ಬೆಂಗಳೂರು : ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟಿಗ ಶೇನ್ ವಾಟ್ಸನ್ ಲೆಜೆಂಡ್ಸ್ ಪ್ರೋ T20 ಲೀಗ್ನಲ್ಲಿ ಮತ್ತೆ ಸ್ಪರ್ಧಿಸಲು ಸಿದ್ಧರಾಗಿದ್ದು, ಈ ಕುರಿತು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್ನ ಸಂಭ್ರಮವನ್ನು ಹಿಡಿದಿಟ್ಟುಕೊಂಡಿರುವ ಈ ಲೀಗ್ ಕಡಲತೀರದ ಮಧುರ ವಾತಾವರಣದಲ್ಲಿ ನಡೆಯುವುದರಿಂದ ಅಭಿಮಾನಿಗಳಿಗೆ ಮತ್ತಷ್ಟು ಉತ್ಸಾಹವನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ.
ಲೆಜೆಂಡ್ಸ್ ಪ್ರೋ T20 ಲೀಗ್ ಬಗ್ಗೆ ಮಾತನಾಡಿದ ವಾಟ್ಸನ್, “ಸ್ಪರ್ಧಾತ್ಮಕ ಮನೋಭಾವ ಇನ್ನೂ ನನ್ನೊಳಗೆ ಜೀವಂತವಾಗಿದೆ. ಚೆನ್ನಾಗಿ ಆಡುವ ಆಸೆ ಮತ್ತು ಹುಮ್ಮಸ್ಸು ಇಂದಿಗೂ ಇದೆ. ಈ ಲೀಗ್ನಲ್ಲಿ ಅದನ್ನೆಲ್ಲಾ ಆನಂದಿಸುತ್ತಿದ್ದೇನೆ” ಎಂದರು.
ಇದನ್ನು ಓದಿ: ಜನ ಮೆಚ್ಚುಗೆ ಪಡೆದ ಹಗ್ಗ-ಜಗ್ಗಾಟ : ಸಂಸದ ಯದುವೀರ್ ಅವರ ʼಫಿಟ್ ಯುವ ಫಾರ್ ವಿಕಸಿತ ಭಾರತʼ ಯೋಜನೆಯಡಿ ಆಯೋಜನೆ
ವಾಟ್ಸನ್, ಲೀಗ್ನಲ್ಲಿ ಪರಿಚಿತ ಕ್ರಿಕೆಟರ್ಗಳ ಜೊತೆ ಮತ್ತೆ ಮೈದಾನ ಹಂಚಿಕೊಳ್ಳುತ್ತಿರುವುದಕ್ಕೆ ವಿಶೇಷ ಸಂತಸ ವ್ಯಕ್ತಪಡಿಸಿದರು. ಹರ್ಭಜನ್ ಸಿಂಗ್, ಶಿಖರ್ ಧವನ್ ಮತ್ತು ಡೇಲ್ ಸ್ಟೇನ್ ಮೊದಲಾದ ಆಟಗಾರರ ಜೊತೆ ಆಡಲಿರುವುದರ ಕುರಿತು ಅವರು ಹೇಳಿದರು, ನಾವು ವರ್ಷಗಳ ಕಾಲ ಪರಸ್ಪರ ಎದುರಾಳಿಗಳಾಗಿದ್ದೇವೆ, ಒಂದೇ ಡ್ರೆಸ್ಸಿಂಗ್ ರೂಮಲ್ಲಿ ಸಮಯ ಕಳೆದಿದ್ದೇವೆ ಮತ್ತು ಜಗತ್ತಿನಾದ್ಯಂತ ಒಟ್ಟಿಗೆ ಪ್ರಯಾಣಿಸಿದ್ದೇವೆ. ಈಗ ಕಪ್ಗಳ ಒತ್ತಡವಿಲ್ಲದೆ ಆಟವನ್ನು ಆನಂದಿಸುವ ಅವಕಾಶ ಸಿಕ್ಕಿದೆ ಎಂದರು.
ಲೀಗ್ ನಡೆಯಲಿರುವ ಗೋವಾದ ಕುರಿತು ಮಾತನಾಡಿದ ವಾಟ್ಸನ್, “ಭಾರತದಲ್ಲಿ ನಾನು ಅನೇಕ ಸ್ಥಳಗಳಲ್ಲಿ ಆಡಿದ್ದೇನೆ, ಆದರೆ ಗೋವಾಕ್ಕೆ ತನ್ನದೇ ಆದ ವೈಬ್ ಇದೆ. ಆಸ್ಟ್ರೇಲಿಯಾದಲ್ಲಿ ನಾನು ಚಿಕ್ಕವನಿದ್ದಾಗ ಸ್ನೇಹಿತರೊಂದಿಗೆ ಕಡಲತೀರದಲ್ಲಿ ಆಡಿದ ಕ್ರಿಕೆಟ್ ದಿನಗಳನ್ನು ಇದು ನೆನಪಿಸುತ್ತದೆ. ಈ ಲೀಗ್ ನಿಜಕ್ಕೂ ಲೆಜೆಂಡ್ಸ್ಗಾಗಿ ಐಪಿಎಲ್ನಂತೆ ಅನಿಸುತ್ತದೆ. ನಮ್ಮನ್ನು ಇಷ್ಟು ವರ್ಷಗಳಿಂದ ಬೆಂಬಲಿಸುತ್ತಿರುವ ಅಭಿಮಾನಿಗಳು ಇನ್ನೂ ಅದೇ ಜೋಶ್ನಲ್ಲಿ ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.
ಲೆಜೆಂಡ್ಸ್ ಪ್ರೋ T20 ಲೀಗ್ಗೆ ಅಭಿಮಾನಿಗಳಿಂದ ಈಗಾಗಲೇ ಅದ್ಭುತ ಪ್ರತಿಕ್ರಿಯೆ ದೊರಕಿದ್ದು, ಈ ಸೀಸನ್ ಇನ್ನಷ್ಟು ರೋಚಕ ಪೈಪೋಟಿ ಮತ್ತು ಮನರಂಜನೆ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪತ್ತೆಗಾಗಿ ಪೊಲೀಸರು…
ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್ನಲ್ಲಿ ಪಠ್ಯ…
ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…
ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ ಹಬ್ಬಕ್ಕೆ ಅಗತ್ಯ ಸಿದ್ಧತೆ ವಿರಾಜಪೇಟೆ: ಕೇರಳ ಹಾಗೂ…
ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್ಪಾತ್ಗಳನ್ನು…