ಕ್ರೀಡೆ

IPL 2024: ಗುಜರಾತ್‌ ತಂಡದ ನಾಯಕನ ಸ್ಥಾನಕ್ಕೆ ಅಚ್ಚರಿ ಆಯ್ಕೆ!

ನವದೆಹಲಿ : ಮಾಜಿ ಗುಜರಾತ್‌ ತಂಡ ನಾಯಕ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳುವ ನಿರ್ಧಾರದ ನಂತರ ಗುಜರಾತ್ ಟೈಟಾನ್ಸ್ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ ನ (ಐಪಿಎಲ್) 2024 ರ ಸೀಸನ್ ಗೆ ನಾಯಕನಾಗಿ ಶುಭಮನ್‌ ಗಿಲ್ ಅವರನ್ನು ನೇಮಕಮಾಡಿದ್ದಾರೆ.

ಪಾಂಡ್ಯ ಅವರ ನಿರ್ಗಮನ ಖಚಿತವಾದ ನಂತರ, 24 ವರ್ಷದ ಆರಂಭಿಕ ಆಟಗಾರ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಗಿಲ್ ಕಳೆದ ಋತುವಿನಲ್ಲಿ 890 ರನ್ಗಳೊಂದಿಗೆ ಆರೆಂಜ್‌ ಕ್ಯಾಪ್ ಪಡೆದಿದ್ದರು. ಇದು ವಿರಾಟ್ ಕೊಹ್ಲಿ ಅವರ ಐಪಿಎಲ್‌ ದಾಖಲೆಯಾದ 973 ರನ್ ಗಳ ನಂತರದ ಸ್ಥಾನದಲ್ಲಿದೆ.

ಗುಜರಾತ್ ಟೈಟಾನ್ಸ್ ತಂಡದ ಮುಖ್ಯಸ್ಥ ವಿಕ್ರಮ್ ಸೋಲಂಕಿ ಅವರು ಕಳೆದ ಎರಡು ಋತುಗಳಲ್ಲಿ ತಂಡದ ಯಶಸ್ಸಿಗೆ ಪಾಂಡ್ಯ ಕಾರಣ ಎಂದು ಹೊಗಳಿದ್ದಾರೆ. ಗುಜರಾತ್ ಟೈಟಾನ್ಸ್ ಮೊದಲ ನಾಯಕನಾಗಿ, ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಗೆ ಎರಡು ಅದ್ಭುತ ಸೀಸನ್‌ಗಳಲ್ಲಿ ಒಂದು ಬಾರಿ ಚಾಂಪಿಯನ್‌ಶಿಪ್‌ ಮತ್ತೊಂದು ಬಾರಿ ಫೈನಲ್ ನಲ್ಲಿ ಸ್ಥಾನ ಪಡೆಯಲು ಕಾರಣವಾಯಿತು” ಎಂದು ಸೋಲಂಕಿ ತಿಳಿಸಿದ್ದಾರೆ.

ಪಾಂಡ್ಯ ಅವರು ಮುಂಬೈ ಸೇರುವ ಬಯಕೆಯನ್ನು ನಾವು ಗೌರವಿಸುತ್ತೇವೆ ಮತ್ತು ಶುಭ ಆರೈಸುತ್ತೇವೆ. ಹಾಗಯೇ ಗಿಲ್‌ ಸಾಮರ್ಥ್ಯವನ್ನು ನಾವು ಕಳೆದೆರೆಡು ಐಪಿಎಲ್‌ ಋತುವಿನಲ್ಲಿ ಗಿಲ್‌ ನೊಂದಿಗೆ ನಿಖಟವಾದ ಸಂಬಂಧ ಹೊಂದಿದ್ದೇವೆ. ಗಿಲ್‌ ಪ್ರಬುದ್ಧತೆ ತಂಡಕ್ಕೆ ಸಹಕರಿಸಲಿದೆ.  ಎಂದು ಸೋಲಂಕಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಅವರ ಪರಿಪಕ್ವತೆ ಮತ್ತು ಕೌಶಲ್ಯವು ಮೈದಾನದಲ್ಲಿನ ಅವರ ಪ್ರದರ್ಶನದಲ್ಲಿ ಸ್ಪಷ್ಟವಾಗಿದೆ. ಶುಭಮನ್ ಅವರಂತಹ ಯುವ ಆಟಗಾರ, ನಾಯಕನ ಚುಕ್ಕಾಣಿ ಹಿಡಿದಿದ್ದಾರೆ. ಅವರೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ” ಎಂದು ಜಿಟಿ ಥಿಂಕ್-ಟ್ಯಾಂಕ್ ಮುಖ್ಯಸ್ಥರು ಹೇಳಿದ್ದಾರೆ.

ಗಲ್‌ ಹೇಳಿದ್ದೇನು? : ಗುಜರಾತ್ ಟೈಟಾನ್ಸ್ ನ ನಾಯಕತ್ವವನ್ನು ವಹಿಸಿಕೊಳ್ಳಲು ನನಗೆ ಸಂತೋಷವಾಗಿದೆ ಮತ್ತು ಅಂತಹ ಉತ್ತಮ ತಂಡವನ್ನು ಮುನ್ನಡೆಸಲು ನನ್ನ ಮೇಲಿನ ನಂಬಿಕೆಗಾಗಿ ಫ್ರಾಂಚೈಸಿಗೆ ಧನ್ಯವಾದ ಹೇಳುತ್ತೇನೆ. ನಾವು ಎರಡು ಅಸಾಧಾರಣ ಋತುಗಳನ್ನು ಹೊಂದಿದ್ದೇವೆ ಮತ್ತು ನಮ್ಮ ಉತ್ತೇಜಕ ಬ್ಯಾಂಡ್ ಕ್ರಿಕೆಟ್ರೊಂದಿಗೆ ತಂಡವನ್ನು ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ.,” ಗಿಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

andolanait

Recent Posts

ಜ.5ರಿಂದ ಉದ್ಯೋಗ ಖಾತ್ರಿ ಯೋಜನೆ ಬಚಾವ್‌ ಆಂದೋಲನ : ಸಿಎಂ

ಹೊಸದಿಲ್ಲಿ : ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ_ ಜಿ ರಾಮ್ _ ಜಿ ಎಂದು…

33 mins ago

ಇನ್ಮುಂದೆ ಭೀಮನ ಹತ್ತಿರ ಹೋಗಿ ವೀಡಿಯೋ, ಫೋಟೋ ತೆಗೆದರೆ ಬೀಳುತ್ತೆ ಕೇಸ್‌

ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಿಗೆ ಕಾಡಾನೆ ಭೀಮು ಎಂಟ್ರಿ ಕೊಡುತ್ತಿದೆ. ಶಾಂತ ಸ್ವಭಾವದ ಭೀಮನನ್ನು ನೋಡಲು ಜನರು…

2 hours ago

ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು

ಬೆಂಗಳೂರು: ಇಲ್ಲಿನ ಯಲಹಂಕ, ಫಕೀರ್‌ ಕಾಲೋನಿ ಹಾಗೂ ವಸೀಮ್‌ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳ ತೆರವು ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಬುಲ್ಡೋಜರ್‌…

2 hours ago

ಪೈರಸಿ ಬಗ್ಗೆ ಮತ್ತೊಮ್ಮೆ ಖಡಕ್‌ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್‌

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾರ್ಕ್‌ ಚಿತ್ರಕ್ಕೂ ಪೈರಸಿ…

3 hours ago

ಜೆಡಿಎಸ್‌ ಜೊತೆ ಮೈತ್ರಿ ವಿಚಾರ: ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದ ವಿಜಯೇಂದ್ರ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಕಷ್ಟ ಎಂದು ಮಾಜಿ ಎಚ್‌ಡಿಡಿ ಹೇಳಿಕೆ ಕುರಿತು ಬಿಜೆಪಿ…

3 hours ago

ಹೆಸರುಘಟ್ಟ ನೈಸರ್ಗಿಕ ಹುಲ್ಲುಗಾವಲು ಸಂರಕ್ಷಣೆಗೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…

5 hours ago