ಕ್ರೀಡೆ

ಗಂಭೀರ್‌ ಜೊತೆ ಕಿರಿಕ್‌ : ಶ್ರೀಶಾಂತ್‌ ಗೆ ಲೀಗಲ್‌ ನೋಟಿಸ್

ಲೆಜೆಂಡ್ಸ್‌ ಲೀಗ್‌ ಪಂದ್ಯದ ವೇಳೆ ಗೌತಮ್‌ ಗಂಭೀರ್‌ ಅವರ ಜೊತೆ ಕಿರಿಕ್‌ ಮಾಡಿಕೊಂಡಿದ್ದ ಶ್ರೀಶಾಂತ್‌ ಅವರಿಗೆ ಲೆಜೆಂಡ್ಸ್‌ ಲೀಗ್‌ ನ ಆಯೋಜಕರು ಲೀಗಲ್‌ ನೋಟಿಸ್‌ ಮಾಡಿದ್ದಾರೆ.

ಗೌತಮ್‌ ಗಂಭೀರ್‌ ನನ್ನನ್ನು ಫಿಕ್ಸರ್‌ ಅಂತಾ ನಿಂದಿಸಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಶರೀಶಾಂತ್‌ ಗೆ ಇದೀಗ ಲೀಗಲ್‌ ನೋಟಿಸ್‌ ಜಾರಿಯಾಗಿದ್ದು, ವೈರಲ್‌ ಆಗಿರುವ ವಿಡಿಯೋ ಡಿಲಿಟ್‌ ಮಾಡಿದ ನಂತರ ಈ ಪ್ರಕರಣದ ಕುರಿತು ಮಾತು ಕತೆ ನಡೆಸುವುದಾಗಿ ಲೆಜೆಂಡ್ಸ್‌ ಲೀಗ್‌ ನ ಆಯೋಜಕರು ತಿಳಿಸಿದ್ದಾರೆ.

ಲೆಜೆಂಡ್ಸ್‌ ಲೀಗ್‌ ನಲ್ಲಿ ಇಂಡಿಯಾ ಕ್ಯಾಪಿಟಲ್‌ ಹಾಗೂ ಗುಜರಾತ್‌ ಜೈಂಟ್ಸ್‌ ನಡುವಣ ಪಂದ್ಯದ ವೇಳೆ ಗೌತಮ್‌ ಗಂಭೀರ್‌ ಮತ್ತು ಶ್ರೀಶಾಂತ್‌ ನಡುವೆ ವಾಗ್ಯುದ್ಧ ನಡೆದಿತ್ತು. ಇದಾದ ಬಳಿಕ ಶ್ರೀಶಾಣತ್‌ ಅವರು ಗೌತಮ್‌ ಗಂಭೀರ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದರು. ಆ ವಿಡಿಯೋದಲ್ಲಿ ಗೌತಮ್ ಗಂಭೀರ್‌ ಅವರು ನನ್ನನ್ನು ಫಿಕ್ಸರ್‌ ಎಂದು ಕೂಗಿ ಅವಮಾನಿಸಿದರು. ಅಷ್ಟೇ ಅಲ್ಲದೇ ಅಂಪೈರ್‌ ಇರುವಾಗಲೂ ಕೂಡ ಗಂಭೀರ್‌ ಇದೇ ರೀತಿಯಲ್ಲಿ ನಿಂದಿಸಿ ಅವಮಾನಿಸಿದ್ದರು ಎಂದು ಆರೋಪಿಸಿದ್ದರು.

ಇದೀಗ ಶ್ರೀಶಾಂತ್‌ ಗೆ ಲೀಗಲ್‌ ನೋಟಿಸ್‌ ಜಾರಿಯಾಗಿದ್ದು, ಗಂಭೀರ್‌ ವಿರುದ್ಧ ಆರೋಪಿಸಿರುವ ಎಲ್ಲಾ ವಿಡಿಯೋಗಳನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್‌ ಮಾಡುವಂತೆ ಸೂಚನೆ ನೀಡಲಾಗಿದೆ.

lokesh

Recent Posts

ರಾಮನಗರ: ಕಲ್ಲು ಕ್ವಾರಿಯಲ್ಲಿ ದುರಂತ: ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವು

ರಾಮನಗರ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾದಾಪಟ್ಟಣ ಬಳಿ…

28 mins ago

ಕೊಡಗಿನಲ್ಲಿ ಸಾಧಾರಣ ಮಳೆ: ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿರುವ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯಕ್ಕೆ…

38 mins ago

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

5 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

5 hours ago

ಓದುಗರ ಪತ್ರ: ತರಬೇತಿಗೆ ಅರ್ಜಿ ಏಕೆ ಕರೆದಿಲ್ಲ?

ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…

5 hours ago

ಓದುಗರ ಪತ್ರ: ಬಿಡದಿ ಟೌನ್ ಶಿಪ್: ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…

5 hours ago