ಕ್ರೀಡೆ

ನಂ.1 ಸ್ಥಾನ ಕಳೆದುಕೊಂಡ ಭಾರತ : ಅಗ್ರಸ್ಥಾನಕ್ಕೇರಿದ ಪಾಕಿಸ್ತಾನ

ಪೋರ್ಟ್ ಆಫ್ ಸ್ಪೇನ್ : 2023-25ನೇ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಭಾಗವಾಗಿ ಭಾರತ-ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ 2ನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇದರಿಂದ ಭಾರತ 1-0 ಅಂತರದಲ್ಲಿ ಗೆಲುವು ಸಾಧಿಸಿದರೂ ವೆಸ್ಟ್‌ ಇಂಡೀಸ್‌ ತಂಡವನ್ನು ತವರಿನಲ್ಲೇ ವೈಟ್‌ವಾಶ್‌ ಮಾಡುವ ಕನಸು ಭಗ್ನಗೊಂಡಿತು. ಅಲ್ಲದೇ ವೆಸ್ಟ್‌ ಇಂಡೀಸ್‌ ವಿರುದ್ಧ ಕ್ಲೀನ್‌ ಸ್ವೀಪ್‌ ಮಾಡುವಲ್ಲಿ ಮಳೆ ಅಡ್ಡಿಯಾದ ಕಾರಣ ಪೂರ್ಣ ಪಾಯಿಂಟ್ಸ್‌ ಪಡೆಯುವ ಅವಕಾಶ ಕಳೆದುಕೊಂಡಿತು.

ವಿಂಡೀಸ್‌ ದ್ವಿತೀಯ ಸರಣಿ ಡ್ರಾನಲ್ಲಿ ಅಂತ್ಯಗೊಂಡ ಬಳಿಕ 24 ಅಂಕ ಪಡೆಯಬೇಕಿದ್ದ ಭಾರತ ತಂಡಕ್ಕೆ 16 ಅಂಕವಷ್ಟೇ ಲಭ್ಯವಾಯಿತು. ಇದರಿಂದ ಪಿಸಿಟಿ (Percentage Of Points Earned -ಗೆದ್ದ ಶೇಕಡಾವಾರು ಅಂಕ) 66.67ಕ್ಕೆ ಕುಸಿದು 2ನೇ ಸ್ಥಾನಕ್ಕೆ ಇಳಿಯಿತು. ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆದ್ದ ನಂತರ 12 ಅಂಕ ಪಡೆದ ಪಾಕಿಸ್ತಾನ 100 ಪಿಸಿಟಿಯೊಂದಿಗೆ ಅಗ್ರಸ್ಥಾನಕ್ಕೇರಿತು. ಹಾಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಆಗಿರುವ ಆಸ್ಟ್ರೇಲಿಯಾ 54.17 ಅಂಕ ಪಡೆದು 3ನೇ ಸ್ಥಾನ, 29.17 ಅಂಕ ಗಳಿಸಿರುವ ಇಂಗ್ಲೆಂಡ್‌ 4ನೇ ಸ್ಥಾನ, 16.67 ಅಂಕ ಪಡೆದ ವೆಸ್ಟ್‌ ಇಂಡೀಸ್‌ 5ನೇ ಸ್ಥಾನದಲ್ಲಿವೆ.
ವಿಶ್ವಕಪ್‌ ಟೂರ್ನಿ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್‌ ಸರಣಿಯನ್ನ ಆಡಲಿರುವ ಭಾರತ, ನಂತರ ಇಂಗ್ಲೆಂಡ್‌ ವಿರುದ್ಧ ಸ್ವದೇಶಿ ಸರಣಿಯನ್ನಾಡಲಿದೆ.

ವಿಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 141 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ 2ನೇ ಟೆಸ್ಟ್‌ ನಲ್ಲೂ ಯಶಸ್ವಿ ಪ್ರದರ್ಶನವನ್ನೇ ನೀಡಿತ್ತು. 4ನೇ ದಿನದಾಟದಲ್ಲಿ ಸ್ಫೋಟಕ ಆರಂಭ ಪಡೆದ ಟೀಂ ಇಂಡಿಯಾ 181 ರನ್‌ ಗಳಿಸುವ ಮೂಲಕ ವೆಸ್ಟ್‌ ಇಂಡೀಸ್‌ಗೆ 365 ರನ್‌ಗಳ ಗುರಿ ನೀಡಿತ್ತು. ಆದ್ರೆ 4ನೇ ದಿನದ ಅಂತ್ಯಕ್ಕೆ 76 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ 5ನೇ ದಿನದಲ್ಲಿ ಭಾರತದ ಎದುರು ವೈಟ್‌ವಾಶ್‌ ಆಗುವ ಸಾಧ್ಯತೆ ಹೊಂದಿತ್ತು. ಮಳೆ ಹಿನ್ನೆಲೆಯಲ್ಲಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ಸಂಕ್ಷಿಪ್ತ ಸ್ಕೋರ್‌

ಭಾರತ : ಮೊದಲ ಟೆಸ್ಟ್‌ ಮೊದಲ ಇನ್ನಿಂಗ್ಸ್‌ – 421/5 ಡಿಕ್ಲೇರ್‌
ವೆಸ್ಟ್‌ ಇಂಡೀಸ್‌ : ಮೊದಲ ಟೆಸ್ಟ್‌ ಮೊದಲ ಇನ್ನಿಂಗ್ಸ್‌ – 150/10
ವೆಸ್ಟ್‌ ಇಂಡೀಸ್‌ ಮೊದಲ ಟೆಸ್ಟ್‌ 2ನೇ ಇನ್ನಿಂಗ್ಸ್‌ – 130

ಭಾರತ : 2ನೇ ಟೆಸ್ಟ್‌‌ ಮೊದಲ ಇನ್ನಿಂಗ್ಸ್‌ – 438
ವೆಸ್ಟ್‌ ಇಂಡೀಸ್: 2ನೇ ಟೆಸ್ಟ್‌ ಮೊದಲ ಇನ್ನಿಂಗ್ಸ್‌ – 255
ಭಾರತ: 2ನೇ ಟೆಸ್ಟ್‌ 2ನೇ ಇನ್ನಿಂಗ್ಸ್‌ – 181/2 ಡಿಕ್ಲೇರ್‌
ವೆಸ್ಟ್‌ ಇಂಡೀಸ್‌ 2ನೇ ಟೆಸ್ಟ್‌ ಮೊದಲ ಇನ್ನಿಂಗ್ಸ್‌ – 76/2 ಡ್ರಾ

lokesh

Recent Posts

ತಾಪಮಾನ ಇಳಿಕೆ : ಬೆಂಗಳೂರಲ್ಲಿ ಚಳಿ ಹೆಚ್ಚಳ

ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…

6 hours ago

ಸಿಎ ಸೈಟ್‌ ಕಟ್ಟಡ ನಿರ್ಮಾಣ ಕಾಲಮಿತಿ ; 3 ವರ್ಷದಿಂದ 5 ವರ್ಷ ಹೆಚ್ಚಳದ ಭರವಸೆ

ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…

6 hours ago

ಮೈಸೂರು : ಆನ್‌ಲೈನ್‌ನಲ್ಲಿ ವೈದ್ಯರೊಬ್ಬರಿಗೆ 82 ಲಕ್ಷ ರೂ. ವಂಚನೆ

ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…

6 hours ago

SC/ST ದೌರ್ಜನ್ಯ ತಡೆ : ನಾಗರಿಕ ಹಕ್ಕು ಜಾರಿ ನೂತನ ಠಾಣೆ ಮೈಸೂರಲ್ಲಿ ಕಾರ್ಯರಂಭ

ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…

7 hours ago

ಕೆಪಿಎ-ಮಹಿಳಾ-ಮಕ್ಕಳ ಅಭಿವೃದ್ಧಿ ಸಂಸ್ಥೆ ನಡುವೆ ಒಡಂಬಡಿಕೆ

ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…

7 hours ago

ಮೈಸೂರಲ್ಲಿ ಎಸ್.ಎಲ್.ಬೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಘೋಷಣೆ

ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

7 hours ago