ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಘಟಿತ ಬ್ಯಾಟಿಂಗ್, ಬೌಲಿಂಗ್ ದಾಳಿಗೆ ನಲುಗಿದ ಸನ್ರೈಸರ್ಸ್ ಹೈದರಾಬಾದ್ ತಂಡ 78 ರನ್ಗಳ ಅಂತರದ ಹೀನಾಯ ಸೋಲು ಕಂಡಿದೆ.
ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಲೀಗ್ 46ನೇ ಪಂದ್ಯದಲ್ಲಿ ಸಿಎಸ್ಕೆ ಮತ್ತು ಎಸ್ಆರ್ಎಚ್ ತಂಡಗಳು ಮುಖಾಮುಖಿಯಾಗಿದ್ದವು. ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ, ನಾಯಕ ಋತುರಾಜ್ ಅವರ ಬ್ಯಾಟಿಂಗ್ ಬಲದಿಂದ ತವರಿನಂಗಳದಲ್ಲಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ, 213ರನ್ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಎಸ್ಆರ್ಎಚ್ 18.5 ಓವರ್ನಲ್ಲಿ ಆಲ್ಔಟ್ ಆಗುವ ಮೂಲಕ 134 ರನ್ ಗಳಿಸಲಷ್ಟೆ ಶಕ್ತರಾಯಿತು.
ಸಿಎಸ್ಕೆ ಇನ್ನಿಂಗ್ಸ್: ಪೇ ಬ್ಯಾಕ್ ವೀಕ್ನಲ್ಲಿ ಸಿಎಸ್ಕೆ, ಎಸ್ಆರ್ಎಚ್ ವಿರುದ್ಧ ಬೌನ್ಸ್ ಬ್ಯಾಕ್ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಬಂದ ರಹಾನೆ 9 ರನ್ ಬಾರಿಸಿ ಬಂದ ವೇಗದಲ್ಲೇ ಪೆವಿಲಿಯನ್ ಸೇರಿದರು. ಬಳಿಕ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಡೇರಿಯಲ್ ಮಿಚೆಲ್ ಶತಕದ ಜತೆಯಾಟ ನೀಡಿ ಸೂಪರ್ ಕಿಂಗ್ಸ್ಗೆ ಚೇತರಿಕೆ ನೀಡಿದರು.
ಡೇರಿಯಲ್ ಮಿಚೆಲ್ 52(32)ರನ್ ಗಳಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಆದರೆ ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ನಾಯಕ ಋತುರಾಜ್ ಎರಡು ರನ್ಗಳ ಅಂತರದಿಂದ ಶತಕ ವಂಚಿತರಾದರು. ಇವರು 54 ಎಸೆತ ಎದುರಿಸಿ 10ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 98 ರನ್ ಚಚ್ಚಿ ಓಟಾದರು. ಉಳಿದಂತೆ ಔಟಾಗದೆ ಶಿವಂ ದುಬೆ 39(20) ಹಾಗೂ ಧೋನಿ 5(2) ರನ್ ಬಾರಿಸಿದರು.
ಹೈದರಬಾದ್ ಪರ ಭುವನೇಶ್ವರ್, ನಟರಾಜನ್ ಮತು ಉನಾದ್ಕಟ್ ತಲಾ ಒಂದೊಂದು ವಿಕೆಟ್ ಪಡೆದು ಗಮನ ಸೆಳೆದರು.
ಎಸ್ಆರ್ಎಚ್ ಇನ್ನಿಂಗ್ಸ್: ಸಿಎಸ್ಕೆ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಹೈದರಬಾದ್ಗೆ ಉತ್ತಮ ಆರಂಭ ಸಿಗಲಿಲ್ಲ. ಪವರ್ ಪ್ಲೇ ನಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಎಸ್ಆರ್ಎಚ್ ಸಂಕಷ್ಟಕ್ಕೆ ಸಿಲುಕಿತು. ಆರಂಭಿಕರಾಗಿ ಬಂದ ಟ್ರಾವಿಸ್ ಹೆಡ್ 13(7), ಅಭಿಷೇಕ್ ಶರ್ಮಾ 15(9) ರನ್ ಕಲೆಹಾಕಿ ಬೇಗನೇ ಪೆವಿಲಿಯನ್ ಸೇರಿದರು. ಅನ್ಮೋಲ್ಪ್ರೀತ್ ಸಿಂಗ್ ಶೂನ್ಯಕ್ಕೆ ಔಟಾದರು. ಎಸ್ಆರ್ಎಚ್ ಪವರ್ ಪ್ಲೇನಲ್ಲಿ 53ರನ್ಗೆ ಪ್ರಮುಖ 3ವಿಕೆಟ್ ಕಳೆದುಕೊಂಡು ಮುಗ್ಗರಿಸಿತು. ಬಳಿಕ ಬಂದ ಮಾರ್ಕ್ರಂ 32(26) ರನ್ ಬಾರಿಸಿದರು. ಈ ಇನ್ನಿಂಗ್ಸ್ನಲ್ಲಿ ಮಾರ್ಕ್ರಂ ಗಳಿಸಿದ್ದೇ ಎಸ್ಆರ್ಎಚ್ ಪರವಾಗಿ ಗರಿಷ್ಠ ರನ್ ಆಗಿತ್ತು.
ಉಳಿದಂತೆ ನಿತೀಶ್ ರೆಡ್ಡಿ 15(15), ಕ್ಲಾಸೆನ್ 20(21), ಅಬ್ದುಲ್ ಸಮದ್ 19(18), ಷಹಬಾಜ್ ಅಹ್ಮದ್ 7(5), ನಾಯಕ ಕಮಿನ್ಸ್ 5(7) ಭುವನೇಶ್ವರ್ ಕುಮಾರ್ ಔಟಾಗದೇ 4(3) ಮತ್ತು ಜೈದೇವ್ ಉನಾದ್ಕಟ್ 1(2) ರನ್ ಬಾರಿಸಿ ಸಿಎಸ್ಕೆ ವಿರುದ್ಧ ಮಂಡಿಯೂರಿತು.
ಸಿಎಸ್ಕೆ ಪರ ತುಷಾರ್ ದೇಶ್ಪಾಂಡೆ 4, ಮತೀಶ ಪತಿರಣ ಹಾಗೂ ಮುಸ್ತಿಫಿಜುರ್ ತಲಾ ಎರಡೆರೆಡು ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…
ಬೆಳಗಾವಿ : ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ…
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಫ್ರಾನ್ಸ್ ದೇಶದ ರಾಯಭಾರಿಗಳ ನಿಯೋಗ ಭೇಟಿ ನೀಡಿ ಫ್ರೆಂಚ್ ಭಾಷೆ ವಿಭಾಗವನ್ನು ಮರು ಆರಂಭಿಸುವ…
ಬೆಳಗಾವಿ(ಸುವರ್ಣ ವಿಧಾನ ಸೌಧ) : ಗ್ಯಾರಂಟಿ ಯೋಜನೆಗಳ ಮೂಲಕ ನಾಗರಿಕರಿಗೆ ನೇರವಾಗಿ ಹಣ ವರ್ಗಾವಣೆಯಿಂದ ಅವರ ಆರ್ಥಿಕ ಬದುಕು ಬಹಳಷ್ಟು…