ಕ್ರೀಡೆ

ಮಹಾರಾಜ ಟ್ರೋಫಿ: ಗುಲ್ಬರ್ಗ ಮೈಸ್ಟಿಕ್ಸ್‌ಗೆ “ದೇವದತ್ತ” ಜಯ

ಬೆಂಗಳೂರು: ದೇವದತ್ತ ಪಡಿಕ್ಕಲ್‌ (78*) ಅವರ ಆಕರ್ಷಕ ಅರ್ಧ ಶತಕ ಮತ್ತು ವಿದ್ವತ್‌ ಕಾವೇರಪ್ಪ ಮತ್ತು ಮನೋಜ್‌ ಅವರ ಆಕರ್ಷಕ ಬೌಲಿಂಗ್‌ ನೆರವಿನಿಂದ ಮಹಾರಾಜ ಟ್ರೋಫಿಯಲ್ಲಿ ಗುಲ್ಬರ್ಗ ಮೈಸ್ಟಿಕ್ಸ್‌ ತಂಡ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 6 ವಿಕೆಟ್‌ ಗಳ ಜಯ ಗಳಿಸಿದೆ.

ಜಯ ಗಳಿಸಲು 145 ರನ್‌ಗಳ ಅಲ್ಪ ಮೊತ್ತವನ್ನು ಬೆಂಬತ್ತಿದ ಗುಲ್ಬರ್ಗ ಮೈಸ್ಟಿಕ್ಸ್‌ ದೇವದತ್ತ ಪಡಿಕ್ಕಲ್‌ ಅವರು ಅಜೇಯ 78 ರನ್‌ (61 ಎಸೆತ, 7 ಬೌಂಡರಿ 4 ಸಿಕ್ಸರ್‌) ನೆರವಿನಿಂದ ಇನ್ನೂ 15 ಎಸೆತ ಬಾಕಿ ಇರುವಾಗಲೇ ಗುರಿ ತಲುಪಿತು. ಬೆಂಗಳೂರು ಪರ ಜಗದೀಶ ಸುಚಿತ್‌ ಹಾಗೂ ರೋನಿತ್‌ ಮೋರೆ ತಲಾ 1 ವಿಕೆಟ್‌ ಗಳಿಸಿದರು.

ಸಾಧಾರಣ ಮೊತ್ತ ಗಳಿಸಿದ ಬೆಂಗಳೂರು:
ಗುಲ್ಬರ್ಗ ಮೈಸ್ಟಿಕ್ಸ್‌ನ ವಿದ್ವತ್‌ ಕಾವೇರಪ್ಪ (31ಕ್ಕೆ 3) ಹಾಗೂ ಮನೋಜ್‌ ಭಾಂಡಗೆ (23ಕ್ಕೆ3) ಅವರ ಬೌಲಿಂಗ್‌ ದಾಳಿಗೆ ತತ್ತರಿಸಿದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಹಾರಾಜ ಟ್ರೋಪಿಯಲ್ಲಿ 21ನೇ ಪಂದ್ಯದಲ್ಲಿ 144 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ.

ಟಾಸ್‌ ಗೆದ್ದ ಗುಲ್ಬರ್ಗ ಮೈಸ್ಟಿಕ್ಸ್‌ ನಾಯಕ ಮನೀಶ್‌ ಪಾಂಡೆ ಪೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿರುವುದನ್ನು ತಂಡದ ಬೌಲರ್‌ಗಳು ಉತ್ತಮ ರೀತಿಯಲ್ಲಿಯೇ ಸಮರ್ಥಿಸಿಕೊಂಡರು. ನಿನ್ನೆ ಶತಕ ಸಿಡಿಸಿದ್ದ ಎಲ್‌.ಆರ್‌. ಚೇತನ್‌ ಕೇವಲ 6 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದು ತಂಡದ ರನ್‌ ಗಳಿಕೆಗೆ ಆರಂಭದಲ್ಲೇ ಕಡಿವಾಣ ಬೀಳುವಂತೆ ಮಾಡಿತು.

ನಾಯಕ ಮಯಾಂಕ್‌ ಆಗರ್ವಾಲ್‌ (28) ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಸೇರಿದ್ದು ತಂಡದ ಬೃಹತ್‌ ಮೊತ್ತದ ಗುರಿಗೆ ಅಡ್ಡಿಯಾಯಿತು. ಕೆ.ವಿ. ಅನೀಶ್‌ (20), ಶಿವಕುಮಾರ್‌ ರಕ್ಷಿತ್‌ (16), ಕ್ರಾಂತಿ ಕುಮಾರ್‌ (17), ಜಗದೀಶ ಸುಚಿತ್‌ (17) ಹೀಗೆ ಬೆಂಗಳೂರಿನ ಬ್ಲಾಸ್ಟರ್ಸ್‌ನ ಬ್ಯಾಟ್ಸ್‌ಮನ್‌ಗಳು ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಹಾದಿ ಹಿಡಿದರು.

ಗುಲ್ಬರ್ಗ ಮೈಸ್ಟಿಕ್ಸ್‌ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ರೀತಿಯ ಬೌಲಿಂಗ್‌ ಪ್ರದರ್ಶಿಸಿರುವುದು ಗಮನಾರ್ಹ. ವಿದ್ವತ್‌ ಕಾವೇರಪ್ಪ ಹಾಗೂ ಮನೋಜ್‌ ಭಾಂಡಗೆ ಉತ್ತಮ ಬೌಲಿಂಗ್‌ ಪ್ರದರ್ಶಿಸಿ ಒಟ್ಟು ಆರು ವಿಕೆಟ್‌ ಹಂಚಿಕೊಂಡರು. ವಿದ್ವತ್‌ ಕಾವೇರಪ್ಪ 31 ರನ್‌ಗೆ 3 ವಿಕೆಟ್‌ ಗಳಿಸಿದರೆ, ಮನೋಜ್‌ ಭಾಂಡಗೆ 23 ರನ್‌ಗೆ 3 ವಿಕೆಟ್‌ ಗಳಿಸಿ ಬೆಂಗಳೂರಿನ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಹಿಂದೆ ಮೈಸೂರು ವಾರಿಯರ್ಸ್‌ ಪರ ಆಡುತ್ತಿದ್ದ ಕುಶಲ್‌ ವಾಧ್ವಾನಿ ಈ ಬಾರಿ ಬೆಂಗಳೂರು ತಂಡದಲ್ಲಿದ್ದು, ಮಹಾರಾಜ ಟ್ರೋಫಿಯ ಮೊದಲ ಪಂದ್ಯದಲ್ಲೇ ಬೆಂಗಳೂರಿನ ನಾಯಕ ಮಯಾಂಕ್‌ ಅಗರ್ವಾಲ್‌ ಅವರ ವಿಕೆಟ್‌ ಕಬಳಿಸಿ ತಂಡಕ್ಕೆ ಉತ್ತಮ ರೀತಿಯಲ್ಲಿ ನೆರವಾದರು. ಮನೋಜ್‌ ಭಾಂಡಗೆ ಮಧ್ಯಮ ಕ್ರಮಾಂಕದ ಆಟಗಾರರ ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು. ವಾಧ್ವಾನಿ 17 ರನ್‌ಗೆ 2 ವಿಕೆಟ್‌ ಗಳಿಸುವುದರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್‌ 9 ವಿಕೆಟ್‌ ನಷ್ಟಕ್ಕೆ ​144 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು.

ಸಂಕ್ಷಿಪ್ತ ಸ್ಕೋರ್‌:
ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 144 (ಮಯಾಂಕ್‌ ಅಗರ್ವಾಲ್‌ 28, ಅನೀಶ್‌ 20, ಕ್ರಾಂತಿ ಕುಮಾರ್‌ 17, ಕಾವೇರಪ್ಪ 31ಕ್ಕೆ 3, ಮನೋಜ್‌ 23ಕ್ಕೆ 3, ಕುಶಾಲ್‌ ವಾಧ್ವಾನಿ 17 ಕ್ಕೆ 2).

ಗುಲ್ಬರ್ಗ ಮೈಸ್ಟಿಕ್ಸ್‌: 17.3 ಓವರ್‌ಗಳಲ್ಲಿ 4 ವಿಕೆಟ್‌ಗೆ 150 (ದೇವದತ್ತ ಪಡಿಕ್ಕಲ್‌ 78*). ಜಸ್ವತ್‌ ಆಚಾರ್ಯ 18, ಮನೀಶ್‌ ಪಾಂಡೆ 13, ಕ್ರಾಂತಿ ಕುಮಾರ್‌ 16ಕ್ಕೆ 1)

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

3 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

5 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

5 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

6 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

7 hours ago