ಡೆಹ್ರಡೂನ್ : ಭರ್ಜರಿ ಬ್ಯಾಟಿಂಗ್ ತೋರಿದ ಇಂಡಿಯಾ ಕ್ಯಾಪಿಟಲ್ಸ್ ತಂಡವು ಸದರ್ನ್ ಸೂಪರ್ಸ್ಟಾರ್ ತಂಡದ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಇಲ್ಲಿನ ರಾಜೀವ್ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಸ್ಎನ್ಎಸ್ಎಸ್ ನೀಡಿದ್ದ 163 ರನ್ ಗಳ ಗುರಿ ಬೆನ್ನಟ್ಟಿದ ಇಂಡಿಯಾ ಕ್ಯಾಪಿಟಲ್ಸ್ ತಂಡವು 16.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಎಸ್ಎನ್ಎಸ್ಎಸ್ ತಂಡವು ಆರಂಭದಲ್ಲಿಯೇ ಮುನವೀರ (4) ವಿಕೆಟ್ ಕಳೆದುಕೊಂಡಿತು. ಡಿ ಸಿಲ್ವಾ (56) ಆಕರ್ಷಕ ಅರ್ಧ ಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಾಯಕ ರಾಸ್ ಟೈಲರ್ (24), ಗೋಸ್ವಾಮಿ (24), ಪವನ್ ನೇಗಿ (12), ಉಪುಲ್ ತರಂಗಾ (19) ತಂಡ 163 ರನ್ ಗುರಿ ಮುಟ್ಟಲು ಸಹಕರಿಸಿದರು.
ಇಂಡಿಯಾ ಕ್ಯಾಪಿಟಲ್ಸ್ ಪರ ರಸ್ಟಿ ತೀರನ್ 2, ನರ್ಸ್ 2, ಕೆ.ಪಿ ಅಪ್ಪಣ್ಣ ಮತ್ತು ಉದಾನಾ ತಲಾ 1 ವಿಕೆಟ್ ಪಡೆದರು.
163 ರನ್ಗಳ ಗುರಿ ಬೆನ್ನಟ್ಟಿದ ಇಂಡಿಯಾ ಕ್ಯಾಪಿಟಲ್ಸ್ ನಾಯಕ ಗೌತಮ್ ಗಂಭೀರ್ ಅವರ ವಿಕೆಟ್ನ್ನು ಬೇಗನೆ ಕಳೆದುಕೊಂಡಿತು. ನಾಯಕ ಗಂಭೀರ್ ಕೇವಲ ಮೂರು ರನ್ಗಳಿಸಿ ಔಟಾದರು. ನಂತರ ಬಂದ ಜ್ಞಾನೇಶ್ವರ್ ಶೂನ್ಯಕ್ಕೆ ಔಟಾಗಿ ಬಂದ ದಾರಿಯಲ್ಲೇ ಹಿಂದಿರುಗಿದರು.
ಆರಂಭಿಕ ಆಟಗಾರ ರಿಕಾರ್ಡೋ ಪೋವೆಲ್ ಹಾಗೂ ಎಡ್ವರ್ಡ್ಸ್ ಅವರ ಜೊತೆಯಾಟ ಇಂಡಿಯಾ ಕ್ಯಾಪಿಟಲ್ಸ್ ತಂಡ ದಿಕ್ಕನ್ನೇ ಬದಲಾಯಿಸಿದರು. ಪೋವೆಲ್ 57 ಎಸೆತಗಳಲ್ಲಿ 6 ಬೌಂಡರಿ ಹಾಗೂ 10 ಸಿಕ್ಸರ್ ಮೂಲಕ 100 ರನ್ ಸಿಡಿsiದರೇ, ಎಡ್ವರ್ಡ್ಸ್ 45 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹ ಕೊಂಡ್ಯೋಯ್ದರು. ಕೇವಿನ್ ಪೀಟರ್ಸನ್ 4 ರನ್ ಗಳಿಸಿದರು. ಅಂತಿಮವಾಗಿ 16.4 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿದರು.
ಎಸ್ಎನ್ಎಸ್ಎಸ್ ಪರ ಸುರಂಗ ಲಕ್ಮಾಲ್ 1 ಪಡೆದರು.
ಪಂದ್ಯ ಶ್ರೇಷ್ಠ : ರಿಕಾರ್ಡೋ ಪೋವೆಲ್
ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…
ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್ಕೌಂಟರ್ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…
ಮಂಡ್ಯ: ಟೋಲ್ ಬಳಿಯ ಸೈನ್ ಬೋರ್ಡ್ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ಮಲೆ ಮಹದೇಶ್ವರ ವನ್ಯಜೀವಿ…
ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡ್ ರಾಜ್ಯದ ಹಲ್ ದ್ವಾನಿಯ ರಾಮಲೀಲಾ…