಶಿವಮೊಗ್ಗ: ಕೊಡಗಿನ ದುಬಾರೆ ಆನೆ ಬಿಡಾರದಲಲಿ ನಡೆದ ಸಾಕಾನೆಗಳ ಕಾಳಗದಲ್ಲಿ ಮಹಿಳೆ ಮೃತಪಟ್ಟ ಘಟನೆ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಸಕ್ರೆಬೈಲು…

1 hour ago

ಟ್ರೆಂಡ್‌ ಸೃಷ್ಟಿಸಿದ ಕಾಕ್ರೋಚ್‌ ಜನತಾ ಪಾರ್ಟಿ ; ಚಳವಳಿಯಾಗಿ ಬದಲಾದ ಸಿಜೆಪಿ

ಹೊಸದಿಲ್ಲಿ : ಜೆನ್‌ಝೀಗಳ ನೆಚ್ಚಿನ ತಾಣವಾಗಿರುವ ಇನ್‌ಸ್ಟಾಗ್ರಾಂ ಈಗ ಕೇವಲ ಮನರಂಜನೆಯ ತಾಣವಾಗಂತೂ ಇಲ್ಲ. ಬದಲಾಗಿ ಸಂಚಲನ ಸೃಷ್ಟಿಸುವ ಬಹುದೊಡ್ಡ…

2 hours ago

ಮುನ್ನೆಲೆಗೆ ಬಂದ ಮಾನವ – ವನ್ಯಜೀವಿ ಸಂಘರ್ಷ ಚರ್ಚೆ

ಮನುಷ್ಯರಿಗೆ ಅಭಿವೃದ್ಧಿ, ಆನೆಗಳಿಗೆ ಅತಿಕ್ರಮಣ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಮೇ ೧೮ರಂದು ಕರ್ನಾಟಕದ ದುಬಾರೆ ಶಿಬಿರದಲ್ಲಿ ನಡೆದ ಆನೆಗಳ ಕಾಳಗ;…

7 hours ago

ಕೊಡಗಿನಲ್ಲಿದ್ದನೊಬ್ಬ ಚೆ ಗುವೆರ!

ಕೆ.ವಿ.ಸ್ಲ್ಯಾನ್ಲಿ ಇದು ಎಂಬತ್ತರ ದಶಕದ ಕಥೆಯಲ್ಲದ ಜೀವನಗಾಥೆ. ದ್ವೀಪ ರಾಷ್ಟ್ರಸಿಂಹಳ ಮೂಲದ ಕುಟುಂಬವೊಂದು ಸಾಂಸ್ಕೃತಿಕ ಕರ್ನಾಟಕದಲ್ಲಿ ವಿಲೀನವಾಗಿ ಜೀವನ ನಡೆಸುತ್ತಿತ್ತು.…

7 hours ago