ದುಬೈ: ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ ಮಹತ್ತರ ಬದಲಾವಣೆಗಳನ್ನು ಜಾರಿಗೆ ತಂದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಶುಕ್ರವಾರ ದುಬೈನಲ್ಲಿ ನಡೆದ ವಾರ್ಷಿಕ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅವುಗಳಲ್ಲಿ ಒಂದಾದ ವಿಶ್ವಕಪ್ ಪಂದ್ಯಾವಳಿಗೆ ಜಂಟಿ ವಿಜೇತರನ್ನು ಘೋಷಿಸುವುದನ್ನು ತಪ್ಪಿಸಲು ಸೆಮಿಫೈನಲ್ ಮತ್ತು ಫೈನಲ್ಗೆ ಮೀಸಲು ದಿನಗಳನ್ನು ಇರಿಸಲು ನಿರ್ಧರಿಸಿದೆ.
ಐಸಿಸಿ ಸಭೆಯಲ್ಲಿ ಮಹತ್ವದ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜೊತೆಗೆ ೨೦೨೪ರಿಂದ ಪ್ರಾರಂಭವಾಗುವ ಟಿ-೨೦ ವಿಶ್ವಕಪ್ ಸೀಮಿತ-ಓವರ್ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಓವರ್ಗಳ ನಡುವೆ ಸ್ಟಾಪ್-ಕ್ಲಾಕ್ ಅನ್ನು ಬಳಸುವುದನ್ನು ಕಡ್ಡಾಯಗೊಳಿಸಿದೆ.
ಡಿಸೆಂಬರ್ ೨೦೨೩ರಲ್ಲಿ ಪುರುಷರ ಸೀಮಿತ-ಓವರ್ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಐಸಿಸಿ ಸ್ಟಾಪ್ ಕ್ಲಾಕ್ ನಿಯಮವನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಿತ್ತು. ಈ ನಿಯಮದಿಂದಾಗಿ ಪ್ರತಿ ಪಂದ್ಯಕ್ಕೆ ಸರಿಸುಮಾರು ೨೦ ನಿಮಿಷಗಳನ್ನು ಉಳಿಸಿದಂತಾಗುತ್ತದೆ ಎಂದು ದತ್ತಾಂಶಗಳು ತೋರಿಸಿದೆ.
ಇದೀಗ ಈ ಸ್ಟಾಪ್ ಕ್ಲಾಕ್ ನಿಯಮವನ್ನು ಐಸಿಸಿ ಅಧಿಕೃತವಾಗಿ ಜಾರಿಗೆ ತಂದಿದ್ದು, ಟಿ೨೦ ವಿಶ್ವಕಪ್ನಿಂದಲೇ ಇದು ಜಾರಿಯಾಗಲಿದೆ.
ಈ ನಿಯಮಕ್ಕೆ ಕೆಲವು ವಿನಾಯಿತಿಗಳಿದ್ದು, ಗಡಿಯಾರವು ಮೊದಲೇ ಪ್ರಾರಂಭಿಸಿದ್ದರೆ ಕೆಲವು ಸಂದರ್ಭಗಳಲ್ಲಿ ರದ್ದುಗೊಳಿಸಬಹುದು. ಅವುಗಳೆಂದರೆ ಓವರ್ನ ಸಮಯದಲ್ಲಿ ಹೊಸ ಬ್ಯಾಟರ್ ಕ್ರೀಸ್ಗೆ ಬಂದಾಗ, ಪಾನೀಯಗಳ ವಿರಾಮದ ವೇಳೆ, ಬ್ಯಾಟರ್ ಅಥವಾ ಫೀಲ್ಡರ್ಗೆ ಗಾಯವಾದ ವೇಳೆ ಕ್ರೀಸ್ಗೆ ವೈದ್ಯರು ಬಂದಾಗ, ಅಂಪೈರ್ಗಳು ಅಧಿಕೃತಗೊಳಿಸಿದಾಗ ಮತ್ತು ಫೀಲ್ಡಿಂಗ್ ತಂಡದ ನಿಯಂತ್ರಣಕ್ಕೆ ಮೀರಿದ ಯಾವುದೇ ಸ್ಥಿತಿಯಾದರೆ ಅಂದರೆ ಚೆಂಡು ಬದಲಾವಣೆಯಂತಹ ಸಮಯದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ.
ಸ್ಟಾಪ್ ಕ್ಲಾಕ್ ಹೇಗೆ ಕಾರ್ಯ ನಿರ್ವಹಿಸುತ್ತದೆ: ಸ್ಟಾಪ್ ಕ್ಲಾಕ್ ನಿಯಮದ ಪ್ರಕಾರ, ಫೀಲ್ಡಿಂಗ್ ತಂಡವು ಹಿಂದಿನ ಓವರ್ನ ಅಂತ್ಯದ ನಂತರ ೬೦ ಸೆಕೆಂಡುಗಳಲ್ಲಿ ಹೊಸ ಓವರ್ ಅನ್ನು ಪ್ರಾರಂಭಿಸಬೇಕು. ಇದು ೬೦ ಸೆಕೆಂಡ್ನಿಂದ ಶೂನ್ಯಕ್ಕೆ ಎಣಿಸುವ ಎಲೆಕ್ಟ್ರಾನಿಕ್ ಗಡಿಯಾರವನ್ನು ಓವರ್ ಬಳಿಕ ಡಿಸ್ಪ್ಲೇ ಮೇಲೆ ಹಾಕಲಾಗುತ್ತದೆ. ಗಡಿಯಾರದ ಪ್ರಾರಂಭವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಮೂರನೇ ಅಂಪೈರ್ ಹೊಂದಿರುತ್ತಾರೆ. ಹಿಂದಿನ ಓವರ್ನ ಅಂತ್ಯದ ನಂತರ ನಿಗದಿತ ೬೦ ಸೆಕೆಂಡ್ಗಳ ಒಳಗೆ ತಮ್ಮ ಮುಂದಿನ ಓವರ್ನ ಮೊದಲ ಎಸೆತವನ್ನು ಬೌಲ್ ಮಾಡಲು ಸಿದ್ಧರಾಗಬೇಕಾಗುತ್ತದೆ.
ಒಂದು ವೇಳೆ ೬೦ ಸೆಕೆಂಡ್ ಒಳಗೆ ಬೌಲಿಂಗ್ ಮಾಡದಿದ್ದಲ್ಲಿ ಪ್ರತಿ ವಿಳಂಬಕ್ಕೂ ಸಹ ಐದು ರನ್ಗಳ ಪೆನಾಲ್ಟಿ ಹೊರೆ ಬೀಳಲಿದೆ. ಈ ಸ್ಟಾಪ್ ಕ್ಲಾಕ್ ನಿಯಮ ಟಿ೨೦ ವಿಶ್ವಕಪ್ನಿಂದ ಜಾರಿಗೆ ಬರಲಿದೆ. ಅಲ್ಲದೇ ಈ ನಿಯಮವನ್ನು ಶಾಶ್ವತಗೊಳಿಸಲಾಗಿದ್ದು, ಮುಂಬರುವ ಟಿ-೨೦ ಮತ್ತು ಏಕದಿನ ಮಾದರಿ ಕ್ರಿಕೆಟ್ಗೆ ಇದು ಅನ್ವಯವಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ಬೆಂಗಳೂರು : ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ…
ಆನೇಕಲ್ ಇಂಡ್ಲವಾಡಿಯ ಸೂರ್ಯನಗರದಲ್ಲಿ ನಿರ್ಮಾಣ ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ,…
ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಬವಾಗುವ ನಿರೀಕ್ಷೆ ಬೆಂಗಳೂರು : ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಈ ಬಾರಿಯ ಮಳೆಗಾಲದ…
ನವದೆಹಲಿ : ಬದಲಾವಣೆ ಬಯಸುತ್ತಿರುವ ಯುವ ಮನಸ್ಸುಗಳು ಕಾಕ್ರೋಚ್ ಜನತಾ ಪಾರ್ಟಿಯ ಮೂಲಕ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿವೆ. ಈ…
ಕಲಬುರ್ಗಿ: ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ…
ಬೆಂಗಳೂರು: ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…