ಲಖನೌ: ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ಗೆ ಎಂದಿಗೂ ನಾಯಕತ್ವದ ಕೊರತೆ ಕಾಡವುದಿಲ್ಲ ಎಂದು ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟರು. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ರಾಹುಲ್ ಅವರು ಅರ್ಧಶತಕ ಬಾರಿಸಿದ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಿದ್ದಾರೆ.
ಪಂದ್ಯದಲ್ಲಿ ರಾಹುಲ್ ಅವರು 56 ಎಸೆತಗಳಲ್ಲಿ 74 ರನ್ ಗಳಿಸಿದರು.
ಹಿಂದಿನ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ನ ನಾಯಕತ್ವವನ್ನು ರಾಹುಲ್ ಅವರು ವಹಿಸಿದ್ದರು. ಆ ಸಂದರ್ಭ ರೋಡ್ಸ್ ಕೂಡ ಆ ತಂಡದ ಕ್ಷೇತ್ರರಕ್ಷಣೆಯ ಕೋಚ್ ಆಗಿದ್ದರು.
‘ನಾಯಕನಾಗಿ ಅವರು ಮುಂದೆ ನಿಂತು ತಂಡವನ್ನು ಮುನ್ನಡೆಸುತ್ತಾರೆ. ಇಲ್ಲಿ ವರೆಗಿನ ಐಪಿಎಲ್ನ ಎಲ್ಲಾ ಆವೃತ್ತಿಗಳಲ್ಲಿ ರಾಹುಲ್ ಅವರು ಯಶಸ್ವಿಯಾಗಿದ್ದಾರೆ, ಅವರು ಆಟದ ಮೇಲೆ ಪ್ರಾಬಲ್ಯ ಹೊಂದಿರುವ ಬ್ಯಾಟರ್ ಆಗಿದ್ದಾರೆ. ನಾಯಕತ್ವದ ಕೊರತೆ ಅವರನ್ನು ಎಂದಿಗೂ ಕಾಡುವ ವಿಷಯವಲ್ಲ‘ ಎಂದರು.
‘ನಾಯಕತ್ವವನ್ನು ನೀಡಿದಾಗ ಅನೇಕ ಶ್ರೇಷ್ಠ ಬ್ಯಾಟರ್ಗಳು ಅದನ್ನು ಸರಿಯಾಗಿ ನಿಭಾಯಿಸುವುದರಲ್ಲಿ ಸೋಲುತ್ತಾರೆ. ಆದರೆ ರಾಹುಲ್ ಆರಂಭಿಕ ಬ್ಯಾಟರ್ ಆಗಿ ಮುನ್ನಡೆಸಿದ್ದಾರೆ. ಅವರ ಆಟ ನೋಡುವುದೇ ಸೊಗಸು ಎಂದು ನಾನು ಭಾವಿಸುತ್ತೇನೆ‘ ಎಂದು ರೋಡ್ಸ್ ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಪಂಜಾಬ್ ವಿರುದ್ಧ ರಾಹುಲ್ ಅವರನ್ನು ಹೊರತು ಪಡಿಸಿ ಇತರ ಲಖನೌ ಜೋಡಿಯ ಸಾಥ್ ಸಿಕ್ಕಿ ಬ್ಯಾಟರ್ಗಳು ಪ್ರಭಾವ ಬೀರಲು ವಿಫಲವಾವಾದರು. ಆದರೂ ರಾಹುಲ್ 19ನೇ ಓವರ್ ವರೆಗೆ ಬ್ಯಾಟಿಂಗ್ ಮಾಡಿದರು. ನಾಯಕನಿಗೆ ಕೊನೆಯ ತನಕಗೆ ಉತ್ತಮ ಜೋಡಿಯ ಸಾಥ್ ಸಿಕ್ಕಿ ಸ್ಕೋರ್ ಹಿಗ್ಗಿಸಬಹುದೆಂದು ಭಾವಿಸಿದೆ‘ ಎಂದು ರೋಡ್ಸ್ ವಿಶ್ಲೇಷಿಸಿದರು.
ರಾಹುಲ್ ಅವರ ಅರ್ಧ ಶತಕದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡ 2 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…
ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…
ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…
ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್ಕೌಂಟರ್ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…
ಮಂಡ್ಯ: ಟೋಲ್ ಬಳಿಯ ಸೈನ್ ಬೋರ್ಡ್ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ…