ಕ್ರೀಡೆ

ಮಹಾರಾಜ ಟ್ರೋಫಿ ಸೀಸನ್‌ 3ರ ವೇಳಾಪಟ್ಟಿ ಬಿಡುಗಡೆ: ಮೈಸೂರು ವಾರಿಯರ್ಸ್‌ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಮೈಸೂರು: ಕೆಎಸ್‌ಸಿಎ ವತಿಯಿಂದ ಆಯೋಜಿಸಲಾಗಿರುವ ಮಹಾರಾಜ ಟ್ರೋಫಿ ಸೀಸನ್‌ 3ರ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಸೀಸನ್‌ ಮೂರರ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ಕಾದಾಟ ನಡೆಸಲಿದೆ.

ಇನ್ನು ಅದೇ ದಿನ ಎರಡನೇ ಪಂದ್ಯದಲ್ಲಿ ನಮ್ಮ ಮೈಸೂರು ವಾರಿಯರ್ಸ್‌ ಹಾಗೂ ಶಿವಮೊಗ್ಗ ಲಯನ್ಸ್‌ ಮುಖಾಮುಖಿಯಾಗಲಿದೆ. ಈ ಎಲ್ಲಾ ಪಂದ್ಯಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಮಹಾರಾಜ ಟ್ರೋಫಿ ಸೀಸನ್‌ 3 ಇದೇ ಆಗಸ್ಟ್‌ 15ರಿಂದ ಅಂದರೆ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಆರಂಭವಾಗಲಿದ್ದು, ಸೆಪ್ಟೆಂಬರ್‌ 1ರಂದು ಫೈನಲ್ಸ್‌ ನಡೆಯಲಿದೆ. ಒಟ್ಟಾರೆಯಾಗಿ 33 ಪಂದ್ಯಗಳು (ಸೆಮಿ, ಫೈನಲ್ಸ್‌ ಸೇರಿ) ನಡೆಯಲಿದೆ.

ಉತ್ತಮ ಲಯದಲ್ಲಿರುವ ಮೈಸೂರು ವಾರಿಯರ್ಸ್‌ ತಂಡ ಆಗಸ್ಟ್‌ 15ರಿಂದ ಶಿವಮೊಗ್ಗ ಲಯನ್ಸ್‌ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ತಂಡಕ್ಕೆ ನಾಯಕರಾಗಿ ಮೂರನೇ ಅವಧಿಗೆ ಕರುನ್‌ ನಾಯರ್‌ ನೇಮಕವಾಗಿದ್ದರೇ, ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌, ಕೆ. ಗೌತಮ್‌ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಮಹಾರಾಜ ಟ್ರೋಫಿ ವೇಳಾಪಟ್ಟಿ ಇಂತಿದೆ.

ಆಗಸ್ಟ್‌ 15
ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್- ಮದ್ಯಾಹ್ನ 3ಕ್ಕೆ
ಶಿವಮೊಗ್ಗ ಲಯನ್ಸ್‌ vs ಮೈಸೂರು ವಾರಿಯರ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 16
ಮಂಗಳೂರು ಡ್ರ್ಯಾಗನ್ಸ್‌ vs ಹುಬ್ಬಳ್ಳಿ ಟೈಗರ್ಸ್‌- ಮದ್ಯಾಹ್ನ 3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 17
ಶಿವಮೊಗ್ಗ ಲಯನ್ಸ್‌ vs ಮಂಗಳೂರು ಡ್ರ್ಯಾಗನ್ಸ್‌ – ಮದ್ಯಾಹ್ನ3:00ಕ್ಕೆ
ಗುಲ್ಬರ್ಗಾ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 18
ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್- ಮದ್ಯಾಹ್ನ3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 19
ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್‌- ಮದ್ಯಾಹ್ನ 3:00ಕ್ಕೆ
ಮೈಸೂರು ವಾರಿಯರ್ಸ್ vs ಮಂಗಳೂರು ಡ್ರ್ಯಾಗನ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 20
ಶಿವಮೊಗ್ಗ ಲಯನ್ಸ್‌ vs ಹುಬ್ಬಳ್ಳಿ ಟೈಗರ್ಸ್‌- ಮದ್ಯಾಹ್ನ 3:00ಕ್ಕೆ
ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರ್ಯಾಗನ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 21
ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್‌- ಮದ್ಯಾಹ್ನ 3:00ಕ್ಕೆ
ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 22
ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್‌- ಮದ್ಯಾಹ್ನ 3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರ್ಯಾಗನ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 23
ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್‌- ಮದ್ಯಾಹ್ನ3:00ಕ್ಕೆ
ಮಂಗಳೂರು ಡ್ರ್ಯಾಗನ್ಸ್‌ vs ಗುಲ್ಬರ್ಗಾ ಮಿಸ್ಟಿಕ್ಸ್- ಸಂಜೆ 7:00ಕ್ಕೆ

ಆಗಸ್ಟ್‌ 24
ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್- ಮದ್ಯಾಹ್ನ 3:00ಕ್ಕೆ
ಶಿವಮೊಗ್ಗ ಲಯನ್ಸ್‌ vs ಹುಬ್ಬಳ್ಳಿ ಟೈಗರ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 25
ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್- ಮದ್ಯಾಹ್ನ 3:00ಕ್ಕೆ
ಮಂಗಳೂರು ಡ್ರ್ಯಾಗನ್ಸ್‌ vs ಶಿವಮೊಗ್ಗ ಲಯನ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 26
ಮಂಗಳೂರು ಡ್ರ್ಯಾಗನ್ಸ್‌ vs ಹುಬ್ಬಳ್ಳಿ ಟೈಗರ್ಸ್‌- ಮದ್ಯಾಹ್ನ 3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್- ಸಂಜೆ 7:00ಕ್ಕೆ

ಆಗಸ್ಟ್‌ 27
ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್‌- ಮದ್ಯಾಹ್ನ 3:00ಕ್ಕೆ
ಹುಬ್ಬಳ್ಳಿ ಟೈಗರ್ಸ್‌ vs ಮೈಸೂರು ವಾರಿಯರ್ಸ್- ಸಂಜೆ 7:00ಕ್ಕೆ

ಆಗಸ್ಟ್‌ 28
ಮಂಗಳೂರು ಡ್ರ್ಯಾಗನ್ಸ್‌ vs ಮೈಸೂರು ವಾರಿಯರ್ಸ್- ಮದ್ಯಾಹ್ನ 3:00ಕ್ಕೆ
ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 29
ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರ್ಯಾಗನ್ಸ್‌- ಮದ್ಯಾಹ್ನ 3:00ಕ್ಕೆ
ಗುಲ್ಬರ್ಗಾ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್‌- ಸಂಜೆ 7:00ಕ್ಕೆ

ಆಗಸ್ಟ್‌ 30: ಮೊದಲ ಸೆಮಿ ಫೈನಲ್ಸ್‌ ಪಂದ್ಯ

ಆಗಸ್ಟ್‌ 31: ಎರಡನೇ ಸೆಮಿ ಫೈನಲ್ಸ್‌ ಪಂದ್ಯ

ಸೆಪ್ಟೆಂಬರ್‌ 1: ಫೈನಲ್ಸ್‌

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಇಂಡಿಗೋ ಬಿಕ್ಕಟ್ಟಿನ ನಡುವೆ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ನವದೆಹಲಿ: ಇಂಡಿಗೋ ವಿಮಾನಯಾ ಸಂಸ್ಥೆಗಳ ಆರ್ಥಿಕ ಬಿಕ್ಕಟ್ಟಿನ ನಡುವೆ ಕಾನೂನು ಮತ್ತು ನಿಯಮಗಳು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ನರೇಂದ್ರ…

13 mins ago

ವಿಶ್ವದ 2ನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜ ಅನಾವರಣಗೊಳಿಸಿದ ಸಿಎಂ

ಬೆಳಗಾವಿ: ಸುವರ್ಣಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಂದು ವಿಶ್ವದಲ್ಲೇ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಿದರು.…

39 mins ago

ನಟ ರಿಷಬ್‌ ಶೆಟ್ಟಿ ತೊಡೆ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ ನರ್ತಕ: ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ

ಬೆಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲಾ ಮಾಡಿಸಿದ್ದ ರಿಷಬ್‌ ಶೆಟ್ಟಿ ತೊಡೆ ಮೇಲೆ ದೈವಾರಾಧಕ ಮಲಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.…

42 mins ago

ಇಂಡಿಗೋ ಏರ್‌ಲೈನ್ಸ್‌ಗೆ ಕೇಂದ್ರ ಸರ್ಕಾರದಿಂದ ಮೂಗುದಾರ: ಚಳಿಗಾಲ ವೇಳಾಪಟ್ಟಿ ಕಡಿತ

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಕಾರ್ಯಾಚರಣೆಯಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ…

54 mins ago

ಬಿಜೆಪಿ ಹೋರಾಟ ನಡೆಸಬೇಕಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರದ ವಿರುದ್ಧ ಇಂದು 9ಕ್ಕೂ ಹೆಚ್ಚು…

2 hours ago

ಶಾಲಾ ಬಸ್ ತಡೆದು ಬಾಲಕಿಯನ್ನು ವಶಕ್ಕೆ ನೀಡುವಂತೆ ಕಿರಿಕ್: ಪುಂಡರಿಬ್ಬರ ಬಂಧನ

ಕೆ.ಆರ್.ಪೇಟೆ: ಗಾಂಜಾ ಮತ್ತು ಮಧ್ಯ ಸೇವಿಸಿದ ಅಮಲಿನಲ್ಲಿ ಶಾಲಾ ಬಸ್ ತಡೆದು, ಅಪ್ರಾಪ್ತ ಬಾಲಕಿಯನ್ನು ತಮ್ಮ ವಶಕ್ಕೆ ನೀಡುವಂತೆ ಕಿರಿಕ್…

2 hours ago